ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಎಚ್ಡಿಕೆ ಹೇಳಿಕೆ ಎಲ್ಲಾ ಮಹಿಳೆಯರಿಗೂ ಮಾಡಿದ ಅವಮಾನ: ಸುಮಲತಾ

|
Google Oneindia Kannada News

Recommended Video

Lok Sabha Elections 2019 : ಎಚ್ಡಿಕೆ ಹೇಳಿಕೆ ಎಲ್ಲಾ ಮಹಿಳೆಯರಿಗೂ ಮಾಡಿದ ಅವಮಾನ | Oneindia Kannada

ಮಂಡ್ಯ, ಮಾರ್ಚ್ 30: ಕುಮಾರಸ್ವಾಮಿ ಅವರ ಹೇಳಿಕೆ ಎಲ್ಲಾ ಮಹಿಳೆಯರಿಗೂ ಮಾಡಿರುವ ಅವಮಾನ ಎಂದು ಬಿಜೆಪಿ ಬೆಂಬಲಿತ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಹೇಳಿದ್ದಾರೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಮಂಡ್ಯದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಗಂಡ ಸತ್ತ ದುಃಖ ಅವರ ಮುಖ್ಯದಲ್ಲಿ ಕಾಣುತ್ತಿಲ್ಲ' ಎಂದಿದ್ದ ಕುಮಾರಸ್ವಾಮಿಯವರಿಗೆ ತಿರುಗೇಟು ನೀಡಿದರು.

ನಿಖಿಲ್ ನಾಮಪತ್ರ ಗೊಂದಲ: ಮಂಡ್ಯಕ್ಕೆ ಮುಖ್ಯ ಚುನಾವಣಾ ಆಯುಕ್ತನಿಖಿಲ್ ನಾಮಪತ್ರ ಗೊಂದಲ: ಮಂಡ್ಯಕ್ಕೆ ಮುಖ್ಯ ಚುನಾವಣಾ ಆಯುಕ್ತ

ಈ ರೀತಿ ಮಾತನಾಡುವುದು ಅವರ ಸ್ಥಾನಕ್ಕೆ ಶೋಭೆ ತರುವಂಥದ್ದಲ್ಲ, ಇದು ಎಲ್ಲಾ ಮಹಿಳೆಯರಿಗೂ ಮಾಡಿದ ಅವಮಾನ ಎಂದು ಹೇಳಿದರು.

Sumalatha Ambareesh slams hdk on His statement

ಇದೇ ಸಂದರ್ಭದಲ್ಲಿ ಮಂಡ್ಯ ಪಕ್ಷೇತರ ಅಭ್ಯರ್ಥಿ ಸುಮಲತಾ ಗೆಲುವು ಸಾಧಿಸಿಲು ಅಂಬಿ ಅಭಿಮಾನಿ ಓರ್ವ ಉರುಳು ಸೇವೆ ಮಾಡಿದ್ದಾರೆ. ಮೈಸೂರಿನ ಕೆ.ಆರ್.ನಗರದ ಅಂಬಿ ಅಭಿಮಾನಿ ಬೆನಕ ಪ್ರಸಾದ್ ಸುಮಲತಾ ಗೆಲುವಿಗಾಗಿ ಉರುಳುಸೇವೆ ಮಾಡಿದ್ದಾರೆ.

ಚುನಾವಣಾ ಚಿಹ್ನೆ: ಸುಮಲತಾ ಕೇಳಿದ್ದಾವುದು, ಆಯೋಗ ಕೊಟ್ಟಿದ್ದು ಯಾವುದು?ಚುನಾವಣಾ ಚಿಹ್ನೆ: ಸುಮಲತಾ ಕೇಳಿದ್ದಾವುದು, ಆಯೋಗ ಕೊಟ್ಟಿದ್ದು ಯಾವುದು?

ಸುಮಲತಾ ಅವರು ಎತ್ತುಗಳನ್ನು ಹಿಡಿದಿರುವ ರೈತ, ಕಬ್ಬಿನ ಗದ್ದೆ, ಕಹಳೆ ಊದುತ್ತಿರುವ ರೈತನ ಚಿಹ್ನೆಯನ್ನು ಕೊಡಿರೆಂದು ಚುನಾವಣಾ ಆಯೋಗಕ್ಕೆ ಮನವಿ ಮಾಡಿದ್ದರು. ಮೊದಲಿಗೆ ಅವರಿಗೆ ತಳ್ಳುವ ಗಾಡಿಯ ಗುರುತು ನೀಡಲಾಗಿತ್ತು, ಆ ನಂತರ ಅದು ಬದಲಾಗಿ ಕಹಳೆ ಊದುವ ವ್ಯಕ್ತಿಯ ಗುರುತು ದೊರೆತಿದೆ.

ಅದಕ್ಕೂ ಮುನ್ನ ಕೆಲವೇ ದಿನಗಳ ಹಿಂದೆ ಲೋಕೋಪಯೋಗಿ ಸಚಿವ ರೇವಣ್ಣ ಅವರು ಸುಮಲತಾ ಅವರ 'ಗಂಡ ಸತ್ತು ಮೂರು ತಿಂಗಳಾಗಿಲ್ಲ ಅಷ್ಟು ಬೇಗ ಚುನಾವಣೆ ಅಖಾಡಕ್ಕಿಳಿದಿದ್ದಾರೆ ಎಂಬ ಮಾತು ತೀವ್ರ ವಿರೋಧಕ್ಕೆ ಗುರಿಯಾಗಿತ್ತು.

English summary
BJP supported independent candidate from Mandya Sumalatha Ambareesh slams Chief minister HD Kumaraswamy says that his comment is an insult to all women. CM had allegedly said that the pain of husband's loss is not visible on her face.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X