ತುಂಬೈತೆ ಕೆಆರ್ ಎಸ್: ರುದ್ರರಮಣೀಯ ವಿಡಿಯೋ ಐತೆ ನೋಡಿ!
ಮಂಡ್ಯ, ಜುಲೈ 16: ಐದು ವರ್ಷದ ಬಳಿಕ ಕೃಷ್ಣರಾಜ ಸಾಗರ ಅಣೆಕಟ್ಟು ಭರ್ತಿಯಾಗಿದೆ. ಕರ್ನಾಟಕದಲ್ಲಿ ಯಾರ ಬಾಯಲ್ಲಿ ಕೇಳಿ, ಈಗ ಅದೇ ಮಾತು!
ವಾಟ್ಸಾಪ್ ಗಳಲ್ಲೂ ಅದೇ ವಿಡಿಯೋ. ಕಳೆದ ವರ್ಷ ಈ ಸಮಯದಲ್ಲಿ ಕೆಆರ್ ಎಸ್ ಜಲಾಶಯದಲ್ಲಿ 78 ಅಡಿ ಇದ್ದ ನೀರಿನ ಮಟ್ಟ ಈ ವರ್ಷ ಜುಲೈ ಮಧ್ಯದಲ್ಲೇ 123.27(ನೆಲಮಟ್ಟದಿಂದ) ಅಡಿ ತಲುಪಿದೆ.
ಕೆಆರ್ಎಸ್ನಿಂದ 50 ಸಾವಿರ ಕ್ಯುಸೆಕ್ ನೀರು ಹೊರಕ್ಕೆ, ಪ್ರವಾಹ ಭೀತಿ
ಜಲಾಶಯದಿಂದ 50 ಸಾವಿರ ಕ್ಯೂಸೆಕ್ಸ್ ನೀರನ್ನು ಹೊರಬಿಡಲಾಗುತ್ತಿದೆ. ಕೆಆರ್ ಎಸ್ ನ ಗರಿಷ್ಠ ಮಟ್ಟ 124.80 ಅಡಿ. ಕಾವೇರಿ ನದಿ ಪಾತ್ರದಲ್ಲಿ ಸಾಕಷ್ಟು ಮಳೆಯಾದ ಪರಿಣಾಮ ಜಲಾಶಯಕ್ಕೆ ಒಳಹರಿವು ಹೆಚ್ಚಿದ್ದು, ಇದೀಗ ಈ ಭಾಗದ ಜನರು ಪ್ರವಾಹ ಭೀತಿ ಎದುರಿಸುವಂತಾಗಿದೆ. ಮಂಡ್ಯ ಜಿಲ್ಲೆಯ ಕೆಆರ್ ಎಸ್ ಜಲಾಶಯದ ಸುಂದರ, ಮನಮೋಹ, ರುದ್ರರಮಣೀಯ ವಿಡಿಯೋಗಳು ಟ್ವಿಟ್ಟರ್ ನಲ್ಲಿ ಹರಿದಾಡುತ್ತಿವೆ.
|
ಆಹಾ, ಮನಮೋಹಕ!
ಕೆಆರ್ ಎಸ್, ಕಬಿನಿ, ಹಾರಂಗಿ ಮತ್ತು ಹೇಮಾವತಿ(ಗೊರೂರು) ಎಲ್ಲಾ ಜಲಾಶಯಗಳೂ ಭರ್ತಿಯಾಗಿವೆ. ಕರ್ನಾಟಕಕ್ಕೆ ಈ ಬಾರಿ ಸಮೃದ್ಧಿಯ ಮಳೆಯಾಗಿದೆ ಎಂದು ಮನಮೋಹಕ ವಿಡಿಯೋವೊಂದನ್ನು ಪೋಸ್ಟ್ ಮಾಡಿದ್ದಾರೆ ಶ್ರೀವತ್ಸ.
|
ರುದ್ರ ರಮಣೀಯ!
ಕೆಆರ್ ಎಸ್ ತುಂಬಿ ತುಳುಕುತ್ತಿದೆ. ಎಲ್ಲೆಲ್ಲೂ ದಟ್ಟ ಮಂಜನ್ನು ಹಬ್ಬಿಸಿರುವ ಕೆಆರ್ ಎಸ್ ನ ವಿಡಿಯೋ ಎಷ್ಟು ರುದ್ರವೋ, ಅಷ್ಟೇ ರಮಣೀಯವೂ ಹೌದು!
ಜುಲೈನಲ್ಲಿಯೇ ಕರ್ನಾಟಕದ ಜಲಾಶಯಗಳು ಭರ್ತಿ
|
ತುಂಬಿಹಳು ಕಾವೇರಿ!
124.80 ಗರಿಷ್ಠ ಮಟ್ಟ(ನೆಲಮಟ್ಟದಿಂದ)ದ ಕೆಆರ್ ಎಸ್ ಜಲಾಶಯ ತುಂಬಿ ತುಳುಕುತ್ತಿದ್ದು, ಆ ಸುಂದರ ದೃಶ್ಯ ಕಣ್ತುಂಬಿಕೊಳ್ಳಿ...
|
ಎಷ್ಟು ಚೆಂದ!
ಕೆಆರ್ ಎಸ್ ಗೇಟ್ ನಿಂದ ಹೀಗೆ ನೀರು ಹರಿದು ಹೋಗುವುದನ್ನು ನೋಡುವುದಕ್ಕೆ ಎಷ್ಟು ಚೆಂದ ಎಂದು ಚೆಂದದ ವಿಡಿಯೋವೊಂದನ್ನು ಪೋಸ್ಟ್ ಮಾಡಿದ್ದಾರೆ ವಿನಯ್ ನಾರಾಯಣ ಸ್ವಾಮಿ.
|
ಅಮೋಘ ದೃಶ್ಯ
ಈ ಅಮೋಘ ದೃಶ್ಯ ನೋಡಲು ಕಣ್ಣು ಸಾಲದು. ಕೆಆರ್ ಎಸ್ ತುಂಬಿದೆ. ತಾನು ಹರಿಯುವಲ್ಲೆಲ್ಲ ಜೀವ ನೀಡುವ ಜೀವನದಿ ಈ ಕಾವೇರಿ ಎಂದಿದ್ದಾರೆ ಕವಿತಾ ರೆಡ್ಡಿ.
|
ಮದುಂಬಿ ಹರಿಯುತಿಹಳು ಹೇಮಾವತಿ
ಸುಂದರ ಪಶ್ಚಿಮ ಘಟ್ಟದಲ್ಲಿ ಹುಟ್ಟುವ ಹೇಮಾವತಿ ನದಿ 245 ಕಿ.ಮಿ.ಉದ್ದವಿದೆ. ಇದು ಕೆಆರ್ ಎಸ್ ಸಮೀಪ ಕಾವೇರಿ ನದಿಯನ್ನು ಸೇರುತ್ತದೆ. ಈ ವರ್ಷ ಉತ್ತಮ ಮಳೆಯಿಂದಾಗಿ ಹೇಮಾವತಿ ಮೈದುಂಬಿ ಹರಿಯುತ್ತಿದ್ದಾಳೆ. ಕೊರುರು ಡ್ಯಾಮ್ ನಿಂದ ಹೇಮಾವತಿ ಹರಿಯುತ್ತಿರುವ ಅತ್ಯದ್ಭುತ ದೃಶ್ಯ ಇಲ್ಲಿದೆ ಎಂದು ವಿಡಿಯೋ ಪೋಸ್ಟ್ ಮಾಡಿದ್ದಾರೆ ಕಿರಣ್ ಕುಮಾರ್ ಎಸ್.