ಕಗ್ಗಂಟಾಗಿದ್ದ ಮಂಗಳೂರಿನ 3 ಕ್ಷೇತ್ರಗಳಿಗೆ ಬಿಜೆಪಿ ಅಭ್ಯರ್ಥಿಗಳು ಘೋಷಣೆ
ಮಂಗಳೂರು ಏಪ್ರಿಲ್ 20: ರಾಜ್ಯ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಬಿಜೆಪಿ 58ಅಭ್ಯರ್ಥಿಗಳ ಮೂರನೇ ಪಟ್ಟಿಯನ್ನು ಇಂದು ಬಿಡುಗಡೆ ಮಾಡಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಜೆಪಿಗೆ ಕಗ್ಗಂಟಾಗಿ ಉಳಿದಿದ್ದ ಮಂಗಳೂರು, ಮಂಗಳೂರು ಉತ್ತರ, ಮಂಗಳೂರು ದಕ್ಷಿಣ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡಲಾಗಿದೆ.
ಅತ್ಯಂತ
ಕುತೂಹಲ
ಕೆರಳಿಸಿದ್ದ
ಮಂಗಳೂರು
ದಕ್ಷಿಣ
ಕ್ಷೇತ್ರದ
ಅಭ್ಯರ್ಥಿಯಾಗಿ
ಬಿಜೆಪಿ
ಯುವ
ಮುಖಂಡ
ಜಿಎಸ್
ಬಿ
ಸಮುದಾಯದ
ವೇದವ್ಯಾಸ್
ಕಾಮತ್
ಅವರನ್ನು
ಆಯ್ಕೆ
ಮಾಡಿದೆ.
ಈ
ಕ್ಷೇತ್ರದಿಂದ
ಉದ್ಯಮಿ
ಬದ್ರಿನಾಥ್
ಕಾಮತ್
,
ಮಾಜಿ
ಶಾಸಕ
ಯೋಗೀಶ್
ಭಟ್
ಮತ್ತಿತರರು
ಟಿಕೆಟ್
ಆಕಾಂಕ್ಷಿಗಳಾಗಿದ್ದರು.
ಟಿಕೆಟ್
ಗಾಗಿ
ಈ
ಆಕಾಂಕ್ಷಿಗಳ
ನಡುವೆ
ಜಿದ್ದಾಜಿದ್ದಿಯ
ಸ್ಪರ್ಧೆ
ಏರ್ಪಟ್ಟಿತ್ತು
.
ಆದರೆ
ಎಲ್ಲಾ
ಗೊಂದಲಗಳಿಗೆ
ತೆರೆಯೆಳೆದ
ಬಿಜೆಪಿ
ವರಿಷ್ಠರು
ವೇದವ್ಯಾಸ್
ಕಾಮತ್
ಅವರಿಗೆ
ಟಿಕೆಟ್
ನೀಡಿದ್ದಾರೆ.
ಈ ನಡುವೆ ಇನ್ನೊಂದು ಕುತೂಹಲ ಕೆರಳಿಸಿದ್ದ ಮಂಗಳೂರು ಉತ್ತರ ಕ್ಷೇತ್ರಕ್ಕೆ ಬಿಜೆಪಿ ಯುವ ಮುಖಂಡ ಬಂಟ ಸಮುದಾಯದ ಡಾ. ಭರತ್ ಶೆಟ್ಟಿ ಅವರಿಗೆ ಟಿಕೆಟ್ ನೀಡಿದೆ. ಈ ಕ್ಷೇತ್ರದಿಂದ ಮಾಜಿ ಸಚಿವ ಕೃಷ್ಣ ಜೆ. ಪಾಲೇಮಾರ್, ಸತ್ಯಜಿತ್ ಸುರತ್ಕಲ್ , ರಾಮಚಂದ್ರ ಬೈಕಂಪಾಡಿ ಟಿಕೆಟ್ ರೇಸ್ ನಲ್ಲಿದ್ದರು .
