ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಯೋಧ ಗುರು ತಂದೆ, ಚಿಕ್ಕಮ್ಮ ಅಸ್ವಸ್ಥ : ಆಸ್ಪತ್ರೆಗೆ ದಾಖಲು

|
Google Oneindia Kannada News

ಮೈಸೂರು, ಫೆಬ್ರವರಿ 16 : ಆತ್ಮಾಹುತಿ ದಾಳಿಗೆ ಬಲಿಯಾದ ವೀರಯೋಧ ಎಚ್‌.ಗುರು ಅವರ ಹುಟ್ಟೂರು ಮದ್ದೂರು ತಾಲೂಕು ಗುಡಿಗೆರೆಗೆ ಆಗಮಿಸುತ್ತಿದ್ದು, ಇತ್ತ ಅಂತ್ಯಕ್ರಿಯೆಗೆ ಸಿದ್ಧತೆ ನಡೆಯುತ್ತಿದೆ.

 ಹುತಾತ್ಮ ಯೋಧ ಗುರು ಅಂತ್ಯಸಂಸ್ಕಾರ ಜಾಗ ಬದಲು ಹುತಾತ್ಮ ಯೋಧ ಗುರು ಅಂತ್ಯಸಂಸ್ಕಾರ ಜಾಗ ಬದಲು

ಇದರೊಟ್ಟಿಗೆ ಮೃತ ಯೋಧರ ತಂದೆ ಹೊನ್ನಯ್ಯ ಅಸ್ವಸ್ಥಗೊಂಡು ಆತಂಕ ಮೂಡಿಸಿದ್ದರು. ತಕ್ಷಣವೇ ಅವರನ್ನು ಆಂಬ್ಯುಲೆನ್ಸ್‌ನಲ್ಲಿ ಮಂಡ್ಯದ ಮಿಮ್ಸ್‌ ಬೋಧಕ ವೈದ್ಯರು ಚಿಕಿತ್ಸೆ ನೀಡಿದರು. ರಕ್ತದೊತ್ತಡದಲ್ಲಿ ಸ್ವಲ್ಪ ವ್ಯತ್ಯಾಸ ಕಂಡು ಬಂದಿದ್ದರಿಂದ ಮಿಮ್ಸ್‌ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಿ ವಾಪಸ್‌ ಕರೆ ತಂದರು.

ಮಂಡ್ಯ ಯೋಧ ಗುರು ಅಂತ್ಯಕ್ರಿಯೆಯಲ್ಲಿ ನಿರ್ಮಲಾ ಸೀತಾರಾಮನ್ ಭಾಗಿ ಮಂಡ್ಯ ಯೋಧ ಗುರು ಅಂತ್ಯಕ್ರಿಯೆಯಲ್ಲಿ ನಿರ್ಮಲಾ ಸೀತಾರಾಮನ್ ಭಾಗಿ

ಇತ್ತ ಹೊನ್ನಯ್ಯರ ಬಳಿಕ ಮೃತ ಯೋಧ ಗುರು ಚಿಕ್ಕಮ್ಮ ಭಾಗ್ಯಮ್ಮ ಅಸ್ವಸ್ಥರಾಗಿದ್ದಾರೆ. ತೀವ್ರ ಸುಸ್ತಿನಿಂದ ತಲೆತಿರುಗಿಬಿದ್ದ ಹಿನ್ನೆಲೆ, ಕೂಡಲೇ ಭಾಗ್ಯಮ್ಮರನ್ನು ಹೊತ್ತಕೊಂಡು ಆಂಬುಲೆನ್ಸ್ ನಲ್ಲಿ ಸಂಬಂಧಿಕರು ಕರೆದ್ಯೊಯ್ದು ಚಿಕಿತ್ಸೆ ನೀಡಿದ್ದಾರೆ. ಕಳೆದೆರಡು ದಿನಗಳಿಂದ ಅತ್ತು ಅಸ್ವಸ್ಥರಾದ ಭಾಗ್ಯಮ್ಮ ಚಿಕಿತ್ಸೆಗಾಗಿ ಕೆಎಂ ದೊಡ್ಡಿ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.

Martyr Guru father and aunt hospitalized

ಗುರು ತಾಯಿ ಹಾಗೂ ಪತ್ನಿ ಸಹ ಆಹಾರ ಸೇವಿಸುತ್ತಿರಲಿಲ್ಲ. ಹಾಗಾಗಿ ಸಂಬಂಧಿಕರು ಒತ್ತಾಯ ಪೂರ್ವಕವಾಗಿ ಅವರಿಗೆ ಗ್ಲುಕೋಸ್ ಹಾಗೂ ತಿಂಡಿ ತಿನಿಸುಗಳನ್ನು ನೀಡುತ್ತಿದ್ದಾರೆ.

English summary
CRPR Soldier Father Honnaiaha and aunt bhagyamma hospitalized, due to tired of crying.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X