ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಾಲಕೃಷ್ಣ ವಿರುದ್ಧ ತಿರುಗಿಬಿದ್ದ ಕುಮಾರಸ್ವಾಮಿ ಆಂಡ್‌ ಸನ್‌

By Manjunatha
|
Google Oneindia Kannada News

ಮಂಡ್ಯ, ಏಪ್ರಿಲ್ 28: 'ನಿಖಿಲ್ ಕುಮಾರಸ್ವಾಮಿ ಅವರ ಕ್ಯಾಸೆಟ್ ನನ್ನ ಬಳಿ ಇದೆ ಅದನ್ನು ಬಿಡುಗಡೆ ಮಾಡುತ್ತೇನೆ' ಎಂದು ಜೆಡಿಎಸ್‌ನಿಂದ ಕಾಂಗ್ರೆಸ್‌ಗೆ ಹಾರಿರುವ ಎಚ್‌.ಸಿ.ಬಾಲಕೃಷ್ಣ ಹೇಳಿದ ಬೆನ್ನಲ್ಲೆ ಕುಮಾರಸ್ವಾಮಿ ಮತ್ತು ಮಗ ನಿಖಿಲ್ ಕುಮಾರಸ್ವಾಮಿ ಅವರು ಬಾಲಕೃಷ್ಣ ಅವರ ಮೇಲೆ ಹರಿಹಾಯ್ದಿದ್ದಾರೆ.

ಮಾಗಡಿಯಲ್ಲಿ ಪ್ರಚಾರದ ವೇಳೆ ಮಾತನಾಡಿದ ನಿಖಿಲ್ ಕುಮಾರಸ್ವಾಮಿ 'ಆತನಿಗೆ ತಾಕತ್ ಇದ್ದರೆ ಬಿಡುಗಡೆ ಸಿಡಿ ಬಿಡುಗಡೆ ಮಾಡಲಿ, ಸುಮ್ಮಮ್ಮನೆ ಸುಳ್ಳು ಹೇಳಿಕೊಂಡು ಓಡಾಡುವುದಲ್ಲ, ಆರು ಕೋಟಿ ಜನ ಅವರ ಯೋಗ್ಯತೆ ನೋಡಿದ್ದಾರೆ, ಹೇಗೆ ಬೆನ್ನಿಗೆ ಚೂರಿ ಇರಿದು ಹೊದರು ಎಂದು' ಎಂದು ನಿಖಿಲ್ ಕುಮಾರಸ್ವಾಮಿ ಅಬ್ಬರಿಸಿದ್ದಾರೆ.

ಎಚ್.ಸಿ.ಬಾಲಕೃಷ್ಣ ಬಳಿಯಿದೆಯಂತೆ ನಿಖಿಲ್ ಗೌಡರ ಕ್ಯಾಸೆಟ್!ಎಚ್.ಸಿ.ಬಾಲಕೃಷ್ಣ ಬಳಿಯಿದೆಯಂತೆ ನಿಖಿಲ್ ಗೌಡರ ಕ್ಯಾಸೆಟ್!

ಈ ಬಾರಿ ಚುನಾವಣೆ ಆದ ನಂತರ ಅವರು ರಾಜಕೀಯ ನಿವೃತ್ತಿ ಪಡೆದುಕೊಳ್ಳಬೇಕಾಗುತ್ತದೆ, ಇನ್ನು ಮುಂದೆ ರಾಜಕೀಯ ಹೇಗೆ ಮಾಡ್ತಾರೋ ನಾನೂ ನೋಡ್ತೇನೆ' ಎಂದು ನಿಖಿಲ್ ಸವಾಲು ಹಾಕಿದ್ದಾರೆ.

Kumaraswamy and Nikhil Kumaraswamy lambasted on Balakrishna

ಇದೇ ವಿಷಯಕ್ಕೆ ಮಂಡ್ಯದಲ್ಲಿ ಪ್ರತಿಕ್ರಿಯಿಸಿರುವ ಕುಮಾರಸ್ವಾಮಿ ಅವರು, ಅದೇನು ಸಿಡಿ ಇದೆಯೋ ಬಿಡುಗಡೆ ಮಾಡಲಿ ನೋಡೋಣ, ಅವರ ಬಳಿ ಸಾಕ್ಷ್ಯ ಇದ್ದರೆ ಬಿಡುಗಡೆ ಮಾಡಲಿ ನೋಡೇ ಬಿಡುತ್ತೇನೆ' ಎಂದು ಆವಾಜ್ ಹಾಕಿದ್ದಾರೆ ಕುಮಾರಸ್ವಾಮಿ.

ಕುಮಾರಸ್ವಾಮಿ, ದೇವೇಗೌಡರನ್ನು ತರಾಟೆಗೆ ತೆಗೆದುಕೊಂಡ ಬಾಲಕೃಷ್ಣ ಕುಮಾರಸ್ವಾಮಿ, ದೇವೇಗೌಡರನ್ನು ತರಾಟೆಗೆ ತೆಗೆದುಕೊಂಡ ಬಾಲಕೃಷ್ಣ

ಆದರೆ ಈ ಬಗ್ಗೆ ಇಂದು ಪ್ರತಿಕ್ರಿಯಿಸಿರುವ ಎಚ್‌.ಸಿ.ಬಾಲಕೃಷ್ಣ, 'ನಾನು ಯಾವ ಕ್ಯಾಸೆಟ್ ಅಥವಾ ಸಿಡಿ ಬಗ್ಗೆ ಮಾತನಾಡೇ ಇಲ್ಲ, ಅದೆಲ್ಲಾ ಮಾಧ್ಯಮಗಳ ಸೃಷ್ಠಿ, ಆದರೆ ನಿಖಿಲ್ ಕುಮಾರಸ್ವಾಮಿ ಅವರಿಗೆ ರಾಜಕೀಯ ಅನುಭವ ಕಡಿಮೆ, ಅವರು ಮಾತನಾಡುವಾಗ ಜಾಗೃತೆಯಿಂದ ಮಾತನಾಡಬೇಕು' ಎಂದಿದ್ದಾರೆ.

English summary
JDS statepresident Kumaraswamy and his son Nikhil Kumaraswamy lambasted on Ex JDS MLA Balakrishna for his comments on Nikhil Kumaraswamy. Balakrishna yesterday said that he has controversial CD of Nikhil Kumaraswamy.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X