ಮಂಗಳೂರು ಅಂಬೇಡ್ಕರ್ ಭವನಕ್ಕೆ 12 ಕೋಟಿ ಅನುದಾನ
ಮಂಗಳೂರು, ಮೇ 25 : 'ಮಂಗಳೂರಿನಲ್ಲಿ ಸುಮಾರು 12 ಕೋಟಿ ವೆಚ್ಚದಲ್ಲಿ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ' ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಹೇಳಿದ್ದಾರೆ.
ಮಂಗಳವಾರ
ಮಂಗಳೂರಿನ
ಜಿಲ್ಲಾಧಿಕಾರಿ
ಕಚೇರಿಯಲ್ಲಿ
ರಾಜ್ಯ
ಸರ್ಕಾರದ
ಮೂರು
ವರುಷದ
ಸಾಧನೆ
ಕುರಿತ
ಪುಸ್ತಕವನ್ನು
ಬಿಡುಗಡೆ
ಮಾಡಿ
ಅವರು
ಮಾತನಾಡಿದರು.
'ಅಂಬೇಡ್ಕರ್
ಭವನ
ನಿರ್ಮಾಣಕ್ಕೆ
ಸರ್ಕಾರ
ಒಪ್ಪಿಗೆ
ನೀಡಿದ್ದು,
ಅನುದಾನ
ನೀಡಲು
ಅನುಮೋದನೆ
ದೊರಕಿದೆ'
ಎಂದರು.
[ವಿಧಾನಸೌಧ
ಮುಂಭಾಗದ
ಮೆಟ್ರೋ
ನಿಲ್ದಾಣಕ್ಕೆ
ಅಂಬೇಡ್ಕರ್
ಹೆಸರು]
ನಗರದ ಉರ್ವ ಸ್ಟೋರ್ ಬಳಿಯ 1.61 ಎಕರೆ ಪ್ರದೇಶದಲ್ಲಿ ಅಂಬೇಡ್ಕರ್ ಭವನ ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ. ಗೃಹ ನಿರ್ಮಾಣ ಮಂಡಳಿ ಕಾಮಗಾರಿಗಳ ಅಂದಾಜು ಪಟ್ಟಿ ತಯಾರಿಸಿದೆ. ಸರ್ಕಾರದ ಅನುಮೋದನೆ ಸಿಕ್ಕಿರುವುದರಿಂದ ಶೀಘ್ರದಲ್ಲೇ ಕಾಮಗಾರಿ ಆರಂಭವಾಗಲಿದೆ. [ಅಷ್ಟೊಂದು ಅವಮಾನವಾಗದಿದ್ದರೆ ಅಂಬೇಡ್ಕರ್ ಹುಟ್ಟುತ್ತಿದ್ದರೆ?]
ಒಟ್ಟು ಮೂರು ಅಂತಸ್ತಿನ ಕಟ್ಟಡದಲ್ಲಿ 800 ಮತ್ತು 200 ಜನರು ಕುಳಿತುಕೊಳ್ಳಬಹುದಾದದ ಎರಡು ಸಭಾಂಗಣ, ಗ್ರಂಥಾಲಯ ಮುಂತಾದ ಸೌಲಭ್ಯಗಳನ್ನು ಒದಗಿಸಲು ಯೋಜನೆ ರೂಪಿಸಲಾಗಿದೆ. ಸಮಾಜ ಕಲ್ಯಾಣ ಇಲಾಖೆ ಭವನ ನಿರ್ಮಾಣಕ್ಕೆ 2.40 ಕೋಟಿ ಅನುದಾನ ನೀಡಿದೆ. ಮಂಗಳೂರು ಮಹಾನಗರ ಪಾಲಿಕೆ 1 ಕೋಟಿ ಹಣ ನೀಡುವಂತೆ ಮನವಿ ಮಾಡಲಾಗಿದೆ. [ಉತ್ಥಾನ ಪತ್ರಿಕೆ: ಅಂಬೇಡ್ಕರ್ 125' ವಿಶೇಷ ಸಂಚಿಕೆ ಕೊಳ್ಳಿರಿ]