'ಭಾರತ-ಪಾಕ್ ಪ್ರಧಾನಿಗಳು ಡರ್ಟಿ ಪಾಲಿಟಿಕ್ಸ್ ಮಾಡುತ್ತಿದ್ದಾರೆ'
Recommended Video
ಮಂಡ್ಯ, ಏಪ್ರಿಲ್ 16: ಆಂಧ್ರಪ್ರದೇಶದ ನಾಯ್ಡು ಮನೆತನದಿಂದ ಬಂದಿರುವ ಸುಮಲತಾ ಅಂಬರೀಶ್ ಅವರಿಗೆ ಟಾಂಗ್ ನೀಡುವ ಸಲುವಾಗಿ ದೇವೇಗೌಡರು ಮಂಡ್ಯಕ್ಕೆ ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರನ್ನು ಕರೆತಂದು ಚುನಾವಣಾ ಪ್ರಚಾರ ಮಾಡಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಿಜೆಪಿ, ಕಾಂಗ್ರೆಸ್, ಸಿಪಿಎಂ ಪ್ರಣಾಳಿಕೆಯ ತುಲನೆ. ಯಾವ ಪಕ್ಷದ ಪ್ರಣಾಳಿಕೆ ಉತ್ತಮವಾಗಿದೆ?
ಸೋಮವಾರ ಮಂಡ್ಯಕ್ಕೆ ಆಗಮಿಸಿ ಪಾಂಡವಪುರ ಪಟ್ಟಣದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಚಂದ್ರಬಾಬು ನಾಯ್ಡು ಅವರು ನಿಖಿಲ್ ಪರ ಮತಯಾಚಿಸಿದರು.
ಸುಮಲತಾ ನಾಯ್ಡು ಅಂದಿದ್ದ ಜೆಡಿಎಸ್, ಮೊರೆ ಹೋಗಿದ್ದು ಚಂದ್ರಬಾಬು ನಾಯ್ಡುಗೆ
ಮೊದಲಿಗೆ ಕನ್ನಡದಲ್ಲಿಯೇ ಮಾತು ಆರಂಭಿಸಿದ ಅವರು, ಶ್ರೀಕೃಷ್ಣ ದೇವರಾಯನನ್ನು ಸ್ಮರಿಸಿ ದೇವೇಗೌಡರ ಮೊಮ್ಮಗ, ಮುಖ್ಯಮಂತ್ರಿ ಕುಮಾರಸ್ವಾಮಿಯವರ ಪುತ್ರ ಜಾಗ್ವಾರ್ ನಿಖಿಲ್ ನನ್ನು ಗೆಲ್ಲಿಸುವಂತೆ ಮನವಿ ಮಾಡಿದರಲ್ಲದೆ, ಕಳೆದ ಒಂದು ತಿಂಗಳಿನಿಂದ ನಾನು ಅನುಭಿಸಿದ ಕಷ್ಟ-ನೋವು ಇಲ್ಲಿಗೆ ಬಂದಾಗ ಮಾಯವಾಗಿದೆ ಎಂದರು.
ನಮ್ಮ ನಾಯಕ ಎನ್.ಟಿ.ಆರ್.ಗೆ. ಡಾ. ರಾಜ್ಕುಮಾರ್ ಎಂದರೆ ಅತಿ ಹೆಚ್ಚು ಪ್ರೀತಿ. ಸರ್.ಎಂ.ವಿಶ್ವೇಶ್ವರಯ್ಯ ಕಟ್ಟಿದ ಕೆಆರ್.ಎಸ್. ಅಣೆಕಟ್ಟೆ ರೈತರಿಗೆ ವರದಾನವಾಗಿದೆ ಎಂದು ಹೇಳುವ ಮೂಲಕ ಇವಿಎಂ ಬಗ್ಗೆ ನಮಗೆ ವಿಶ್ವಾಸವಿಲ್ಲ ಎಂದು ಸ್ಪಷ್ಟಪಡಿಸಿದರಲ್ಲದೆ, ಮತದಾನದ ಬಳಿಕ ಮುಖ್ಯವಾಗಿ ವಿ.ವಿ. ಪ್ಯಾಟ್ ಪರಿಶೀಲಿಸಬೇಕಾಗಿದೆ ಎಂದು ಚಂದ್ರಬಾಬು ನಾಯ್ಡು ಹೇಳಿದರು.
ಸುಮಲತಾ FB ಪೇಜ್ ಬ್ಲಾಕ್! ಕುತಂತ್ರ ಹಿಂದೆ ಇರೋದು "ಇವರೇನಾ?"
ಪಾಕಿಸ್ತಾನ ಪ್ರಧಾನಿ ಕೂಡ ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗಲಿ ಎಂದು ಹೇಳುತ್ತಿದ್ದಾರೆ. ಇಂಡಿಯನ್ ಪಿಎಂ ಹಾಗೂ ಪಾಕ್ ಪಿಎಂ ಇಬ್ಬರೂ ಡರ್ಟಿ ಪಾಲಿಟಿಕ್ಸ್ ಮಾಡುತ್ತಿದ್ದಾರೆ. ನಾವು ಇದನ್ನು ಹೇಳಿದರೆ ದೇಶ ವಿರೋಧಿಗಳು ಎನ್ನುತ್ತಾರೆ. ಪ್ರತಿಯೊಬ್ಬರೂ ಬಿಜೆಪಿ ವಿರುದ್ಧ ಮತ ಚಲಾಯಿಸಿ ಕೋಮುವಾದಿಯನ್ನು ಕಿತ್ತೊಗೆಯಿರಿ ಎಂದು ಚಂದ್ರಬಾಬು ನಾಯ್ಡು ಕರೆ ನೀಡಿದರು.