ಯುವತಿ ಎಂದು ನಂಬಿಸಿ ಮಂಗಳೂರಿನ ಉಪನ್ಯಾಸಕನನ್ನು ಬ್ಲಾಕ್ ಮೇಲ್ ಮಾಡಿದವರ ಬಂಧನ
ಮಂಗಳೂರು, ಅಕ್ಟೋಬರ್ 03: ಮಂಗಳೂರಿನ ಉಪನ್ಯಾಸಕನನ್ನು ಬ್ಲಾಕ್ ಮೇಲ್ ಮಾಡಿ ಹಣ ಸುಲಿಗೆ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಉರ್ವ ಪೊಲೀಸರು ಬಂಧಿಸಿದ್ದಾರೆ. ಉರ್ವಾ ಠಾಣಾ ಅಧಿಕಾರಿ ಹಾಗೂ ಸಿಬ್ಬಂದಿ ಬೆಂಗಳೂರಿನಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತರನ್ನು ಬೆಂಗಳೂರಿನ ಯಶವಂತಪುರ ನಿವಾಸಿ ಆದಿತ್ಯ ಅಲಿಯಾಸ್ ಅಶ್ವಿನಿ(19) , ರಾಮನಗರ ಜಿಲ್ಲೆಯ ಕನಕಪುರ ನಿವಾಸಿ (27) ಎಂದು ಗುರುತಿಸಲಾಗಿದೆ.
ಮಂಗಳೂರಿನಲ್ಲಿ ಲಂಚ ಪಡೆಯುವಾಗಲೇ ಎಸಿಬಿ ಬಲೆಗೆ ಬಿದ್ದ ಪ್ರಾಜೆಕ್ಟ್ ಇಂಜಿನಿಯರ್
ಪ್ರಕರಣದ
ವಿವರ
ಬಂಧಿತ
ಆರೋಪಿಗಳು
ಉಪನ್ಯಾಸಕನನ್ನು
ಸಾಮಾಜಿಕ
ಜಾಲತಾಣದಲ್ಲಿ
ಬೆಂಗಳೂರು
ಮೂಲದ
ಯುವತಿ
ಆರಾಧ್ಯ
ಎಂದು
ಪರಿಚಯಿಸಿಕೊಂಡು
ಅವರಿಂದ
ಕೆಲ
ಭಾವಚಿತ್ರಗಳನ್ನು
ಪಡೆದಿದ್ದಾರೆ.
ನಂತರ
ಉಪನ್ಯಾಸಕನನ್ನು
ಬ್ಲಾಕ್
ಮೇಲ್
ಮಾಡಿ
ಹಣಕ್ಕಾಗಿ
ಒತ್ತಾಯಿಸಿದ್ದಾರೆ.
ಮೊದಲಿಗೆ ಉಪನ್ಯಾಸಕರಿಂದ 65 ಸಾವಿರ ರೂಪಾಯಿ ಪಡೆದುಕೊಂಡಿದ್ದಾರೆ. ನಂತರದಲ್ಲಿ ಪದೇ ಪದೆ ಫೋನ್ ಮಾಡಿ ಹೆಚ್ಚಿನ ಹಣಕ್ಕಾಗಿ ಪೀಡಿಸುತ್ತಿದ್ದರು ಎಂದು ಆರೋಪಿಸಲಾಗಿದೆ. ಈ ಬಗ್ಗೆ ಮಂಗಳೂರಿನ ಬರ್ಕೆ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಮಂಗಳೂರಿನಲ್ಲಿ ಹಿಂದೂ ಮುಖಂಡನ ಮೇಲೆ ದಾಳಿ ಪ್ರಕರಣ: ಮೂವರು ಆರೋಪಿಗಳ ಬಂಧನ
ಆರೋಪಿಗಳು ಉಪನ್ಯಾಸಕರಿಗೆ ಹಿರಿಯ ಪೊಲೀಸ್ ಅಧಿಕಾರಿಗಳ ಹಾಗೂ ರಾಜಕಾರಣಿಗಳ ಸೋಗಿನಲ್ಲಿ ಕರೆ ಮಾಡಿ ಹೆದರಿಸುತ್ತಿದ್ದರು ಎಂದು ಹೇಳಲಾಗಿದೆ. ಪ್ರಕರಣದ ಮುಖ್ಯ ಆರೋಪಿ ಆರಾಧ್ಯ ಎಂಬ ಯುವತಿ ಹೆಸರಿನಲ್ಲಿ ಪರಿಚಯ ಮಾಡಿಕೊಂಡಿದ್ದಾನೆ ಎಂಬುದು ಪೊಲೀಸರ ದಸ್ತಗಿರಿ ಸಮಯದಲ್ಲಿ ಬಹಿರಂಗಗೊಂಡಿದೆ.