ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಡ್ಯವನ್ನು ನಾಯ್ಡುಮಯ ಮಾಡಲು ಹೊರಟಿದ್ದಾರೆ: ಶಿವರಾಮೇಗೌಡ

|
Google Oneindia Kannada News

ಮಂಡ್ಯ, ಏಪ್ರಿಲ್ 1: ನಾಯ್ಡು ಜಾತಿ ಬಿಟ್ಟು ಗೌಡರನ್ನು ಮದುವೆಯಾದ ಸುಮಲತಾ ಗೌಡ್ತಿ ಹೇಗೆ ಆಗುತ್ತಾರೆ ಎಂದು ಸಂಸದ ಶಿವರಾಮೇಗೌಡ ಪುನಃ ಜಾತಿ ಕೆದಕುವ ಮೂಲಕ ವಿವಾದ ಸೃಷ್ಟಿಸಿದ್ದಾರೆ.

ಅಂಬರೀಷ್ ಅವರು ಮಂಡ್ಯದ ಗೌಡರು ಸರಿ. ಆದರೆ, ಸುಮಲತಾ ನಾಯ್ಡು ಜಾತಿಗೆ ಸೇರಿದವರು. ಅವರು ಅಂತರ್ಜಾತಿ ವಿವಾಹವಾಗಿದ್ದರು. ಅಂಬರೀಷ್ ಅವರನ್ನು ಮದುವೆಯಾದ ಮಾತ್ರಕ್ಕೆ ನಾಯ್ಡು ಜನಾಂಗಕ್ಕೆ ಸೇರಿದ ಸುಮಲತಾ ಗೌಡ್ತಿ ಆಗುವುದಿಲ್ಲ. ಅವರ ಜಾತಿ ಯಾವುದೇ ಕಾರಣಕ್ಕೂ ಬದಲಾಗುವುದಿಲ್ಲ ಎಂದಿದ್ದಾರೆ.

ಮಂಡ್ಯದ ಜನರಿಗೆ ಗೊತ್ತು ನಾನ್ಯಾರೆಂದು:ವಿರೋಧಿಗಳಿಗೆ ಸುಮಲತಾ ಉತ್ತರ ಮಂಡ್ಯದ ಜನರಿಗೆ ಗೊತ್ತು ನಾನ್ಯಾರೆಂದು:ವಿರೋಧಿಗಳಿಗೆ ಸುಮಲತಾ ಉತ್ತರ

ನಾಯ್ಡು ಜನಾಂಗದವರು ಬೆಂಗಳೂರಿನ ತುಂಬ ಇದ್ದಾರೆ. ಅದೇ ರೀತಿ ಈಗ ಮಂಡ್ಯವನ್ನೂ ನಾಯ್ಡುಮಯವನ್ನಾಗಿಸಲು ಹೊರಟಿದ್ದಾರೆ. ರಾಕ್‌ಲೈನ್ ವೆಂಕಟೇಶ್ ಅವರೂ ನಾಯ್ಡು ಜನಾಂಗದವರು. ಜಿಲ್ಲೆಗೆ ಅವರ ಕೊಡುಗೆ ಏನು ಎಂಬುದನ್ನು ಬಿಡಿಸಿ ಹೇಳಲಿ. 15 ವರ್ಷದಿಂದ ರಾಜಕೀಯದಲ್ಲಿ ಕಾಣಿಸಿಕೊಳ್ಳದ ಅವರು ಈಗ ಏಕೆ ಬಂದಿದ್ದಾರೆ? ಆದ್ದರಿಂದಲೇ ಜಾತಿ ಪ್ರಶ್ನೆ ಮಾಡುತ್ತಿದ್ದೇನೆ ಎಂದು ಹೇಳಿದ್ದಾರೆ.

Lok Sabha elections 2019 MP Shivaramegowda Mandya Sumalatha not belong to gowda caste she is naidu

ದರ್ಶನ್ ಪಿಕ್ಚರ್‌ಗೆ ಮಾತ್ರವೇ ಸೀಮಿತವಾಗಿರಬೇಕು. ಜೆಡಿಎಸ್ ವಿರುದ್ಧ, ಒಕ್ಕಲಿಗ ಸಮುದಾಯದ ವಿರುದ್ಧ ತೊಡೆ ತಟ್ಟಿದರೆ ನಾವು ಸುಮ್ಮನಿರುವುದಿಲ್ಲ. ದರ್ಶನ್ ಅವರೇನೂ ಸುದೀಪ್, ಶಿವರಾಜ್‌ಕುಮಾರ್, ಪುನೀತ್ ರಾಜ್‌ಕುಮಾರ್ ಅವರಿಗಿಂತ ದೊಡ್ಡ ನಟರೇನಲ್ಲ. ಯಾವ ಪಕ್ಷದ ಅಭ್ಯರ್ಥಿಯ ಪರವೂ ಪ್ರಚಾರಕ್ಕೆ ಹೋಗುವುದಿಲ್ಲ ಎಂದು ಅವರು ಹೇಳಿದ್ದಾರೆ. ಈಗ ಇವರು ಬಂದು ಇಲ್ಲಿ ಏನು ಮಾಡಲು ಸಾಧ್ಯ? ಎಂದಿದ್ದಾರೆ.

