ನಾರಾಯಣಗೌಡ ನಿಜವಾದ ಮಂಡ್ಯದ ಗಂಡು: ಆರ್.ಅಶೋಕ್
ಮಂಡ್ಯ, ಡಿಸೆಂಬರ್ 03: ಜೆಡಿಎಸ್ ಭದ್ರಕೋಟೆಯಾಗಿದ್ದ ಮಂಡ್ಯ ಜಿಲ್ಲೆಯ ಕೃಷ್ಣರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಕಮಲವನ್ನು ಅರಳಿಸಿ ಇತಿಹಾಸ ನಿರ್ಮಿಸಿದ ಸಚಿವ ಡಾ. ನಾರಾಯಣಗೌಡ ನಿಜವಾದ ಮಂಡ್ಯದ ಗಂಡು ಎಂದು ಕಂದಾಯ ಸಚಿವ ಆರ್.ಅಶೋಕ್ ಹಾಡಿ ಹೊಗಳಿದ್ದಾರೆ.
ಕೃಷ್ಣರಾಜಪೇಟೆ ಪಟ್ಟಣದ ಜಯಮ್ಮ ಶಿವಲಿಂಗೇಗೌಡ ಸಮುದಾಯ ಭವನದಲ್ಲಿ ಬುಧವಾರ ನಡೆದ ಗ್ರಾಮ ಸ್ವರಾಜ್ಯ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಉಪಚುನಾವಣೆಯಲ್ಲಿ ಗೆದ್ದು ನಾರಾಯಣಗೌಡ ಮಂಡ್ಯ ಜಿಲ್ಲೆಯಲ್ಲಿ ಬಿಜೆಪಿ ಪಕ್ಷಕ್ಕೆ ಶಕ್ತಿತಂದು ಕೊಟ್ಟಿದ್ದಾರೆ. ಈ ಮೂಲಕ ಮೂರು ಪ್ರಮುಖ ಖಾತೆಗಳಿಗೆ ಸಚಿವರಾಗಿ ಹೆಚ್ಚುವರಿಯಾಗಿ ಮಂಡ್ಯ ಜಿಲ್ಲಾ ಉಸ್ತುವಾರಿಯನ್ನು ಬೋನಸ್ ಆಗಿ ಪಡೆದುಕೊಂಡರು. ಜಿಲ್ಲೆಯವರು ಜಿಲ್ಲಾ ಉಸ್ತುವಾರಿ ಮಂತ್ರಿಯಾಗಲಿಲ್ಲ ಎಂಬ ಕೊರಗನ್ನೂ ಹೋಗಲಾಡಿಸಿದರು ಎಂದರು. ಮುಂದೆ ಓದಿ...
"ಬೇರೆ ಪಕ್ಷಗಳಿಗೆ ನಡುಕ ಉಂಟಾಗಿದೆ"
ರಾಜ್ಯದ ಶಿರಾ ಮತ್ತು ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗಳು ಭರ್ಜರಿ ಗೆಲುವು ಸಾಧಿಸಿರುವುದನ್ನು ಕಂಡು ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳಿಗೆ ನಡುಕ ಆರಂಭವಾಗಿದೆ. ಕಾಂಗ್ರೆಸ್ ಪಕ್ಷವು ಗ್ರಾಮ ಪಂಚಾಯಿತಿ ಚುನಾವಣೆ ಎದುರಿಸಲು ಸಿದ್ಧತೆ ಮಾಡಿಕೊಳ್ಳದೆ ಗಾಢವಾದ ನಿದ್ರೆಯಲ್ಲಿದ್ದರೆ, ಜೆಡಿಎಸ್ ಪಕ್ಷವು ಚುನಾವಣಾ ಕಣದಿಂದಲೇ ಮಾಯವಾದಂತೆ ಕಾಣುತ್ತಿದೆ ಎಂದು ವ್ಯಂಗ್ಯವಾಡಿದರು.
