ಪೈಪೋಟಿ ಅಖಾಡದಲ್ಲಿ ಚೆಲುವರಾಯಸ್ವಾಮಿ ಆಟಕ್ಕೆ ಚಿತ್ತಾದ ಜೆಡಿಎಸ್
Recommended Video
ನಾಗಮಂಗಲ (ಮಂಡ್ಯ ಜಿಲ್ಲೆ), ಫೆಬ್ರವರಿ 9: ಜೆಡಿಎಸ್ ನ ಭಿನ್ನಮತೀಯ ಶಾಸಕ ಚೆಲುವರಾಯ ಸ್ವಾಮಿ ತಮ್ಮ ರಾಜಕೀಯ ಶಕ್ತಿ ಪ್ರದರ್ಶನ ಮಾಡಿದ್ದಾರೆ. ಜೆಡಿಎಸ್ ಗೆ ಈ ಘಟನೆಯಿಂದ ಭಾರೀ ಮುಖಭಂಗವಾಗಿದೆ. ಅಸಲಿಗೆ ಆಗಿದ್ದೇನು ಗೊತ್ತಾ? ಇಲ್ಲಿನ ತಾಲೂಕು ಪಂಚಾಯಿತಿ ಅಧ್ಯಕ್ಷ ಸ್ಥಾನದಲ್ಲಿ ತಮ್ಮ ಬೆಂಬಲಿಗ ಅಭ್ಯರ್ಥಿಯನ್ನು ಕೂರಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮುಖ್ಯಮಂತ್ರಿ ಆಗೋದು ಕುಮಾರಸ್ವಾಮಿಯ ಭ್ರಮೆ: ಚೆಲುವರಾಯ ಸ್ವಾಮಿ
ನಾಗಮಂಗಲದ ಶಾಸಕ ಚೆಲುವರಾಯ ಸ್ವಾಮಿ ತಮ್ಮ ಬೆಂಬಲಿಗರಾದ ದಾಸೇಗೌಡ ಅವರನ್ನು ಆಯ್ಕೆ ಮಾಡಿಸುವಲ್ಲಿ ಸಫಲರಾಗಿದ್ದಾರೆ. ಒಟ್ಟು 18 ಸದಸ್ಯ ಬಲದ ನಾಗಮಂಗಲ ತಾಲೂಕು ಪಂಚಾಯಿತಿಯಲ್ಲಿ ದಾಸೇಗೌಡರಿಗೆ 14, ಜೆಡಿಎಸ್ ಅಭ್ಯರ್ಥಿ ಹೇಮರಾಜ್ ಗೆ 4 ಮತಗಳು ಸಿಕ್ಕವು ಆ ಮೂಲಕ. ಚೆಲುವರಾಯಸ್ವಾಮಿ ಬೆಂಬಲಿಗ ದಾಸೇಗೌಡರು ಭರ್ಜರಿ ಗೆಲುವು ಪಡೆದರು.
ಇದರಿಂದ ಜೆಡಿಎಸ್ ಗೆ ತೀವ್ರ ಮುಖಭಂಗವಾಗಿದೆ. ಜೆಡಿಎಸ್ ಪಕ್ಷದ ವಿಪ್ ಗೂ ತಲೆ ಕೆಡಿಸಿಕೊಳ್ಳದ ತಾಲೂಕು ಪಂಚಾಯಿತಿ ಸದಸ್ಯರು, ದಾಸೇಗೌಡರನ್ನು ಬೆಂಬಲಿಸಿದ್ದಾರೆ. ಜೆಡಿಎಸ್ ಪರವಾಗಿ 16 ಚುನಾಯಿತ ಸದಸ್ಯರು ಇದ್ದಾರೆ. ಆ ಪೈಕಿ 14 ಜೆಡಿಎಸ್ ಸದಸ್ಯರು ವಿಪ್ ಉಲ್ಲಂಘಿಸಿ ದಾಸೇಗೌಡರಿಗೆ ಮತ ಹಾಕಿದ್ದರೆ, ಇಬ್ಬರು ಕಾಂಗ್ರೆಸ್ ಸದಸ್ಯರು ಜೆಡಿಎಸ್ ಅಭ್ಯರ್ಥಿಗೆ ಮತ ನೀಡಿದ್ದಾರೆ.