ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅಂಬರೀಶ್ ನಂಬಿ 20 ವರ್ಷ ಹಾಳು ಮಾಡಿಕೊಂಡೆ: ಶಿವರಾಮೇಗೌಡ

|
Google Oneindia Kannada News

Recommended Video

ಅಂಬರೀಷ್ ನಂಬಿ 20 ವರ್ಷ ಹಾಳುಮಾಡಿಕೊಂಡಿದ್ದೆ..! | Oneindia Kannada

ಮಂಡ್ಯ, ಏಪ್ರಿಲ್ 02: ಸುಮಲತಾ ಗಂಡನನ್ನು (ಅಂಬರೀಶ್) ನಂಬಿ ರಾಜಕೀಯ ಜೀವನದ ಇಪ್ಪತ್ತು ವರ್ಷ ಹಾಳು ಮಾಡಿಕೊಂಡೆ ಎಂದು ಮಂಡ್ಯ ಸಂಸದ ಎಲ್.ಆರ್.ಶಿವರಾಮೇಗೌಡ ಅವರು ಹೇಳಿದ್ದಾರೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ದರ್ಶನ್, ರಾಕ್‌ಲೈನ್ ವೆಂಕಟೇಶ್ ಸೇರಿ ಸುಮಲತಾ ಅಂಬರೀಶ್ ಪರ ನಿಂತಿರುವವನ್ನೆಲ್ಲಾ ಏಕವಚನದಲ್ಲಿಯೇ ಟೀಕಿಸಿರುವ ಶಿವರಾಮೇಗೌಡ ಅವರು ಸುಮಲತಾ ಅಂಬರೀಶ್ ಹಾಗೂ ಅಂಬರೀಶ್ ಅವರ ಬಗ್ಗೆಯೂ ಲಘುವಾಗಿ ಮಾತನಾಡಿದ್ದಾರೆ.

ಚಾಮುಂಡೇಶ್ವರಿಯಲ್ಲೂ ಸಿದ್ರಾಮಣ್ಣ ಪರ ದರ್ಶನ್ ಪ್ರಚಾರ ಮಾಡಿಲ್ವೇ, ಆದ್ರೆ ಏನಾಯ್ತು? ಚಾಮುಂಡೇಶ್ವರಿಯಲ್ಲೂ ಸಿದ್ರಾಮಣ್ಣ ಪರ ದರ್ಶನ್ ಪ್ರಚಾರ ಮಾಡಿಲ್ವೇ, ಆದ್ರೆ ಏನಾಯ್ತು?

ಈ ಸಿನಿಮಾದವರು ಶೂಟಿಂಗಿಗೆಂದು ಮಂಡ್ಯಕ್ಕೆ ಬಂದಂತಿದೆ, ಏಪ್ರಿಲ್ 18 ರ ಮತದಾನವಾದ ನಂತರ ಅವರೆಲ್ಲಾ ಕೈಗೆ ಸಿಗುವುದಿಲ್ಲ, ಟೆಂಟು ಕಿತ್ತುಕೊಂಡು ಬೆಂಗಳೂರಿಗೆ ಓಡಿ ಹೋಗುತ್ತಾರೆ ಎಂದು ಅವರು ಹೇಳಿದ್ದಾರೆ.

Mandya MP Shivarame gowda loose talk about Sumalatha

ಮಂಡ್ಯವನ್ನು ನಾಯ್ಡುಗಳ ಕೈಗೆ ಕೊಡಬೇಡಿ ಎಂದು ಹೇಳಿದ ಶಿವರಾಮೇಗೌಡ, ಸುಮಲತಾ ಆಂಧ್ರದ ನಾಯ್ಡು, ರಾಕ್‌ಲೈನ್ ವೆಂಕಟೇಶ್ ನಾಯ್ಡು, ಸುಮಲತಾ ಜೊತೆ ಇರುವ ಇನ್ನೂ ಹಲವರು ನಾಯ್ಡು ಅವರ ಕೈಗೆ ಮಂಡ್ಯ ಕೊಡಬೇಡಿ ಎಂದು ಶಿವರಾಮೇಗೌಡ ಹೇಳಿದ್ದಾರೆ.

ಸುಮಲತಾ ಜಾತಿ ಕೆದಕುವ ಶಿವರಾಮೇಗೌಡ್ರೇ, ಸೋನಿಯಾ ಬಳಿಯೂ ಇದನ್ನೇ ಕೇಳ್ತೀರಾ?ಸುಮಲತಾ ಜಾತಿ ಕೆದಕುವ ಶಿವರಾಮೇಗೌಡ್ರೇ, ಸೋನಿಯಾ ಬಳಿಯೂ ಇದನ್ನೇ ಕೇಳ್ತೀರಾ?

ಏಕವಚನದಲ್ಲಿ, ಲಘುವಾಗಿ ಮಾತನಾಡಿದ ಶಿವರಾಮೇಗೌಡ ಅವರು, ದರ್ಶನ್ ಅವರ ಬಗ್ಗೆಯೂ ಏಕವಚನದಲ್ಲಿ ಮಾತನಾಡಿದರು. ಚಿತ್ರರಂಗದವರನ್ನು ಟೂರಿಂಗ್ ಟಾಕೀಸ್‌ನವರು ಎಂದ ಶಿವರಾಮೇಗೌಡ ಅವರು, ಗೆದ್ದರೆ ಇವರನ್ನೆಲ್ಲಾ ಗುಡುಕಲು ಗಾಂಧಿ ನಗರಕ್ಕೆ ಹೋಗಬೇಕಾಗುತ್ತದೆ ಎಂದರು.

English summary
Mandya JDS leader present MP LR Shivarame gowda loose talks about Sumalatha and other movie industry people. He is campaigning for JDS candidate Nikhil Kumaraswamy.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X