ನಿಖಿಲ್ ಕುಮಾರಸ್ವಾಮಿ ನಾಮಪತ್ರ ಅಸಿಂಧು ಪ್ರಶ್ನೆಯೇ ಇಲ್ಲ: ಚುನಾವಣಾ ಆಯುಕ್ತ
ಮಂಡ್ಯ, ಮಾರ್ಚ್ 30: ನಿಖಿಲ್ ಕುಮಾರಸ್ವಾಮಿ ನಾಮಪತ್ರ ಅಂಗೀಕಾರ ಆಗಿದೆ, ಅದನ್ನು ಅಸಿಂಧುಗೊಳಿಸುವ ಪ್ರಶ್ನೆಯೇ ಇಲ್ಲ ಎಂದು ರಾಜ್ಯ ಚುನಾವಣಾ ಮುಖ್ಯ ಆಯುಕ್ತ ಸಂಜೀವ್ ಕುಮಾರ್ ಹೇಳಿದ್ದಾರೆ.
ನಿಖಿಲ್ ಕುಮಾರಸ್ವಾಮಿ ಅವರ ನಾಮಪತ್ರ ಅಂಗೀಕಾರ ಕುರಿತಂತೆ ಎದ್ದಿರುವ ಗೊಂದಲಗಳ ಪರಿಶೀಲನೆಗೆಂದು ಸಂಜೀವ್ ಕುಮಾರ್ ಅವರು ಇಂದು ಮಂಡ್ಯಕ್ಕೆ ಬಂದಿದ್ದರು.
ಪಂಚೆ ಕಟ್ಟಿ ಗದ್ದೆಗಿಳಿದು ಭತ್ತ ನಾಟಿ ಮಾಡಿದ ನಿಖಿಲ್ ಕುಮಾರಸ್ವಾಮಿ
ನಾಮಪತ್ರ ಸಿಂಧುಗೊಳಿಸುವ ಸಂಬಂಧ ಎದ್ದಿರುವ ಗೊಂದಲಗಳ ಬಗ್ಗೆ ಚುನಾವಣಾಧಿಕಾರಿಗಳು, ಎರಡೂ ಅಭ್ಯರ್ಥಿಗಳ ಪರ ವೀಕ್ಷಕರ ದೂರುಗಳನ್ನು ಕೇಳಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ನಿಖಿಲ್ ಕುಮಾರಸ್ವಾಮಿ ಅವರ ನಾಮಪತ್ರ ಅಂಗೀಕಾರವಾಗಿದೆ, ಅದು ಈಗ ಮುಗಿದ ಅಧ್ಯಾಯ, ನಾಮಪತ್ರವನ್ನು ಚುನಾವಣಾಧಿಕಾರಿ ಅಂಗೀಕಾರ ಮಾಡಿದ್ದಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.
ನಿಖಿಲ್ ನಾಮಪತ್ರ ಗೊಂದಲ: ಮಂಡ್ಯಕ್ಕೆ ಮುಖ್ಯ ಚುನಾವಣಾ ಆಯುಕ್ತ
ನಾಮಪತ್ರ ಅಂಗೀಕಾರ ಕುರಿತು ಇನ್ನೇನೆ ದೂರುಗಳಿದ್ದರೂ ಸಹ ನ್ಯಾಯಾಲಯಕ್ಕೆ ಹೋಗಬೇಕು, ಅಲ್ಲಿಯೇ ಇತ್ಯರ್ಥವಾಗಬೇಕು, ಈಗಂತೂ ನಾಮಪತ್ರ ಅಂಗೀಕಾರವಾಗಿದೆ, ಮತದಾನ ನಿಗದಿತ ಸಮಯಕ್ಕೆ ನಡೆಯಲಿದೆ ಎಂದು ಹೇಳಿದರು.
ಚುನಾವಣಾ ಚಿಹ್ನೆ: ಸುಮಲತಾ ಕೇಳಿದ್ದಾವುದು, ಆಯೋಗ ಕೊಟ್ಟಿದ್ದು ಯಾವುದು?
ಜಿಲ್ಲಾ ಚುನಾವಣಾಧಿಕಾರಿಗಳು ಪಕ್ಷಪಾತಿಗಳಾಗಿ ವರ್ತಿಸಿದ್ದಾರೆ ಎಂದು ಸುಮಲತಾ ಪರ ಚುನಾವಣಾ ವೀಕ್ಷಕರು ಮಾಡಿದ ಆರೋಪದ ಬಗ್ಗೆ ಮಾತನಾಡಿದ ಅವರು, ಅದನ್ನು ಗುರುತು ಹಾಕಿಕೊಳ್ಳಲಾಗಿದ್ದು, ಆ ಕುರಿತಂತೆ ಚುನಾವಣೆ ಅಧಿಕಾರಿ ವಿರುದ್ಧ ತನಿಖೆ ಮಾಡಲಾಗುವುದು ಎಂದು ಅವರು ಹೇಳಿದರು.