ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಡ್ಯದಲ್ಲಿ ಸುಮಲತಾ ಸ್ವಾಭಿಮಾನಿ ಸಮಾವೇಶ: ವಿರೋಧಿಗಳಿಗೆ ನಡುಕ

|
Google Oneindia Kannada News

Recommended Video

Lok Sabha Elections 2019 : ಮಂಡ್ಯದಲ್ಲಿ ಸುಮಲತಾ ಸ್ವಾಭಿಮಾನಿ ಸಮಾವೇಶ | Oneindia Kannada

ಮಂಡ್ಯ, ಏಪ್ರಿಲ್ 16: ಮಂಡ್ಯದಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಅವರು ಬೃಹತ್ ಸಮಾವೇಶವನ್ನು ಆಯೋಜಿಸಿದ್ದು, ಈಗಾಗಲೇ ಸಾವಿರಾರು ಮಂದಿ ಜನರು ಸಮಾವೇಶದಲ್ಲಿ ಭಾಗವಹಿಸಲು ನೆರದಿದ್ದಾರೆ.

ಬಿಜೆಪಿ, ಕಾಂಗ್ರೆಸ್, ಸಿಪಿಎಂ ಪ್ರಣಾಳಿಕೆಯ ತುಲನೆ. ಯಾವ ಪಕ್ಷದ ಪ್ರಣಾಳಿಕೆ ಉತ್ತಮವಾಗಿದೆ?

ಮಂಡ್ಯದ ಕಾಳಿಕಾಂಬಾ ದೇವಾಲಯದ ಬಳಿ ಬೃಹತ್ ಸಮಾವೇಶಕ್ಕೆ ವೇದಿಕೆ ಸಿದ್ಧವಾಗಿದ್ದು, ಸಮಾವೇಶಕ್ಕೆ 'ಸ್ವಾಭಿಮಾನಿಗಳ ಸಮ್ಮಿಲನ' ಎಂದು ನಾಮಕರಣ ಮಾಡಲಾಗಿದೆ.

ನಮಗೆ ಬಿಜೆಪಿಯವರು ವಿರೋಧಿಗಳು, ಸುಮಲತಾ ಅಲ್ಲ:ಸಿದ್ದರಾಮಯ್ಯನಮಗೆ ಬಿಜೆಪಿಯವರು ವಿರೋಧಿಗಳು, ಸುಮಲತಾ ಅಲ್ಲ:ಸಿದ್ದರಾಮಯ್ಯ

ಇಷ್ಟು ದಿನ ಪ್ರಚಾರದಲ್ಲಿ ಸುಮಲತಾ ಅವರಿಗೆ ಸಾಥ್ ನೀಡಿದ್ದ ಯಶ್ ಮತ್ತು ದರ್ಶನ್ ಅವರು ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದು, ಈಗಾಗಲೇ ಯಶ್, ದರ್ಶನ್, ಸುಮಲತಾ ಅಂಬರೀಶ್ ಅವರುಗಳು ವೇದಿಕೆಗೆ ಆಗಮಿಸಿದ್ದಾರೆ.

Independent candidate Sumalatha organizing huge rally in Mandya

ಸಮಾವೇಶದಲ್ಲಿ ಕಾಂಗ್ರೆಸ್, ಬಿಜೆಪಿ ಬಾವುಟಗಳು ಹಾರಾಡುತ್ತಿರುವುದು ವಿಶೇಷ. ಕೆಲವರು ಕಾಂಗ್ರೆಸ್ ಮುಖಂಡ ಅತೃಪ್ತ ಚೆಲುವರಾಯಸ್ವಾಮಿ ಅವರ ಭಾವಚಿತ್ರಗಳನ್ನು ತಂದಿದ್ದಾರೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಮಂಡ್ಯಕ್ಕೆ ರಾಹುಲ್ ಬಂದು ಹೋದರೇನಂತೆ, 'ರೆಬೆಲ್' ಗಳು ಬಂದಿಲ್ಲವೇ! ಅದೇ ತಾನೇ ಮ್ಯಾಟರ್ಮಂಡ್ಯಕ್ಕೆ ರಾಹುಲ್ ಬಂದು ಹೋದರೇನಂತೆ, 'ರೆಬೆಲ್' ಗಳು ಬಂದಿಲ್ಲವೇ! ಅದೇ ತಾನೇ ಮ್ಯಾಟರ್

ಸುಮಲತಾ FB ಪೇಜ್ ಬ್ಲಾಕ್! ಕುತಂತ್ರ ಹಿಂದೆ ಇರೋದು ಸುಮಲತಾ FB ಪೇಜ್ ಬ್ಲಾಕ್! ಕುತಂತ್ರ ಹಿಂದೆ ಇರೋದು "ಇವರೇನಾ?"

