ಅಂಬಿಯಂತೆ ಮಾನವೀಯತೆ ಮೆರೆದ ಪುತ್ರ ಅಭಿಷೇಕ್
ಮೈಸೂರು, ನವೆಂಬರ್ 16: ಕಳೆದೆರಡು ದಿನಗಳಿಂದಲೂ ಅಂಬರೀಶ್ ದೇಹದ ಪಕ್ಕದಲ್ಲೇ ಇರುವ ಪುತ್ರ ಅಭಿಷೇಕ್ ಭಾವೋದ್ವೇಗ ಹೇಳತೀರದಂತಿದೆ.
ಒಂದೇ ತಿಂಗಳಿನಲ್ಲಿ ವಿಧಿಯ ಕರೆಗೆ ಓಗೊಟ್ಟ ಆಪ್ತ ಸ್ನೇಹಿತರು!
ಈ ಸಂದರ್ಭದಲ್ಲಿ ತಂದೆಯಂತೆ ಮಗನೂ ಸಹ ವಿಕಲಾಂಗನೋರ್ವನಿಗೆ ಸಹಾಯ ಮಾಡುವ ಮೂಲಕ ಮಾನವೀಯತೆ ಮೆರೆದ ಘಟನೆ ನಡೆದಿದೆ. ಹೌದು, ಅಂಬಿ ಅಂತಿಮಯಾತ್ರೆಯ ವೇಳೆ ನೆಚ್ಚಿನ ನಟನನ್ನು ನೋಡಲು ವಿಶೇಷ ಚೇತನರೊಬ್ಬರು ಆಗಮಿಸಿದ್ದರು.
ಆಪ್ತ ಸ್ನೇಹಿತ ಅಂಬರೀಶ್ ಒಡನಾಟ ನೆನಪಿಸಿಕೊಂಡ ಸಿದ್ದರಾಮಯ್ಯ
ಆದರೆ ನೂಕುನುಗ್ಗಲು ಉಂಟಾದ ಹಿನ್ನೆಲೆಯಲ್ಲಿ ತನಗೆ ಅಂಬರೀಶ್ ಪಾರ್ಥಿವ ಶರೀರದ ದರ್ಶನ ಸಿಗೋದಿಲ್ಲ ಎಂದು ವಾಪಸ್ ಆಗುತ್ತಿದ್ದರು. ಇದನ್ನು ಗಮನಿಸಿದ ಅಭಿಷೇಕ್ ಅಂಬರೀಶ್, ವಿಶೇಷ ಚೇತನನ್ನು ಕರೆದು ಪಾರ್ಥಿವ ಶರೀರದ ದರ್ಶನ ಮಾಡಿಸಿದರು.
ಜೀವದ ಗೆಳೆಯ ಅಂಬರೀಶ್ ಬಗ್ಗೆ ರಜನೀಕಾಂತ್ ಹೇಳಿದರು ಮುತ್ತಿನಂತಾ ಮಾತು
ಈ ಮಧ್ಯೆ ಭದ್ರತೆ ಬೇಧಿಸಿ ಹೆಲಿಕಾಪ್ಟರ್ ನತ್ತ ಓಡಿಬಂದು ನುಗ್ಗಲೆತ್ನಿಸಿದ ಅಭಿಮಾನಿಯೊಬ್ಬನಿಗೆ ಪೊಲೀಸರು ತಡೆದು ಕಪಾಳಮೋಕ್ಷ ಮಾಡಿದ ಘಟನೆಯೂ ಜರುಗಿದೆ.