ಮಾಜಿ ಸಚಿವ ಕೃಷ್ಣ ಜೆ. ಪಾಲೇಮಾರ್ ಅವರು ಟಿಕೆಟ್ ಗಾಗಿ ಕೊನೆಯ ಹಂತದವರೆಗೂ ಪ್ರಯತ್ನ ನಡೆಸಿದ್ದರು. ಆದರೆ ಬಿಜೆಪಿ ವರಿಷ್ಠರು ಡಾ. ಭರತ್ ಶೆಟ್ಟಿ ಅವರಿಗೆ ಟಿಕೆಟ್ ನೀಡಿ ಸ್ಪರ್ಧೆಗೆ ಇಳಿಸಿದ್ದಾರೆ.
ಪಾಲೇಮಾರ್ ಗೆ ಟಿಕೆಟ್ ತಪ್ಪಲು ಕಾಂಗ್ರೆಸ್ ಮುಖಂಡ ಹಾಗು ಮಾಜಿ ಶಾಸಕ ವಿಜಯ್ ಕುಮಾರ್ ಶೆಟ್ಟಿ ಕಾರಣ ಎಂದು ಹೇಳಲಾಗುತ್ತಿದೆ. ವಿಜಯ್ ಕುಮಾರ್ ಶೆಟ್ಟಿ ಶೀಘ್ರದಲ್ಲೇ ಬಿಜೆಪಿ ಸೇರ್ಪಡೆಗೊಳ್ಳಲಿದ್ದಾರೆ. ಈ ಹಿನ್ನೆಲೆಯಲ್ಲಿ ಪಾಲೇಮಾರ್ ಅವರ ಬದ್ದ ವೈರಿಯಾದ ವಿಜಯ್ ಕುಮಾರ್ ಶೆಟ್ಟಿ ಪಾಲೇಮಾರ್ ಅವರಿಗೆ ಮಂಗಳೂರು ಉತ್ತರ ಕ್ಷೇತ್ರದಿಂದ ಸ್ಪರ್ಧಿಸಲು ಟಿಕೆಟ್ ನೀಡಬಾರದೆಂದು ಕಂಡೀಷನ್ ಹಾಕಿದ್ದರು ಎಂದು ಮೂಲಗಳು ತಿಳಿಸಿವೆ.
ಕಾಂಗ್ರೆಸ್ ನ ಮಾಜಿ ಶಾಸಕ ವಿಜಯ್ ಕುಮಾರ್ ಶೆಟ್ಟಿ ಬಿಜೆಪಿ ಸೇರಿದರೆ ಮಂಗಳೂರು ಉತ್ತರ ಕ್ಷೆತ್ರದಲ್ಲಿ ಬಿಜೆಪಿ ಗೆಲುವು ಸುಲಭವಾಗಲಿದೆ ಎನ್ನುವ ಲೆಕ್ಕಾಚಾರ ಬಿಜೆಪಿ ವರಿಷ್ಠರದ್ದಾಗಿದೆ. ಈ ಹಿನ್ನಲೆಯಲ್ಲಿ ಮಾಜಿ ಸಚಿವ ಕೃಷ್ಣ ಜೆ. ಪಾಲೇಮಾರ್ ಟಿಕೆಟ್ ವಂಚಿತರಾಗಿದ್ದಾರೆ ಎಂದು ಹೇಳಲಾಗಿದೆ.
ಮಂಗಳೂರು ವಿಧಾನ ಸಭಾ ಕ್ಷೇತ್ರ ದಿಂದ ಕಾಂಗ್ರೆಸ್ ನ ಯು.ಟಿ ಖಾದರ್ ಎದುರು ಬಿಜೆಪಿ ಸಂತೋಷ್ ಕುಮಾರ್ ರೈ ಅವರನ್ನು ಬಿಜೆಪಿ ಕಣಕ್ಕಿಳಿಸಿದೆ. ಇಲ್ಲಿ ಸತೀಶ್ ಕುಂಪಲ, ರಹೀಮ್ ಉಚ್ಚಿಲ್, ಚಂದ್ರಹಾಸ್ ಉಳ್ಳಾಲ್, ರವೀಂದ್ರ ಶೆಟ್ಟಿ ಕೂಡ ಬಿಜೆಪಿ ಟಿಕೆಟ್ ಬಯಸಿದ್ದರು.