ಮಹಿಳೆಯರ ಮೊಗದಲ್ಲಿ ನಗು ತರದ ಮಲ್ಲಿಗೆ
ಮಂಗಳೂರು, ಜುಲೈ 22 : ಕರಾವಳಿಯಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಮಲ್ಲಿಗೆ ಬೆಳೆ ಕಡಿಮೆಯಾಗಿದೆ. ಇದರಿಂದಾಗಿ ದರ ಏರಿಕೆಯಾಗಿದೆ, ಆದರೆ, ಇದರಿಂದ ಬೆಳೆಗಾರರಿಗೆ ಯಾವುದೇ ಲಾಭವಾಗುತ್ತಿಲ್ಲ ಎಂದು ವ್ಯಾಪಾರಸ್ಥರು ಹೇಳುತ್ತಿದ್ದಾರೆ.
ಮಲ್ಲಿಗೆ
ಕರಾವಳಿ
ಜನರ
ಪ್ರಮುಖ
ವಾಣಿಜ್ಯ
ಬೆಳೆಯಾಗಿದ್ದು
ಕರಾವಳಿ
ಮಣ್ಣಿನಲ್ಲಿ
ಬೆಳೆಯುವ
ಮಲ್ಲಿಗೆಯನ್ನು
ಶಂಕರಪುರ
ಮಲ್ಲಿಗೆ
ಎಂದು
ಕರೆಯಲಾಗುತ್ತದೆ.
ದಕ್ಷಿಣ
ಕನ್ನಡ
ಮತ್ತು
ಉಡುಪಿ
ಜಿಲ್ಲೆಯಲ್ಲಿ
ಅಂದಾಜು
371
ಹೆಕ್ಟೇರ್
ಭೂಮಿಯಲ್ಲಿ
16,000ಕ್ಕೂ
ಅಧಿಕ
ಮಂದಿ
ಮಲ್ಲಿಗೆ
ಕೃಷಿ
ಮಾಡುತ್ತಾರೆ.[ಮಾರುಕಟ್ಟೆಯಲ್ಲಿ
ಕುಸಿದ
ಶಂಕರಪುರ
ಮಲ್ಲಿಗೆ
ದರ]
ಶಂಕರಪುರ ಮಲ್ಲಿಗೆಯ ದರ ಅಟ್ಟಿಗೆ ರೂ. 820ಗಳ ವರೆಗೆ ಏರಿಕೆಯಾಗಿದ್ದು ಮಲ್ಲಿಗೆ ಹೂವಿದ್ದವರ ಮೊಗದಲ್ಲಿ ಹೂ ನಗೆಮೂಡಿಸಿದೆ. ಸಾಮಾನ್ಯವಾಗಿ ಆಷಾಢ ಮಾಸದಲ್ಲಿ ದರ ಕಡಿಮೆಯಾಗುವುದರಿಂದ ನಿರಂತರ ಮಲ್ಲಿಗೆ ಮೂಡಿಗೇರಿಸಬಹುದೆಂಬ ನಿರೀಕ್ಷೆ ಹೊತ್ತಿದ್ದ ಮಹಿಳೆಯರ ಮೊಗದಲ್ಲಿ ನಿರಾಶೆ ಮೂಡಿದೆ.[ಪುಷ್ಪಲೋಕದ ವಿಸ್ಮಯ ಬ್ರಹ್ಮಕಮಲ]
ನಮ್ಮ ಗಿಡಗಳಲ್ಲಿ ಮಲ್ಲಿಗೆ ಹೂವು ಸಿಗುತ್ತಿಲ್ಲ. ಸೀಸನ್ನಲ್ಲಿ ನಾವು ಪ್ರತಿದಿನ 50 ಚೆಂಡು ಮಲ್ಲಿಗೆ ಮಾರುಕಟ್ಟೆಗೆ ನೀಡುತ್ತಿದೆವು. ಈಗ ದಿನಕ್ಕೆ ಕೇವಲ 100 ಮೊಗ್ಗು ಮಾತ್ರ ನೀಡುತ್ತಿದ್ದೇವೆ. ಕೆಲವೊಮ್ಮೆ ಅದು ಕೂಡಾ ಸಿಗುವುದಿಲ್ಲ ಇದರಿಂದ ಮಾರುಕಟ್ಟೆಯಲ್ಲೂ ಮಲ್ಲಿಗೆ ಹೂ ಸಿಗುತ್ತಿಲ್ಲ ಎನ್ನುತ್ತಾರೆ ಮಲ್ಲಿಗೆ ಬೆಳೆಗಾರರು.
ವಿವಿಧ ಮಲ್ಲಿಗೆಗೆ ವಿವಿಧ ಹೆಸರು : ಕುಂದಾಪುರ ಪ್ರದೇಶದಲ್ಲಿ ಬೆಳೆಯುವ ಮಲ್ಲಿಗೆ ಹೂಗಳಿಗೆ ಭಟ್ಕಳ ಮಲ್ಲಿಗೆ ಎಂದು ಕರೆಯುತ್ತಾರೆ. ಶಂಕರಪುರ, ಶಿರ್ವ ಪ್ರದೇಶದಲ್ಲಿ ಬೆಳೆಯನ್ನು ಶಂಕರಪುರ ಮಲ್ಲಿಗೆ ಎಂದೂ, ಪುತ್ತೂರು, ಸುಳ್ಯ ಭಾಗದಲ್ಲಿ ಬೆಳೆಯುವ ಮಲ್ಲಿಗೆಯನ್ನು ಮಂಗಳೂರು ಮಲ್ಲಿಗೆ ಎಂದು ಕರೆಯುತ್ತಾರೆ.