ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ತನ್ನ ಕಿಡ್ನಿ ಮಾರಲು ಹೋಗಿ ಮೋಸ: ಮಹಿಳೆ ಆತ್ಮಹತ್ಯೆ

|
Google Oneindia Kannada News

ಮಂಡ್ಯ, ಜನವರಿ 9: ಮನೆ ಸಮಸ್ಯೆಯನ್ನು ಬಗೆಹರಿಸಲು ತನ್ನ ಕಿಡ್ನಿಯನ್ನೇ ಮಾರಾಟ ಮಾಡಲು ಹೋಗಿ ಮೋಸಕ್ಕೆ ಒಳಗಾಗಿ ಕೊನೆಗೆ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮಂಡ್ಯದಲ್ಲಿ ನಡೆದಿದೆ.

ಮಳವಳ್ಳಿ ಪಟ್ಟಣದ ಗಂಗಾಮತ ಬೀದಿಯ ಮಲ್ಲಯ್ಯ ಪತ್ನಿ ವೆಂಕಟಮ್ಮ (48) ಆತ್ಮಹತ್ಯೆ ಮಾಡಿಕೊಂಡಿರುವ ಮಹಿಳೆ. ಮೃತ ವೆಂಕಟಮ್ಮ ಮಳವಳ್ಳಿ ಪಟ್ಟಣದಲ್ಲಿ ಸೊಪ್ಪು ಮಾರಿಕೊಂಡು ಜೀವನ ಸಾಗಿಸುತ್ತಿದ್ದರು. ತಕ್ಷಣ ಶ್ರೀಮಂತಳಾಗಬೇಕು ತನ್ನ ಕಷ್ಟವೆಲ್ಲವನ್ನೂ ಪರಿಹರಿಸಿಕೊಳ್ಳೇಕು ಎಂದು ಆಲೋಚಿಸುತ್ತಿದ್ದಾಗ ತಾರಾ ಎಂಬುವವರ ಪರಿಚಯವಾಗಿತ್ತು.

ಪಾಂಡವಪುರದಲ್ಲಿ ಕಚೇರಿಯಲ್ಲೇ ಆತ್ಮಹತ್ಯೆ ಮಾಡಿಕೊಂಡ ಮಹಿಳೆ ಪಾಂಡವಪುರದಲ್ಲಿ ಕಚೇರಿಯಲ್ಲೇ ಆತ್ಮಹತ್ಯೆ ಮಾಡಿಕೊಂಡ ಮಹಿಳೆ

ವೆಂಕಟಮ್ಮಳಿಗೆ ತಾರಾ ಹಣದಾಸೆ ತೋರಿಸಿ ನಿನ್ನ ಕಿಡ್ನಿ ಮಾರಿದರೆ 30 ಲಕ್ಷ ರೂ. ಕೊಡುತ್ತಾರೆ. ನನಗೆ 3 ಲಕ್ಷ ರೂ. ಕಮಿಷನ್ ನೀಡಬೇಕು ಎಂದು ಒಪ್ಪಂದ ಮಾಡಿಕೊಂಡಿದ್ದಾಳೆ. ಬಳಿಕ ಮುಂಗಡವಾಗಿ 2 ಲಕ್ಷ ರೂ. ಕೊಡು ಎಂದು ಕೇಳಿದ್ದಾಳೆ. ಆಗ ಮೃತ ವೆಂಕಟಮ್ಮ ಸಾಲ ಮಾಡಿ ಹಣವನ್ನು ನೀಡಿದ್ದಳು ಎನ್ನಲಾಗಿದೆ.

Lady commit suicide after she sell her kidney

ಈ ಮಧ್ಯೆ ಮೃತ ವೆಂಕಟಮ್ಮ ತನ್ನ ನೋವನ್ನು ಬೆಂಗಳೂರಿನಲ್ಲಿರುವ ಸಹೋದರಿನಿಗೆ ಹೇಳಿಕೊಂಡಿದ್ದು, ಆ ಸಮಯದಲ್ಲಿ ಅವರು ಸ್ಪಲ್ಪ ಹಣವನ್ನು ನೀಡಿ ಸಹಾಯ ಮಾಡಿದ್ದರು ಎಂದು ತಿಳಿದು ಬಂದಿದೆ. ಆದರೂ ಕಳೆದ ಎರಡು ದಿನಗಳ ಹಿಂದೆ ಮನಸ್ಸಿಗೆ ನೋವಾಗಿ ಮಳವಳ್ಳಿ ಪಟ್ಟಣ ದೊಡ್ಡಕೆರೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಸಾಲದ ಹೊರೆ: ಮಂಡ್ಯದಲ್ಲಿ ಜೆಡಿಎಸ್ ಮುಖಂಡ ಆತ್ಮಹತ್ಯೆ ಸಾಲದ ಹೊರೆ: ಮಂಡ್ಯದಲ್ಲಿ ಜೆಡಿಎಸ್ ಮುಖಂಡ ಆತ್ಮಹತ್ಯೆ

ವೆಂಕಟಮ್ಮ ಸಾಲಭಾದೆ ತಾಳಲಾರದೇ ಮತ್ತೆ ವಂಚಕಿ ಬಳಿ ಹೋಗಿ ನನ್ನ ಹಣವನ್ನು ವಾಪಸ್ ಕೊಡು ಎಂದು ಕೇಳಿದ್ದಾರೆ. ಆದರೆ ಮಹಿಳೆ ಹಣ ಕೊಡಲು ನಿರಾಕರಿಸಿದ್ದಾಳೆ.

English summary
Mandya origin lady Venkatamma salad her kidney and later committed suicide in shocking incident
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X