ರೈತರ ಖಾತೆಗೆ ಇನ್ನೂ ಹಣ ಬಂದಿಲ್ಲ; ಬಿಸಿ ಮುಟ್ಟಿಸಿದ ಸಚಿವ ನಾರಾಯಣಗೌಡ
ಲವ್ ಜಿಹಾದ್ ಗೆ ಬಿಜೆಪಿಯಿಂದ ಸಂಪೂರ್ಣ ಬೆಂಬಲ
ಕೆ.ಆರ್.ಪೇಟೆ ಮತ್ತು ಶಿರಾ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲ್ಲಲ್ಲ ಎಂದು ಭವಿಷ್ಯ ನುಡಿದಿದ್ದರು. ಆದರೆ ಪ್ರಬುದ್ಧ ಮತದಾರರು ಕೆ.ಆರ್.ಪೇಟೆಯ ಫಲಿತಾಂಶವನ್ನು ಶಿರಾದಲ್ಲಿ ಪ್ರತಿಬಿಂಬಿಸುವ ಮೂಲಕ ರಾಜ್ಯದ ಅಭಿವೃದ್ಧಿ ಹಾಗೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಬೆಂಬಲಿಸಿ ನಮ್ಮ ಮತ ರಾಜ್ಯದ ಅಭಿವೃದ್ಧಿಗೆ ಎಂದು ನಿರೂಪಿಸಿದ್ದಾರೆ. ಲವ್ ಜಿಹಾದ್ಗೆ ಬೆಂಬಲ ನೀಡುತ್ತಿರುವ ಕಾಂಗ್ರೆಸ್ ಪಕ್ಷ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ನೈತಿಕವಾಗಿ ದಿವಾಳಿಯಾಗಿದ್ದಾರೆ. ಹಿಂದುತ್ವ ಹಾಗೂ ಹಿಂದೂ ಹೆಣ್ಣು ಮಕ್ಕಳ ಗೌರವವನ್ನು ಹಾಳು ಮಾಡಿ ನಮ್ಮ ಭಾರತೀಯ ಸಂಸ್ಕೃತಿಗೆ ಧಕ್ಕೆ ತರುತ್ತಿರುವ ಲವ್ ಜಿಹಾದ್ ಗೆ ಭಾರತೀಯ ಜನತಾ ಪಕ್ಷದ ವಿರೋಧವಿದೆ. ಒಂದು ವೇಳೆ ಲವ್ ಜಿಹಾದ್ ವಿರುದ್ಧ ಕಾನೂನು ಜಾರಿಯಾಗಬೇಕಾಗಿ ಬಂದರೆ ಬಿಜೆಪಿ ಪಕ್ಷದ ಸಂಪೂರ್ಣ ಬೆಂಬಲವಿದೆ ಎಂದರು.
"ಮುಂದಿನ ಚುನಾವಣೆಯಲ್ಲೂ ಬಿಜೆಪಿಗೇ ಜಯ"
ಸಚಿವ ಎಸ್.ಟಿ.ಸೋಮಶೇಖರ್ ಮಾತನಾಡಿ, ಕಾಂಗ್ರೆಸ್ ಪಕ್ಷವು ಜನರಿಂದ ತಿರಸ್ಕೃತವಾಗುತ್ತಿರುವ ಪಕ್ಷ. ಮುಂದೆ ನಡೆಯಲಿರುವ ಮಸ್ಕಿ, ಬಸವಕಲ್ಯಾಣ ವಿಧಾನಸಭಾ ಉಪಚುನಾವಣೆಗಳು ಹಾಗೂ ಧಾರವಾಡ ಗ್ರಾಮೀಣ ಲೋಕಸಭಾ ಉಪಚುನಾವಣೆಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಜಯಭೇರಿ ಬಾರಿಸಲಿದ್ದಾರೆ ಎಂದು ಹೇಳಿದರು.
