ನಿಖಿಲ್ ಸೋತಿದ್ದಕ್ಕೆ ಬೆರಳು ಕತ್ತರಿಸಿಕೊಂಡ ಹುಚ್ಚು ಅಭಿಮಾನಿ
Recommended Video
ಮಂಡ್ಯ, ಮೇ 25: ರಾಜಕಾರಣದಲ್ಲಿ ಸೋಲು-ಗೆಲುವು ಸಾಮಾನ್ಯ ಎಂಬುದು ರಾಜಕಾರಣಿಗಳಿಗೆ ಗೊತ್ತಿರುತ್ತದೆ. ಆದರೆ ಸೋಲು-ಗೆಲುವನ್ನು ರಾಜಕಾರಣಿಗಳಷ್ಟೆ ಮುಕ್ತ ಮನಸ್ಸಿನಿಂದ ತೆಗೆದುಕೊಳ್ಳಲು ಕಾರ್ಯಕರ್ತರಿಗೆ ಆಗುವುದಿಲ್ಲ. ಅವರು ಹೋರಾಟದ ಮುಂಚೂಣಿಯಲ್ಲಿರುವವರು ಹಾಗಾಗಿಯೇ ಅವರಿಗೆ ಸೋಲು ಸಹಿಲಾಗದು.
ಮಂಡ್ಯದಲ್ಲಿ ನಿಖಿಲ್ ಕುಮಾರಸ್ವಾಮಿ ಅವರು ಸೋಲನುಭವಿಸಿದ್ದಕ್ಕೆ ಹುಚ್ಚು ಅಭಿಮಾನಿಯೊಬ್ಬ ತನ್ನ ತೋರು ಬೆಳನ್ನೇ ಕತ್ತರಿಸಿಕೊಂಡಿದ್ದಾನೆ.
ನಿಖಿಲ್ ಕುಮಾರಸ್ವಾಮಿ ಸೋಲಿಗೆ ಇವಿಎಂ ಕಾರಣ: ಶಿವರಾಮೇಗೌಡ
ಮಂಡ್ಯದ ಮದ್ದೂರು ತಾಲ್ಲೂಕಿನ ಅಬಲವಾಡಿ ಗ್ರಾಮದ ಯುವಕ ಸುನಿಲ್ ತನ್ನ ತೋರು ಬೆರಳನ್ನೇ ಕತ್ತರಿಸಿಕೊಂಡಿದ್ದಾನೆ. ಈ ಮೂಲಕ ನಿಖಿಲ್ ಕುಮಾರಸ್ವಾಮಿ ಪರ ಅಂದಾಭಿಮಾನ ಮೆರೆದಿದ್ದಾನೆ.
ತನ್ನ ಮತ ನಿಖಿಲ್ ಅನ್ನು ಗೆಲ್ಲಿಸಲಿಲ್ಲವೆಂಬ ಕೋಪಕ್ಕೆ ಶಾಯಿ ಹಾಕಿದ್ದ ಎಡಗೈನ ತೋರುಬೆಳನನ್ನು ಸುನಿಲ್ ಕತ್ತರಿಸಿಕೊಂಡಿದ್ದಾನೆ.
ಸುಮಲತಾ ಬೆಂಬಲಿಗರ ಮೇಲೆ ಜೆಡಿಎಸ್ ಬೆಂಬಲಿಗರ ಹಲ್ಲೆ: ದೂರು ದಾಖಲು
ಈತ ಜೆಡಿಎಸ್ ಕಾರ್ಯಕರ್ತನಾಗಿದ್ದು ನಿಖಿಲ್ ಕುಮಾರಸ್ವಾಮಿ ಅಭಿಮಾನಿಯಾಗಿದ್ದ. ಚುನಾವಣೆ ಸಮಯದಲ್ಲಿ ನಿಖಿಲ್ ಕುಮಾರಸ್ವಾಮಿ ಪರ ಜೋರು ಪ್ರಚಾರ ನಡೆಸಿದ್ದ. ಆದರೆ ಸೋಲಿನಿಂದ ತೀವ್ರ ವಿಚಲಿತನಾಗಿ ಈ ಹುಚ್ಚಾಟ ಮರೆದಿದ್ದಾನೆ.
ಮಂಡ್ಯದಲ್ಲಿ ಜೆಡಿಎಸ್ನ ನಿಖಿಲ್ ಕುಮಾರಸ್ವಾಮಿ ಸುಮಲತಾ ವಿರುದ್ಧ 1.25 ಲಕ್ಷ ಮತಗಳ ಭಾರಿ ಅಂತರದಿಂದ ಸೋಲನ್ನು ಅನುಭವಿಸಿದ್ದಾರೆ.