ವಿಶ್ವವಿದ್ಯಾಲಯಕ್ಕೆ ಅಮರಶಿಲ್ಪಿ ಜಕಣಾಚಾರಿ ಹೆಸರಿಡಿ :ಕೆಪಿ ನಂಜುಂಡಿ ಆಗ್ರಹ
ಅಮರಶಿಲ್ಪಿ ಜಕಣಾಚಾರಿ ಅವರ ಹೆಸರನ್ನು ರಾಜ್ಯದ ಯಾವುದಾದರೂ ವಿಶ್ವವಿದ್ಯಾಲಯಕ್ಕೆ ನಾಮಕರಣ ಮಾಡಬೇಕೆಂದು ಆಗ್ರಹಿಸಿದ ರಾಜ್ಯ ವಿಶ್ವಕರ್ಮ ಸಮಾಜದ ನಾಯಕ ಕೆ.ಪಿ.ನಂಜುಂಡಿ
ಮಂಡ್ಯ, ಅಕ್ಟೋಬರ್ 31: ಅಮರಶಿಲ್ಪಿ ಜಕಣಾಚಾರಿ ಅವರ ಹೆಸರನ್ನು ರಾಜ್ಯದ ಯಾವುದಾದರೂ ವಿಶ್ವವಿದ್ಯಾಲಯಕ್ಕೆ ನಾಮಕರಣ ಮಾಡಬೇಕೆಂದು ಆಗ್ರಹಿಸಿ, ನವೆಂಬರ್ 28ರಂದು ಹಾಸನದಿಂದ ಬೇಲೂರುವರೆಗೆ ಪಾದಯಾತ್ರೆ ನಡೆಸಲಾಗುವುದು ಎಂದು ರಾಜ್ಯ ವಿಶ್ವಕರ್ಮ ಸಮಾಜದ ನಾಯಕ ಕೆ.ಪಿ.ನಂಜುಂಡಿ ಹೇಳಿದ್ದಾರೆ.
ಮಂಡ್ಯ
ನಗರಕ್ಕೆ
ಭಾನುವಾರ
ಭೇಟಿ
ನೀಡಿದ್ದ
ಸಂದರ್ಭ
ಜಿಲ್ಲಾ
ವಿಶ್ವಕರ್ಮ
ಸಮಾಜದ
ಮುಖಂಡರೊಂದಿಗೆ
ಸಭೆ
ನಡೆಸಿ
ನಂತರ
ಮಾತನಾಡಿದ
ಅವರು,
ಶಿಲ್ಪಕಲೆಗಳಲ್ಲಿ
ಸುಮಾರು
900
ವರ್ಷಗಳ
ಹಿಂದೆಯೇ
ಪ್ರಖ್ಯಾತಿ
ಪಡೆದಿರುವ
ಅಮರಶಿಲ್ಪಿ
ಜಕಣಾಚಾರಿ
ಅವರ
ಹೆಸರನ್ನು
ವಿಶ್ವವಿದ್ಯಾಲಯ
ಅಥವಾ
ವಿವಿಧ
ಪಾರ್ಕ್
ಗಳಿಗೆ
ನಾಮಕರಣ
ಮಾಡಿ,
ಸಮಾಜದ
ಅಭಿವೃದ್ಧಿಗೆ
ಸರ್ಕಾರ
ಗಮನ
ನೀಡಬೇಕು
ಎಂದು
ಒತ್ತಾಯಿಸಿ
ಪಾದಯಾತ್ರೆ
ಹಮ್ಮಿಕೊಂಡಿರುವುದಾಗಿ
ತಿಳಿಸಿದರು.
ಜಗತ್ಪ್ರಸಿದ್ಧಿ ಪಡೆದಿರುವ ಅಮರಶಿಲ್ಪಿ ಜಕಣಾಚಾರಿ ಅವರನ್ನು ಜಾತಿ-ಭೇದವಿದಲ್ಲದೆ ಜನತೆ ಗೌರವಿಸುತ್ತಿರುವುದು ಹೆಮ್ಮೆಯ ಸಂಗತಿ. ಯುವ ಪೀಳಿಗೆಗೆ ಜಕಣಚಾರಿ ಅವರ ಸಾಧನೆ ಮತ್ತು ಕಾರ್ಯತತ್ಪರತೆ ಬಗ್ಗೆ ಅರಿವು ಮೂಡಿಸಲು ಜಿಲ್ಲಾ ಮಟ್ಟದಲ್ಲಿ ವಿವಿಧ ಪ್ರಮುಖ ವೃತ್ತ, ಪಾರ್ಕ್ ಮತ್ತು ಸಾರ್ವಜನಿಕ ಸ್ಥಳಗಳಿಗೆ ನಾಮಕರಣ ಮಾಡುವುದು ಅಗತ್ಯವಿದೆ ಎಂದು ಹೇಳಿದರು.
ಪಾದಯಾತ್ರೆ: ದಕ್ಷಿಣ ಭಾರತದಿಂದ ಈ ಪಾದಯಾತ್ರೆಗೆ ಸಾವಿರಾರು ಮಂದಿ ಆಗಮಿಸಲಿದ್ದಾರೆ. ಪಾದಯಾತ್ರೆಯ ಕಾರ್ಯಕ್ರಮವು ಬೇಲೂರಿನಲ್ಲಿ ನಡೆಯಲಿದ್ದು, ವಿವಿಧ ಪಕ್ಷಗಳ ಶಾಸಕರು, ಸಚಿವರು, ರಾಜಕೀಯ ನಾಯಕರು ಆಗಮಿಸಲಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷ ಹೊಸಹಳ್ಳಿ ಬೋರೇಗೌಡ, ಜಿಲ್ಲಾ ವಿಶ್ವಕರ್ಮ ಸಮಾಜದ ಅಧ್ಯಕ್ಷ ಸತೀಶ್, ರಾಜ್ಯ ವಿಶ್ವಕರ್ಮ ಅಭಿವೃದ್ಧಿ ನಿಗಮದ ನಿರ್ದೇಶಕರಾದ ಶ್ರೀನಿವಾಸ್, ಪ್ರಕಾಶ್, ಕರಿಯಪ್ಪಾಚಾರ್, ನಂದಕುಮಾರ್ ಹಾಜರಿದ್ದರು.