ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಯಡಿಯೂರಪ್ಪ ಮಂಡ್ಯದವರು, ಆದರೂ ಆ ಗಡಸ್ಸು ಇಲ್ಲ, ಗತ್ತೂ ಇಲ್ಲ

|
Google Oneindia Kannada News

ಮಂಡ್ಯ, ಸೆ 15: " ಮುಖ್ಯಮಂತ್ರಿ ಯಡಿಯೂರಪ್ಪ ಹುಟ್ಟಿದ್ದು ಮಂಡ್ಯದಲ್ಲಿ, ಬೆಳೆದದ್ದು ಇನ್ನೊಂದು ಕಡೆ. ಹಾಗಾಗಿ, ಅವರಿಗೆ ಮಂಡ್ಯದ ಗಡಸ್ ಬಂದಿಲ್ಲ" ಎಂದು ಸಿದ್ದರಾಮಯ್ಯ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.

" ರಾಜ್ಯದ ಅತ್ಯಂತ ವೀಕೆಸ್ಟ್ ಮುಖ್ಯಮಂತ್ರಿಯೆಂದರೆ ಅದು ಯಡಿಯೂರಪ್ಪ. ಅವರ ಪಕ್ಷದವರು ಪುಕ್ಕಲರು. ಬಿಎಸ್ವೈ, ಮಂಡ್ಯದವರಾದರೂ, ಅವರಿಗೆ ಆ ಗತ್ತೇ ಇಲ್ಲ" ಎಂದು ಸಿದ್ದರಾಮಯ್ಯ ಲೇವಡಿ ಮಾಡಿದ್ದಾರೆ.

ದಿನಕ್ಕೊಂದು ದೇಶ ಸುತ್ತುವ ಪ್ರಧಾನಿ ಎಲ್ಲಿದ್ದಾರೆ?; ಸಿದ್ದರಾಮಯ್ಯದಿನಕ್ಕೊಂದು ದೇಶ ಸುತ್ತುವ ಪ್ರಧಾನಿ ಎಲ್ಲಿದ್ದಾರೆ?; ಸಿದ್ದರಾಮಯ್ಯ

" ಕರ್ನಾಟಕದಿಂದ 25 ಬಿಜೆಪಿ ಸಂಸದರು ಆಯ್ಕೆಯಾಗಿದ್ದಾರೆ. ಒಬ್ಬರಿಗಾದರೂ ಜವಾಬ್ದಾರಿಯನ್ನೋದು ಬೇಡವೇ" ಎಂದು ಪ್ರಶ್ನಿಸಿರುವ ಸಿದ್ದರಾಮಯ್ಯ, " ಇದ್ಯಾವುದೂ ಮೋದಿ ಕಣ್ಣಿಗೆ ಬೀಳುವುದಿಲ್ಲವಾ" ಎಂದು ಕೇಳಿದ್ದಾರೆ.

Yediyurappa Born In Mandya, But Not Having Capacity: Former CM Siddaramaiah Statement

ಇದಕ್ಕೂ ಮೊದಲು ಸಿದ್ದರಾಮಯ್ಯ, ಮಂಡ್ಯ ಜಿಲ್ಲಾ ಕುರುಬರ ಸಂಘ ಆಯೋಜಿಸಿದ್ದ ಸಮಾರಂಭದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರಶಸ್ತಿ ನೀಡಿ ಪುರಸ್ಕರಿಸಿದರು.

ಇದಾದ ನಂತರ, ಮಂಡ್ಯದ ಕರ್ನಾಟಕ ಸಂಘಕ್ಕೆ ಸಿದ್ದರಾಮಯ್ಯ ಭೇಟಿ ನೀಡಿದರು. ಈ ಬಗ್ಗೆ ಟ್ವೀಟ್ ಮಾಡಿರುವ ಸಿದ್ದರಾಮಯ್ಯ, " ನಾನು ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಸಂಘದ ಭವನ ನಿರ್ಮಾಣಕ್ಕೆ ರೂ.25 ಲಕ್ಷ ಅನುದಾನ ನೀಡಿದ್ದೆ",

" ಇಂದು ಭವನ ನಿರ್ಮಾಣಗೊಂಡು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿರುವುದು ನೋಡಿ ಅತೀವ ಆನಂದವಾಗುತ್ತಿದೆ" ಎಣ್ದು ಟ್ವೀಟ್ ಮಾಡಿದ್ದಾರೆ.

English summary
Chief Minister BS Yediyurappa Born In Mandya, But Not Having Capacity: Former CM Siddaramaiah Statement in Mandya.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X