ರಾಮನಗರ ರೇಷ್ಮೆ ಮಾರುಕಟ್ಟೆ ಜಮೀನು ವಿವಾದ ತಕ್ಷಣ ಬಗೆಹರಿಸಲು ಸಚಿವರಿಂದ ಖಡಕ್ ಎಚ್ಚರಿಕೆ
Recommended Video
"ಆಸ್ತಿ ಸಂಪಾದನೆ ಮಾಡಲು ರಾಜಕಾರಣಕ್ಕೆ ಬಂದಿಲ್ಲ"
ಜಿಲ್ಲಾ
ಉಸ್ತುವಾರಿ
ಸಚಿವ
ಡಾ.ನಾರಾಯಣಗೌಡ
ಮಾತನಾಡಿ,
ಜಿಲ್ಲೆಯ
ಏಳೂ
ವಿಧಾನಸಭಾ
ಕ್ಷೇತ್ರಗಳಲ್ಲಿ
ಬಿಜೆಪಿ
ಅಭ್ಯರ್ಥಿಗಳು
ಗೆಲುವು
ಸಾಧಿಸುವ
ನಿಟ್ಟಿನಲ್ಲಿ
ವಿಜಯೇಂದ್ರ
ಅವರ
ನೇತೃತ್ವದಲ್ಲಿ
ಗೇಮ್
ಪ್ಲಾನ್
ಸಿದ್ಧಪಡಿಸುತ್ತಿದ್ದೇವೆ.
ವಿರೋಧಿಗಳು
ಅಪಪ್ರಚಾರ
ನಡೆಸುತ್ತಿರುವಂತೆ
ನಾನು
ಹಣ
ಆಸ್ತಿ
ಸಂಪಾದನೆ
ಮಾಡಲು
ರಾಜಕಾರಣಕ್ಕೆ
ಬಂದಿಲ್ಲ.
ಮುಂಬರುವ
ಗ್ರಾಮ
ಪಂಚಾಯಿತಿ
ಚುನಾವಣೆಯಲ್ಲಿ
ಬಿಜೆಪಿ
ಬೆಂಬಲಿತ
ಅಭ್ಯರ್ಥಿಗಳನ್ನು
ಗೆಲ್ಲಿಸುವ
ಮೂಲಕ
ನನಗೆ
ಶಕ್ತಿ
ತುಂಬಬೇಕು
ಎಂದು
ಮನವಿ
ಮಾಡಿದರು.
ರಾಜ್ಯದ
ಆಹಾರ
ನಾಗರೀಕ
ಸರಬರಾಜು
ಸಚಿವ
ಗೋಪಾಲಯ್ಯ,
ವಿಧಾನಪರಿಷತ್
ಸದಸ್ಯ
ರವಿಕುಮಾರ್,
ಬಿಜೆಪಿ
ಜಿಲ್ಲಾಧ್ಯಕ್ಷ
ಕೆ.ಜೆ.ವಿಜಯಕುಮಾರ್,
ರಾಜ್ಯ
ಬಿಜೆಪಿ
ಎಸ್.ಸಿ.ಮೋರ್ಚಾ
ಅಧ್ಯಕ್ಷ
ಛಲವಾದಿ
ನಾರಾಯಣಸ್ವಾಮಿ,
ಬಿಜೆಪಿ
ರಾಜ್ಯ
ಮಹಿಳಾ
ಘಟಕದ
ಉಪಾಧ್ಯಕ್ಷೆ
ಪ್ರಮೀಳಾ
ವರದರಾಜೇಗೌಡ,
ತಾಲೂಕು
ಮಹಿಳಾ
ಘಟಕದ
ಅಧ್ಯಕ್ಷೆ
ಲತಾ,
ನಗರ
ಮಹಿಳಾ
ಘಟಕದ
ಅಧ್ಯಕ್ಷೆ
ಚಂದ್ರಕಲಾರಮೇಶ್,
ತಾಲೂಕು
ಬಿಜೆಪಿ
ಅಧ್ಯಕ್ಷ
ಪರಮೇಶ್
ಅರವಿಂದ್
ಸೇರಿದಂತೆ
ಹಲವರು
ಸಮಾವೇಶದಲ್ಲಿದ್ದರು.