ಇಂದು ಬಹಿರಂಗ ಪ್ರಚಾರ ಅಂತ್ಯ

ಇಂದು ಬಹಿರಂಗ ಪ್ರಚಾರ ಅಂತ್ಯ

ಇಂದು ಐದು ಗಂಟೆಗೆ ಬಹಿರಂಗ ಸಮಾವೇಶ ಅಂತ್ಯವಾಗಲಿದ್ದು, ಬಹಿರಂಗ ಪ್ರಚಾರ ಅಂತ್ಯ ಮಾಡುವ ಮುನ್ನಾ ಭಾರಿ ಸಮಾವೇಶವನ್ನು ಮಾಡಿ ಮತದಾನದೆಡೆಗೆ ಹೋಗುವ ತಂತ್ರವನ್ನು ಸುಮಲತಾ ಮತ್ತು ಬಳಗ ಮಾಡಿದೆ.

ಸಮಾವೇಶದಲ್ಲಿ ಭಾರಿ ಸಂಖ್ಯೆ ಜನ

ಸಮಾವೇಶದಲ್ಲಿ ಭಾರಿ ಸಂಖ್ಯೆ ಜನ

ಸಮಾವೇಶಕ್ಕೆ ಈಗಾಗಲೇ ಭಾರಿ ಸಂಖ್ಯೆಯಲ್ಲಿ ಜನ ಸೇರಿದ್ದಾರೆ. ಕಹಳೆಗಳು ಎಲ್ಲೆಡೆ ಕಾಣುತ್ತಿವೆ. ಸುಮಲತಾ, ದರ್ಶನ್, ಯಶ್, ಅಭಿಷೇಕ್, ರಾಕ್‌ಲೈನ್ ವೆಂಕಟೇಶ್ ಕೆಲವು ಕಾಂಗ್ರೆಸ್ ಮುಖಂಡರು, ಬಿಜೆಪಿ ಸ್ಥಳೀಯ ಮುಖಂಡರು ಮೆರವಣಿಗೆಯಲ್ಲಿ ವೇದಿಕೆಗೆ ಆಗಮಿಸಿದ್ದಾರೆ.

ಪವರ್‌ಪುಲ್ ಹೇಳಿಕೆಗಳು ಹೊರಬೀಳಲಿವೆ

ಪವರ್‌ಪುಲ್ ಹೇಳಿಕೆಗಳು ಹೊರಬೀಳಲಿವೆ

ಸುಮಲತಾ ಅವರು ಸಮಾವೇಶದಲ್ಲಿ ಜೆಡಿಎಸ್ ವಿರುದ್ಧ ಹರಿಹಾಯುವ ಸಂಭವವಿದೆ. ಜೊತೆಗೆ ಯಶ್, ದರ್ಶನ್ ಸಹ ಸುಮಲತಾ ಅವರ ಪರವಾಗಿ ಕೊನೆಯದಾಗಿ ಮತಕೇಳಲಿದ್ದು, ಕೆಲವು ಪವರ್‌ಪುಲ್ ಹೇಳಿಕೆಗಳು ಸಮಾವೇಶದಲ್ಲಿ ಕೇಳಿಬರುವ ಸರ್ವ ಸಾಧ್ಯತೆ ಇದೆ.

ನಿಖಿಲ್ ಪರ ಎಚ್‌ಡಿಕೆ ರೋಡ್‌ ಶೋ

ನಿಖಿಲ್ ಪರ ಎಚ್‌ಡಿಕೆ ರೋಡ್‌ ಶೋ

ಇದೇ ಸಮಯದಲ್ಲಿ ಕುಮಾರಸ್ವಾಮಿ ಅವರು ಮಂಡ್ಯದಲ್ಲಿಯೇ ಇದ್ದು, ಪುತ್ರ ನಿಖಿಲ್ ಪರ ಭರ್ಜರಿಯಾಗಿ ರೋಡ್ ಶೋ ಮಾಡುತ್ತಿದ್ದಾರೆ. ಅವರಿಗೆ ಮಂಡ್ಯದ ಜೆಡಿಎಸ್ ಶಾಸಕರು ಜೊತೆ ನೀಡಿದ್ದಾರೆ. ಅತ್ತ ಸುಮಲತಾ, ಇತ್ತ ಕುಮಾರಸ್ವಾಮಿ ಇಬ್ಬರೂ ಇಂದು ಮಂಡ್ಯದಲ್ಲಿ ಭರ್ಜರಿ ಪ್ರಚಾರ ನಡೆಸಿದ್ದಾರೆ.

English summary
Independent candidate Sumalatha Ambareesh organizing a huge rally in Mandya today. Actor Yash and Darshan were also present in the rally. A huge number of the crowd gathered.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X