ಓಖಿ: ಲಕ್ಷದ್ವೀಪ ಸಮೀಪ ಮಂಗಳೂರಿನ ಎರಡು ಬೋಟ್ ಮುಳುಗಡೆ
Boats sinks, Ochie storm, boats drowned near Lakshadweep,
ಮಂಗಳೂರು, ಡಿಸೆಂಬರ್ 1: ಮಂಗಳೂರಿನಿಂದ ಲಕ್ಷದ್ವೀಪಕ್ಕೆ ತೆರಳಿದ್ದ ಸರಕು ಸಾಗಣಿಕೆಯ ನೌಕೆಗಳು ಓಖಿ ಚಂಡಮಾರುತದ ಹೊಡೆತಕ್ಕೆ ಸಿಲುಕಿವೆ. ಈ ಪೈಕಿ ಲಕ್ಷದ್ವೀಪ ಸಮೀಪ ಎರಡು ನೌಕೆಗಳು ಮುಳುಗಡೆಯಾಗಿದ್ದು 1 ನೌಕೆ ಹಾನಿಗೊಂಡಿದೆ.
ಮಂಗಳೂರು ಹಳೆ ಬಂದರಿನಿಂದ ನಿನ್ನೆ ಸಿಮೆಂಟ್ ಹಾಗು ಜಲ್ಲಿಕಲ್ಲುಗಳನ್ನು ಹೊತ್ತು ಲಕ್ಷದ್ವೀಪಕ್ಕೆ ಮಂಜಿ ನೌಕೆಗಳು ತೆರಳಿದ್ದವು. ಮುಳುಗಡೆಗೊಂಡ ಎರಡು ಮಂಜಿ ನೌಕೆಯಲ್ಲಿ ಒಟ್ಟು14 ಸಿಬ್ಬಂದಿಗಳಿದ್ದರು. ಅಪಾಯದಲ್ಲಿದ್ದ ಎಲ್ಲಾ ಸಿಬ್ಬಂದಿಗಳನ್ನು ಸ್ಥಳೀಯ ಮೀನುಗಾರರು ಹಾಗೂ ಹೆಲಿಕಾಪ್ಟರ್ ಮೂಲಕ ರಕ್ಷಿಸಲಾಗಿದೆ.
ಈ ನಡುವೆ ಹಿಂದೂ ಮಹಾಸಾಗರದಲ್ಲಿ ಉಂಟಾಗಿರುವ ಚಂಡಮಾರುತದ ಪ್ರಭಾವ ಕರ್ನಾಟಕದ ಕರಾವಳಿಯಲ್ಲಿ ಪ್ರಭಾವ ಬೀರುವ ಸಾಧ್ಯತೆ ಹೆಚ್ಚಾಗಿದೆ.
ಈ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ. ಮುಂದಿನ 24 ಗಂಟೆಗಳಲ್ಲಿ ಕರಾವಳಿಯಲ್ಲಿ ಭಾರೀ ಗಾಳಿ ಬೀಸಲಿದ್ದು, ಜೊತೆಗೆ ಮಳೆಯೂ ಆಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಸಮುದ್ರದ ಅಬ್ಬರವೂ ಹೆಚ್ಚಾಗಲಿದ್ದು, ಮುಂದಿನ 48 ಗಂಟೆಗಳ ಕಾಲ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ.