ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಡ್ಯದಲ್ಲಿ ಸ್ವಾಭಿಮಾನಿ ವಿಜಯೋತ್ಸವಕ್ಕೆ ಸಂಭ್ರಮದ ಚಾಲನೆ

|
Google Oneindia Kannada News

ಮಂಡ್ಯ, ಮೇ 29: ಜಿದ್ದಾ-ಜಿದ್ದಿನ ಚುನಾವಣೆಯಲ್ಲಿ ತಮಗೆ ಗೆಲುವು ತಂದುಕೊಟ್ಟ ಮಂಡ್ಯದ ಮತದಾರರಿಗೆ ಧನ್ಯವಾದ ಸಲ್ಲಿಸಲು ಸುಮಲತಾ ಅವರು 'ಸ್ವಾಭಿನಾಮಿ ವಿಜಯೋತ್ಸವ'ದಲ್ಲಿ ಪಾಲ್ಗೊಂಡಿದ್ದಾರೆ.

ಮಂಡ್ಯದ ಸಿಲ್ವರ್ ಜ್ಯೂಬಿಲಿ ಮೈದಾನದಲ್ಲಿ 'ಸ್ವಾಭಿಮಾನಿ ವಿಜಯೋತ್ಸವ'ವನ್ನು ಆಯೋಜಿಸಲಾಗಿದೆ. ಮಂಡ್ಯ ಸಂಸದೆ ಸುಮಲತಾ, ನಟರಾದ ದರ್ಶನ್, ಯಶ್, ರಾಕಲೈನ್ ವೆಂಕಟೇಶ್, ದೊಡ್ಡಣ್ಣ, ಬಾಬು ರಾಜೇಂದ್ರ ಪ್ರಸಾದ್, ಡಾ.ರವೀಂದ್ರ ಇನ್ನೂ ಹಲವರು ಉದ್ಘಾಟನೆ ಮಾಡಿದರು.

ಅಂಬರೀಶ್ ಸಮಾಧಿಗೆ ನಮಿಸಿ ಮಂಡ್ಯದತ್ತ ತೆರಳಿದ ಸುಮಲತಾಅಂಬರೀಶ್ ಸಮಾಧಿಗೆ ನಮಿಸಿ ಮಂಡ್ಯದತ್ತ ತೆರಳಿದ ಸುಮಲತಾ

ಸಮಾವೇಶದಲ್ಲಿ ಭಾರಿ ಸಂಖ್ಯೆಯಲ್ಲಿ ಮಂಡ್ಯದ ಜನತೆ ಭಾಗವಹಿಸಿದ್ದಾರೆ. ಯಶ್, ದರ್ಶನ್, ಸುಮಲತಾ, ಅಭಿಶೇಕ್ ಅವರುಗಳಿಗೆ ಭಾರಿ ಜಯಘೋಷಗಳು ಸಮಾವೇಶದಲ್ಲಿ ಕೇಳಿಬರುತ್ತಿವೆ.

Mandya MP Sumalathas Svabhimani Vijayayothsava started in Mandya

ಸುಮಲತಾ ಅವರ ಬೆನ್ನಿಗೆ ನಿಂತು ಚುನಾವಣೆಯಲ್ಲಿ ಹಗಲಿರುಳು ಶ್ರಮಿಸಿದ್ದ ಯಶ್, ದರ್ಶನ್ ಸೇರಿ ಹಲವರು ನಾಯಕರು ಸಂತೋಶದಿಂದ ವೇದಿಕೆಯ ಮೇಲೆ ಪರಸ್ಪರ ಅಭಿನಂದಿಸಿಕೊಂಡರು.

ಸುಮಲತಾ, ದರ್ಶನ್, ಯಶ್ ಅವರು ಏನು ಮಾತನಾಡಲಿದ್ದಾರೆ ಎಂದು ಕೇಳಲು ಲಕ್ಷಾಂತರ ಮಂದಿ ಕಾಯುತ್ತಿದ್ದಾರೆ. ಕೆಲವೇ ಕ್ಷಣಗಳಲ್ಲಿ ಅತಿಥಿಗಳ ಭಾಷಣ ಪ್ರಾರಂಭವಾಗಲಿದೆ.

ಸುಮಲತಾ ಸೇರಿ, 2019ರ ಪಕ್ಷೇತರ ಸಂಸದರು ಯಾರು ಯಾರು? ಸುಮಲತಾ ಸೇರಿ, 2019ರ ಪಕ್ಷೇತರ ಸಂಸದರು ಯಾರು ಯಾರು?

ಸಮಾವೇಶದಲ್ಲಿ ಅಂಬರೀಶ್ ಅವರ ಕುರಿತು ಪತ್ರಕರ್ತ ಶರಣ ಹುಲ್ಲೂರು ಅವರು ಬರೆದಿರುವ "ವ್ಯಕ್ತಿ ವ್ಯಕ್ತಿತ್ವ ವರ್ಣರಂಜಿತ ಬದುಕು' ಪುಸ್ತಕ, ಸಿರಿಗೆರೆ ಯರ್ರಿಸ್ವಾಮಿ ಬರೆದಿರುವ 'ಸ್ನೇಹಶೀಲ' ಪುಸ್ತಕಗಳನ್ನು ಬಿಡುಗಡೆ ಮಾಡಿದರು.

ಸಂಸದೆ ಸುಮಲತಾ ಅವರಿಗೆ ಮಂಡ್ಯದ ಅಭಿಮಾನಿಗಳು ಭಾರಿ ಗಾತ್ರದ ಹಾರಗಳನ್ನು ಹಾಕುವ ಮೂಲಕ ಸನ್ಮಾನಿಸಿದರು.

English summary
Mandya MP Sumalatha inaugurated 'Svabhimani Vijayothsava' in Mandya. Sumalatha organized this program to thank Mandya people for voting her.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X