ಧರ್ಮಸ್ಥಳದಲ್ಲಿ ಅರವಿಂದ್ ಕೇಜ್ರಿವಾಲ್ ಹೇಳಿದ್ದೇನು?
ಮಂಗಳೂರು, ಸೆಪ್ಟೆಂಬರ್, 10 : 'ಎಲ್ಲಾ ಬಗೆಯ ವೈದ್ಯಕೀಯ ಚಿಕಿತ್ಸೆಗಳು ಒಂದೇ ಕಡೆ ದೊರೆಯುವಂತಾಗ ಬೇಕು. ಆಗ, ರೋಗಿಗೆ ಯಾವುದು ಸೂಕ್ತವೋ ಅದೇ ಪದ್ಧತಿಯಲ್ಲಿ ಚಿಕಿತ್ಸೆ ಪಡೆಯಲು ಸಾಧ್ಯವಾಗುತ್ತದೆ' ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅಭಿಪ್ರಾಯಪಟ್ಟಿದ್ದಾರೆ.
ಬುಧವಾರ
ಶ್ರೀಕ್ಷೇತ್ರ
ಧರ್ಮಸ್ಥಳದಲ್ಲಿ
ಯೋಗ
ಮತ್ತು
ಪ್ರಕೃತಿ
ಚಿಕಿತ್ಸಾ
ಕಾಲೇಜಿನ
ಘಟಿಕೋತ್ಸವದಲ್ಲಿ
ಮಾತನಾಡಿದ
ಕೇಜ್ರಿವಾಲ್
ಅವರು,
'ವಿವಿಧ
ವೈದ್ಯ
ಪದ್ಧತಿಗಳು
ಹೊಂದಾಣಿಕೆಯಿಂದ
ಕಾರ್ಯನಿರ್ವಹಿಸುತ್ತಿಲ್ಲ
ಇದು
ಬದಲಾಗಬೇಕು.
ಸರ್ಕಾರ
ಮತ್ತು
ಖಾಸಗಿ
ಸಂಸ್ಥೆಗಳು
ಈ
ರೀತಿಯ
ಪ್ರಯತ್ನ
ನಡೆಸಬೇಕು.
ಧರ್ಮಸ್ಥಳದ
ಧರ್ಮಾಧಿಕಾರಿಗಳು
ಇಂತಹ
ಪ್ರಯತ್ನ
ನಡೆಸುವುದಾದರೆ
ದೆಹಲಿ
ಸರ್ಕಾರ
ಬೆಂಬಲ
ನೀಡಲಿದೆ
ಎಂದು
ಕೇಜ್ರಿವಾಲ್
ಭರವೆಸೆ
ನೀಡಿದರು.
ಜನರಿಗೆ ಮಾಹಿತಿ ತಲುಪಿಸಿ : 'ಆಧುನಿಕತೆಯ ಇಂದಿನ ದಿನಗಳಲ್ಲಿ ಆಹಾರ ಪದ್ಧತಿಯಿಂದ, ಜೀವನ ಶೈಲಿಯಿಂದ ಆರೋಗ್ಯದಲ್ಲಿ ಏರುಪೇರಾಗುತ್ತಿದೆ. ಭಾರತೀಯ ವೈದ್ಯಪದ್ಧತಿಗಳು ಇದಕ್ಕೆ ಪರಿಹಾರವನ್ನು ಒಸಗಿಸಲು ಶಕ್ತವಾಗಿದೆ. ಆದರೆ, ಇವುಗಳ ಅರಿವು ಜನಸಾಮಾನ್ಯರಿಗೆ ಇಲ್ಲ. ಮಾಹಿತಿ ನೀಡುವ ಕಾರ್ಯವಾಗಬೇಕು' ಎಂದು ಕೇಜ್ರಿವಾಲ್ ಹೇಳಿದರು. [ಧರ್ಮಸ್ಥಳ ಮಂಜುನಾಥನಿಗೆ ನಮೋ ಎಂದ ಕೇಜ್ರಿವಾಲ್]
'ಪ್ರಕೃತಿ ಚಿಕಿತ್ಸೆ ಒಂದು ಅದ್ಭುತವಾದ ಅನುಭವವನ್ನು ನೀಡುತ್ತದೆ ಎಂದು ಹೇಳಿದ ಕೇಜ್ರಿವಾಲ್, ನಿಮ್ಮ ಆದಾಯದಲ್ಲಿ ಸ್ವಲ್ಪಭಾಗವನ್ನು ಸಮಾಜ ಸೇವೆಗಾಗಿ ವಿನಿಯೋಗಿಸಿ. ಇದರಿಂದಾಗಿ ಅಹಂ ಕಡಿಮೆಯಾಗಿ ಮಾನಸಿಕ ಶಾಂತಿ ನೆಮ್ಮದಿ ಸಿಗುತ್ತದೆ' ಎಂದು ಕರೆ ನೀಡಿದರು. [ಚಿತ್ರಗಳು : ಬೆಂಗಳೂರಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕೇಜ್ರಿವಾಲ್]
ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಿ. ಹರ್ಷೇಂದ್ರ ಕುಮಾರ್, ಉಪಾಧ್ಯಕ್ಷ ಪ್ರೊ.ಎಸ್. ಪ್ರಭಾಕರ್, ಶಾಂತಿವನ ಟ್ರಸ್ಟ್ನ ಕಾರ್ಯದರ್ಶಿ ಸೀತಾರಾಮ ತೋಳ್ಪಡಿತ್ತಾಯ, ಕಾಲೇಜಿನ ಪ್ರಾಂಶುಪಾಲ ಪ್ರಶಾಂತ ಶೆಟ್ಟಿ ಮುಂತಾದವರು ಸಮಾರಂಭದಲ್ಲಿ ಉಪಸ್ಥಿತರಿದ್ದರು.