ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

'ಅಂಬ್ರೀಷಣ್ಣಂಗೆ ಒಬ್ಬರೇ ಹೆಂಡತಿ, ಸುಮಲತಾ ವಿಚಾರದಲ್ಲಿ ಗೊಂದಲ ಇಲ್ಲ'

By ಮಂಡ್ಯ ಪ್ರತಿನಿಧಿ
|
Google Oneindia Kannada News

Recommended Video

ಗೊಂದಲ ಸೃಷ್ಟಿ ಮಾಡಿತು ಸುಮಲತಾ ಬಗ್ಗೆ ಯಶ್ ಹೇಳಿದ ಮಾತು | Lok Sabha Elections 2019

ಮದ್ದೂರು (ಮಂಡ್ಯ), ಏಪ್ರಿಲ್ 9: ಅಂಬ್ರೀಷಣ್ಣಂಗೆ ಇರೋದು ಒಬ್ಬರೇ ಹೆಂಡತಿ. ಎಷ್ಟು ಮಂದಿ ಸುಮಲತಾ ಎಲೆಕ್ಷನ್ ಗೆ ನಿಂತರೂ ಜನರಿಗೆ ಯಾವ ಗೊಂದಲವೂ ಆಗೋದಿಲ್ಲ ಎಂದು ಚಿತ್ರ ನಟ ಯಶ್ ಮಂಗಳವಾರದಂದು ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಅಂಬರಹಳ್ಳಿಯಲ್ಲಿ ಹೇಳಿದ್ದಾರೆ. ಅಲ್ಲಿ ಅವರು ಪಕ್ಷೇತರ ಆಭ್ಯರ್ಥಿ ಸುಮಲತಾ ಅವರ ಪರವಾಗಿ ಪ್ರಚಾರದಲ್ಲಿ ತೊಡಗಿದ್ದರು.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಇನ್ನು ಮಾಧ್ಯಮದವರ ಜತೆ ಮಾತನಾಡಿದ ಯಶ್, ಸುಮಲತಾ ಅವರ ಬಗ್ಗೆ ಜನರಿಗೆ ಗೊತ್ತಿದೆ. ಯಾವುದೇ ಗೊಂದಲಕ್ಕೆ ಈಡಾಗದೇ ಮತ ಕೊಡುತ್ತಾರೆ. ಯಾರೋ ಕೆಲವರು ಜನರ ಮುಗ್ಧತೆಯನ್ನು ತಮ್ಮ ಸ್ವಾರ್ಥಕ್ಕೆ ಬಳಸಿಕೊಳ್ಳಲು ಪ್ರಯತ್ನ ಮಾಡುತ್ತಿದ್ದಾರೆ. ಅಭಿವೃದ್ಧಿ ಬಗ್ಗೆ ಚರ್ಚೆ ಮಾಡಲಿ. ಅದನ್ನು ಬಿಟ್ಟು ಬೇರೇನೇನೋ ಮಾತನಾಡುತ್ತಾರೆ ಎಂದು ಯಶ್ ಆರೋಪ ಮಾಡಿದ್ದಾರೆ.

ಅಂಬಿಯನ್ನು ಸ್ಮರಿಸಿದ ಮೋದಿ: ಪದಗಳೇ ಸಿಗುತ್ತಿಲ್ಲ ಅಂದ್ರು ಸುಮಲತಾಅಂಬಿಯನ್ನು ಸ್ಮರಿಸಿದ ಮೋದಿ: ಪದಗಳೇ ಸಿಗುತ್ತಿಲ್ಲ ಅಂದ್ರು ಸುಮಲತಾ

ಪ್ರಮುಖ ಅಭ್ಯರ್ಥಿಗಳಾದ ಜೆಡಿಎಸ್ ನ ನಿಖಿಲ್ ಕುಮಾರಸ್ವಾಮಿ ಹಾಗೂ ಸ್ವತಂತ್ರ ಅಭ್ಯರ್ಥಿಯಾದ ಸುಮಲತಾ ಅವರನ್ನು ಎದುರುಬದುರು ಕೂಡಿಸಿ, ಚರ್ಚೆ ನಡೆಸಲು ಅವಕಾಶ ಮಾಡಿಸಬೇಕು. ಆ ಮೂಲಕ ಜನರು ಯಾರಿಗೆ ಮತ ನೀಡಬೇಕು ಎಂದು ನಿರ್ಧರಿಸಲು ಅನುಕೂಲ ಆಗುತ್ತದೆ ಎಂದು ಯಶ್ ಅಭಿಪ್ರಾಯಪಟ್ಟರು.

Late Aambareeshs only wife Sumalatha, so no confusion in voting: Yash

ಆದರೆ, ಅಂಬ್ರೀಷಣ್ಣಂಗೆ ಒಬ್ಬರೇ ಹೆಂಡತಿ ಅನ್ನೋ ಮೂಲಕ ಅವರು ಯಾರಿಗೆ ಟಾಂಗ್ ನೀಡಿದರು ಎಂಬುದು ಚರ್ಚೆಯ ವಿಷಯವಾಯಿತು.

English summary
Lok Sabha Elections 2019: Late Aambareesh's only wife Sumalatha, so no confusion in voting in Mandya constituency, said actor Yash on Tuesday in Maddur.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X