ಮೇಲುಕೋಟೆಗೆ ಹರಕೆ ತೀರಿಸಲು ಬಂದ ಮಧ್ಯಪ್ರದೇಶ ಸಿಎಂ
ಮಂಡ್ಯ, ಜೂನ್ 26: ಮಂಡ್ಯ ಜಿಲ್ಲೆಯ ಮೇಲುಕೋಟೆಗೆ ಇಂದು ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಭೇಟಿ ನೀಡಿದ್ದರು. ಮೇಲುಕೋಟೆಯ ಚಲುವ ನಾರಾಯಣಸ್ವಾಮಿಯ ಹರಿಕೆ ತೀರಿಸಲು ಕುಟುಂಬ ಸಮೇತ ಬಂದಿದ್ದು, ದೇವರ ದರ್ಶನ ಪಡೆದರು.
Recommended Video
ಶಿವರಾಜ್ ಸಿಂಗ್ ಚೌಹಾಣ್ ಅವರು ಆಗಮಿಸುತ್ತಿದ್ದ ಹಿನ್ನೆಲೆಯಲ್ಲಿ ಮೇಲುಕೋಟೆ ದೇಗುಲದ ಬಳಿ ಭಾರೀ ಪೊಲೀಸ್ ಭದ್ರತೆಯನ್ನು ಒದಗಿಸಲಾಗಿತ್ತು. ಚೌಹಾಣ್ ಅವರನ್ನು ರಾಜ್ಯ ಸರ್ಕಾರದ ವತಿಯಿಂದ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ನಾರಾಯಣಗೌಡ ಅವರು ಸ್ವಾಗತಿಸಿದರು.
ಮೇಲುಕೋಟೆ ಚಲುವನ ದರ್ಶನ ಪಡೆದ ಯಡಿಯೂರಪ್ಪ
ಮೇಲುಕೋಟೆ
ದೇವಸ್ಥಾನಕ್ಕೆ
ತೆರಳುವ
ಮುನ್ನ
ಅವರು
ಜೀಯರ್
ಮಠಕ್ಕೆ
ಭೇಟಿ
ನೀಡಿದರು.
ಮಠದ
ಸ್ವಾಮೀಜಿ
ನೇತೃತ್ವದಲ್ಲಿ
ಮಠದಲ್ಲಿ
ಪೂರ್ಣಕುಂಭ
ಸ್ವಾಗತ
ಕೋರಲಾಯಿತು.
ಮಠದಲ್ಲಿ
ಪೂಜೆ
ಹಾಗೂ
ಪ್ರಸಾದ
ಸೇವನೆ
ಬಳಿಕ
ಮೇಲುಕೋಟೆ
ಚಲುವನಾರಾಯಣನ
ದರ್ಶನ
ಪಡೆದರು.
ನಮ್ಮ
ದೇಶ
ಇಂದು
ಕೊರೊನಾ
ಸಂಕಷ್ಟದಲ್ಲಿದೆ.
ಮಧ್ಯಪ್ರದೇಶದ ವಿಕಾಸದ ಜೊತೆ ಜನತೆ ಕಲ್ಯಾಣಕ್ಕೆ ಪೂಜೆ: ಒಂದು ಕಡೆ ಕೊರೊನಾ ಇದ್ದರೆ, ಮತ್ತೊಂದು ಕಡೆ ಗಡಿಯಲ್ಲಿ ಯುದ್ಧದ ಆಹ್ವಾನ ಇದೆ. ನಮ್ಮ ಯಶಸ್ವಿ ಪ್ರಧಾನಿ ನೇತೃತ್ವದಲ್ಲಿ ಕೊರೊನಾ ವೈರಸ್ ವಿರುದ್ಧ ಹೋರಾಟ ನಡೆಯುತ್ತಿದೆ. ಜೊತೆಗೆ ಸೇನೆ ನಮ್ಮ ಗಡಿಯನ್ನು ಕೂಡ ರಕ್ಷಣೆ ಮಾಡುತ್ತಿದೆ.
ನಮ್ಮ ನಮ್ಮ ರಾಜ್ಯಗಳಲ್ಲಿ ಒಳ್ಳೆ ಕೆಲಸ ಮಾಡಿ ಕೊರೊನಾ ವೈರಸ್ ಸಮಾಪ್ತಿಗೆ ಎಲ್ಲರೂ ಪ್ರಯತ್ನಿಸಬೇಕಿದೆ. ಮಧ್ಯಪ್ರದೇಶದ ವಿಕಾಸದ ಜೊತೆಗೆ ಪ್ರೀತಿಯ ಜನತೆಯ ಕಲ್ಯಾಣಕ್ಕೆ ಮೇಲುಕೋಟೆಯಲ್ಲಿ ಪೂಜೆ ಸಲ್ಲಿಸಿದ್ದೇನೆ. ಇಲ್ಲಿನ ರಾಮಾನುಜಚಾರ್ಯರು ಸಾವಿರಾರು ವರ್ಷಗಳ ಹಿಂದೆ ಏಕತೆಯ ಸಂದೇಶ ಸಾರಿದ್ದಾರೆ. ಅವರು ಎಲ್ಲರು ಒಂದೇ ಎಂದು ಹೇಳಿದ್ದಾರೆ. ಆ ಸಂದೇಶದಂತೆ ನಾವೆಲ್ಲವರು ಭಾರತದಲ್ಲಿ ಇರಬೇಕಿದೆ. ಏಕತೆಯ ಸಂದೇಶವನ್ನು ಮುನ್ನಡೆಸಬೇಕಿದೆ ಎಂದು ತಿಳಿಸಿದರು.