ಜೆಡಿಎಸ್ ವಿರುದ್ಧ ಸಮರಕ್ಕೆ ಸುಮಲತಾಗೆ ಬೆಂಬಲ ನೀಡಿದ ರೈತ ಸಂಘ
ಮಂಡ್ಯ, ಮಾರ್ಚ್ 20: ಜೆಡಿಎಸ್ ವಿರುದ್ಧ ಸಮರ ಸಾರಿರುವ ಮಂಡ್ಯ ಲೋಕಸಭಾ ಕ್ಷೇತ್ರ ಪಕ್ಷೇತರ ಅಭ್ಯರ್ಥಿ ಸುಮಲತಾ ಅವರಿಗೆ ಮಂಡ್ಯ ರೈತ ಸಂಘ ಬೆಂಬಲ ಘೋಷಿಸಿದೆ.
ಸುಮಲತಾ ಅವರಿಗೆ ಮಂಡ್ಯದ ರೈತ ಸಂಘ ಬೆಂಬಲ ನೀಡಿರುವುದನ್ನು ಇಂದು ಸುಮಲತಾ ಅವರೇ ಬಹಿರಂಗ ಸಮಾವೇಶದಲ್ಲಿ ಹೇಳಿದರು. ಅವರಿಗೆ ಕೃತಜ್ಞತೆಯಾಗಿ ಹಸಿರು ಶಾಲು ಹೊದ್ದುಕೊಂಡರು.
ಸುಮಲತಾ ನಾಮಪತ್ರ ಸಲ್ಲಿಕೆ : ಡಿಕೆಶಿಗೆ ಕುಮಾರಸ್ವಾಮಿ ಫೋನ್ ಕರೆ!
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಮಂಡ್ಯದ ರೈತ ಸಂಘವು ಪಕ್ಷೇತರ ಅಭ್ಯರ್ಥಿ ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಬೆಂಬಲ ಘೋಷಿಸಿತ್ತು. ಆದರೆ ಅವರು ಜೆಡಿಎಸ್ನ ಅಭ್ಯರ್ಥಿ ಎದುರು ಸೋತರು.
ಮಂಡ್ಯ ಲೋಕಸಭೆ ಕ್ಷೇತ್ರದಲ್ಲಿ ಸುಮಲತಾ, ನಿಖಿಲ್ ಪ್ಲಸ್-ಮೈನಸ್ ಗಳೇನು?
ಮಂಡ್ಯದಲ್ಲಿ ರೈತ ಸಂಘ ಗಟ್ಟಿಯಾಗಿದ್ದು, ಅವರ ಬೆಂಬಲ ಸಿಕ್ಕಿರುವುದು ಸುಮಲತಾ ಅವರಿಗೆ ನೈತಿಕ ಬೆಂಬಲ ದೊರೆತಂತಾಗಿದೆ. ಚಿತ್ರರಂಗದ ಹಲವು ಪ್ರಮುಖರು ಸಹ ಸುಮಲತಾ ಅವರಿಗೆ ಬೆಂಬಲ ನೀಡಿದ್ದಾರೆ.
Comments
English summary
Mandya former organization extend support to Sumalatha for Mandya lok sabha elections 2019. Some of the big Kannada movie industry stars already supporting Sumalatha.
Story first published: Wednesday, March 20, 2019, 19:55 [IST]