ವಿದೇಶದಿಂದ ಊರಿಗೆ ಬಂದ ಯುವಕನ ಬಾಳಲ್ಲಿ ಸಾವಿನಾಟ..!
ಮಂಗಳೂರು, ಜನವರಿ. 02 : ಆತ ಎರಡು ದಿನಗಳ ಹಿಂದಷ್ಟೇ ವಿದೇಶದಿಂದ ಊರಿಗೆ ಬಂದಿದ್ದ. ಮನದಲ್ಲಿ ನೂರಾರು ಕನಸುಗಳಿದ್ದವು. ಆದರೆ, ವಿಧಿಯಾಟ ಬೇರೆಯಾಗಿತ್ತು.
ಹೌದು. ಭಾನುವಾರ ಸಂಜೆ ಬೆಳ್ತಂಗಡಿ ತಾಲೂಕಿನ ಗೇರುಕಟ್ಟೆ ಸಮೀಪ ಇರುವ ಕೊರಂಜ ಶಾಲೆಯ ಬಳಿ ಜೀಪು ಮತ್ತು ಬೈಕ್ ನಡುವೆ ನಡೆದ ಅಪಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲಿಯೇ ಸಾವನಪ್ಪಿದ್ದಾನೆ.
ಮೃತ ಯುವಕನನ್ನ ಬಂಟ್ವಾಳ ತಾಲೂಕಿನ ಪೆರ್ನೆ ಬಿಳಿಯೂರು ಬಾನೊಟ್ಟು ನಿವಾಸಿ ಅಬೂಬಕ್ಕರ್ ಅವರ ಪುತ್ರ ಸರಫುದ್ಧೀನ್ (26) ಎಂದು ಗುರುತಿಸಲಾಗಿದೆ.
ಘಟನೆ ಹೇಗೆ ನಡೆಯಿತು..? ಗುರುವಾಯನಕೆರೆಯಿಂದ ಉಪ್ಪಿನಂಗಡಿ ಕಡೆಗೆ ಸರಫುದ್ದೀನ್ ತಮ್ಮ ಬೈಕಿನಲ್ಲಿ ಬರುತ್ತಿದ್ದ ವೇಳೆ ಎದುರಿನಿಂದ ಬಂದ ಜೀಪು ಅತಿಯಾದ ವೇಗದಲ್ಲಿ ಬಂದು ಬೈಕಿಗೆ ಡಿಕ್ಕಿ ಹೊಡೆದಿದೆ.
ಗಂಭೀರವಾಗಿ ಗಾಯಗೊಂಡ ಸರಫುದ್ದೀನ್ ರನ್ನ ಆಸ್ಪತ್ರೆಗೆ ಸಾಗಿಸುವ ವೇಳೆಯಲ್ಲಿ ಮೃತಪಟ್ಟಿದ್ದಾರೆ. ಸರಫುದ್ದೀನ್ ಅವರು ಎರಡು ದಿನಗಳ ಹಿಂದೆ ವಿದೇಶದಿಂದ ಬಂದಿದ್ದರು ಎನ್ನಲಾಗಿದೆ. ಈ ಕುರಿತು ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Comments
belthangady road accident death bantwal mangaluru district news ಬೆಳ್ತಂಗಡಿ ಬಂಟ್ವಾಳ ಮಂಗಳೂರು ರಸ್ತೆ ಅಪಘಾತ ಸಾವು ಜಿಲ್ಲಾಸುದ್ದಿ
English summary
Bantwal taluk based Sharafudheen killed in road accident at Belthangady taluk Gerugate Sunday evening. Jeep crashed into Sharafudheen bike.