ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚಾಕ್ಲೇಟ್ ತರಲು ಹೋಗಿದ್ದ ಬಾಲಕ ರೈಲಿಗೆ ಸಿಲುಕಿ ಸಾವು

|
Google Oneindia Kannada News

ಮಂಗಳೂರು, ಸೆಪ್ಟೆಂಬರ್ 24 : ಚಾಕ್ಲೇಟ್ ತರಲು ಹೋಗಿದ್ದ ಬಾಲಕ ರೈಲಿಗೆ ಸಿಲುಕಿ ಮೃತಪಟ್ಟ ಘಟನೆ ಮಂಗಳೂರಿನಲ್ಲಿ ನಡೆದಿದೆ. ಪಾಂಡೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ದಸರಾ, ದೀಪಾವಳಿಗಾಗಿ ವಿಶೇಷ ರೈಲುಗಳ ಸಂಚಾರದಸರಾ, ದೀಪಾವಳಿಗಾಗಿ ವಿಶೇಷ ರೈಲುಗಳ ಸಂಚಾರ

ಮಂಗಳೂರಿನ ಮಹಾಕಾಳಿ ಪಡ್ಪು ಎಂಬಲ್ಲಿ ಈ ಘಟನೆ ನಡೆದಿದ್ದು, ಮೃತಪಟ್ಟ ಬಾಲಕನನ್ನು ಅನ್ವರ್ ಹಾಗು ಶಮೀನಾ ದಂಪತಿಯ ಮಗ ಹಫೀಲ್ (7) ಎಂದು ಗುರುತಿಸಲಾಗಿದೆ. ಮನೆಯ ಸಮೀಪದಲ್ಲೇ ಇರುವ ಅಂಗಡಿಯೊಂದಕ್ಕೆ ಚಾಕ್ಲೇಟ್‌ ತರಲು ಹಫೀಲ್ ತೆರಳಿದ್ದ.

 7 year old boy dies after hit by train at Mahakalipadpu

ಅಂಗಡಿಯಿಂದ ವಾಪಸ್ ಬರುವಾಗ ರೈಲ್ವೆ ಹಳಿ ದಾಟುವಾಗ ಕೇರಳದಿಂದ ಬರುತ್ತಿದ್ದ ಎಕ್ಸ್‌ಪ್ರೆಸ್‌ ರೈಲು ಡಿಕ್ಕಿ ಹೊಡೆದಿದೆ. ಬಾಲಕನ ದೇಹವನ್ನು ಸುಮಾರು 75 ಮೀಟರ್ ದೂರ ರೈಲು ಎಳೆದುಕೊಂಡು ಹೋಗಿದೆ.

ರೈಲ್ವೆ ಉದ್ಯೋಗಿಗಳಿಗೆ 78 ದಿನಗಳ ಬೋನಸ್ ಘೋಷಿಸಿದ ಕೇಂದ್ರರೈಲ್ವೆ ಉದ್ಯೋಗಿಗಳಿಗೆ 78 ದಿನಗಳ ಬೋನಸ್ ಘೋಷಿಸಿದ ಕೇಂದ್ರ

ಹಫೀಲ್ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಅಪಘಾತದ ತೀವ್ರತೆಗೆ ಬಾಲಕನ ದೇಹ ಎರಡು ತುಂಡಾಗಿದೆ. ಪಾಂಡೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ತನಿಖೆ ನಡೆಸಲಾಗುತ್ತಿದೆ.

English summary
A 7-year-old boy died after he was hit by an express train at Mahakalipadpu, Mangaluru on September 23, 2017.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X