ಮಂಡ್ಯ: ಪೆಂಟಾವಲೆಂಟ್ ಚುಚ್ಚುಮದ್ದಿಗೆ ಮತ್ತೊಂದು ಮಗು ಬಲಿ
ಮಂಡ್ಯ, ಫೆಬ್ರವರಿ 13 : ಪೆಂಟಾವಲೆಂಟ್ ಚುಚ್ಚುಮದ್ದಿಗೆ ಮಂಡ್ಯ ಜಿಲ್ಲೆಯಲ್ಲಿ ಮತ್ತೊಂದು ಮಗು ಬಲಿಯಾಗಿದೆ. ಮಳವಳ್ಳಿ ತಾಲೂಕಿನ ಹಾಡ್ಲಿ ಗ್ರಾಮದ ಸಂತೋಷ್, ಹೇಮಾ ದಂಪತಿಯ 2 ತಿಂಗಳ ಕೂಸು ಸಾವನ್ನಪ್ಪಿದೆ. ಗುರುವಾರ ಅಗಸನಪುರ ಅಂಗನವಾಡಿಯಲ್ಲಿ ಚುಚ್ಚುಮದ್ದು ಹಾಕಲಾಗಿತ್ತು.
ಚುಚ್ಚುಮದ್ದು ಕೊಟ್ಟ ಕೆಲವು ಗಂಟೆಗಳ ನಂತರ ಮಗು ಅನಾರೋಗ್ಯ ಈಡಾಗಿದೆ. ಭಾನುವಾರ ಮಂಡ್ಯ ಮಿಮ್ಸ್ ಆಸ್ಪತ್ರೆಗೆ ಮಗುವನ್ನು ಚಿಕಿತ್ಸೆಗೆ ದಾಖಲಿಸಲಾಗಿತ್ತು. ಫಲಕಾರಿಯಾಗದೇ ರಾತ್ರಿ ಆಸ್ಪತ್ರೆಯಲ್ಲಿಯೇ ಪುಟಾಣಿ ಕೊನೆ ಯುಸಿರೆಳೆದಿದೆ.
ಮಂಡ್ಯ: ಅಂಗನವಾಡಿ ಚುಚ್ಚುಮದ್ದಿನಿಂದ 2 ಮಕ್ಕಳು ಸಾವು
ಚುಚ್ಚುಮದ್ದಿನಿಂದಲೇ ಮಗು ಸತ್ತಿದೆ ಎಂದು ಪೋಷಕರು ಆರೋಪಿಸುತ್ತಿದ್ದಾರೆ. ಬೇರೆ ಕಾಯಿಲೆಯಿಂದ ಮಗು ಸತ್ತಿದೆ ಎಂದು ಮಿಮ್ಸ್ ವೈದ್ಯರು ಸ್ಪಷ್ಟನೆ ನೀಡಿದ್ದಾರೆ. ಪಂಚನಾಮೆ ನಡೆಸದೇ ಮಗುವಿನ ಶವ ಪೋಷಕರಿಗೆ ಹಸ್ತಾಂತರಿಸಿದ್ದು, ವೈದ್ಯರ ಈ ನಡೆ ಹಲವು ಅನುಮಾನಗಳಿಗೆ ಕಾರಣವಾಗಿದೆ. ಚಿಂದಗಿರಿ ದೊಡ್ಡಿಯಲ್ಲಿ ಶುಕ್ರವಾರ ಇಬ್ಬರು ಮಕ್ಕಳು ಚುಚ್ಚುಮದ್ದಿನಿಂದ ಸಾವನ್ನಪ್ಪಿದ್ದರು. ಏಳು ಮಕ್ಕಳು ಅಸ್ವಸ್ಥರಾಗಿದ್ದರು.