ಸುಮಲತಾ ಜನಪ್ರಿಯತೆ ಸಹಿಸದೇ ಕುಮಾರಸ್ವಾಮಿಯಿಂದ ಕುತಂತ್ರಸುಮಲತಾ ಜನಪ್ರಿಯತೆ ಸಹಿಸದೇ ಕುಮಾರಸ್ವಾಮಿಯಿಂದ ಕುತಂತ್ರ

ಭಾನುವಾರ ಕೂಡ ಶಿವರಾಮೇಗೌಡ ಸುಮಲತಾ ಅವರ ಜಾತಿ ಪ್ರಸ್ತಾಪಿಸಿ ವಾಗ್ದಾಳಿ ನಡೆಸಿದ್ದರು.

ಸುಮಲತಾ ಅವರು ಮಳವಳ್ಳಿ ಹುಚ್ಚೇಗೌಡರ ಸೊಸೆ ಎನ್ನುವುದರಲ್ಲಿ ಅರ್ಥವೇ ಇಲ್ಲ. ಅವರು ನಾಯ್ಡು ಜನಾಂಗದವರು, ಮಂಡ್ಯ ಗೌಡ್ತಿ ಅಲ್ಲ ಎಂದು ಹೇಳಿಕೆ ನೀಡಿದ್ದರು.

ರಾಜ್ಯದ ಸಂಸದರಲ್ಲಿ ಯಾರ ವಿರುದ್ಧ ಎಷ್ಟು ಕ್ರಿಮಿನಲ್ ಪ್ರಕರಣಗಳಿವೆ?

ಅಲ್ಲದೆ, ಅಂಬರೀಷ್ ಅವರನ್ನು ರಾಜಕೀಯಕ್ಕೆ ಕರೆದುಕೊಂಡು ಬಂದಿದ್ದೇ ನಾನು. ಇನ್ನೂ ಕಣ್ಣುಬಿಡದ ಅಂಬರೀಷ್ ಅವರ ಮಗ ಅಭಿಷೇಕ್ ಅಪ್ಪನ ಹಾಗೆಯೇ ಮಾತನಾಡುತ್ತಿದ್ದಾನೆ. ಅಂಬರೀಷ್ ಅವರ ಮೃತದೇಹವನ್ನು ಮಂಡ್ಯಕ್ಕೆ ತಂದಾಗ ಸೇರಿದ್ದ ಜನಸಾಗರವನ್ನು ಕಂಡು ಸುಮಲತಾ ಚುನಾವಣೆಗೆ ಸ್ಪರ್ಧಿಸಿದ್ದಾರೆ ಎಂದು ವ್ಯಂಗ್ಯವಾಡಿದ್ದರು.

ಸುಮಲತಾ ಹುಚ್ಚೇಗೌಡರ ಸೊಸೆ ಎನ್ನುವುದರಲ್ಲಿ ಅರ್ಥವಿಲ್ಲ: ಶಿವರಾಮೇಗೌಡ ಸುಮಲತಾ ಹುಚ್ಚೇಗೌಡರ ಸೊಸೆ ಎನ್ನುವುದರಲ್ಲಿ ಅರ್ಥವಿಲ್ಲ: ಶಿವರಾಮೇಗೌಡ

ಶಿವರಾಮೇಗೌಡ ಅವರ ಹೇಳಿಕೆಗೆ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಅಂಬರೀಷ್ ಅಭಿಮಾನಿಗಳು, ಕಳೆದ ಲೋಕಸಭೆ ಉಪ ಚುನಾವಣೆ ಸಂದರ್ಭದಲ್ಲಿ ಅಂಬರೀಷ್ ಅವರ ಕಾಲಿಗೆ ಬಿದ್ದು ಶಿವರಾಮೇಗೌಡ ಬೆಂಬಲ ಕೋರುತ್ತಿರುವ ಚಿತ್ರವನ್ನು ಎಲ್ಲೆಡೆ ಹಂಚಿಕೊಳ್ಳುತ್ತಿದ್ದಾರೆ.

English summary
Lok Sabha elections 2019: Mandya MP Shivaramegowda said that, Sumalatha is not belongs to Gowda community. She is from Naidu community. She wanted turn Mandya to Naidu's place.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X