ಇತಿಹಾಸದಲ್ಲಿ ಯಾರೂ ನನ್ನ ರೀತಿ ಸಾಲಮನ್ನಾ ಮಾಡಿಲ್ಲ: ಕುಮಾರಸ್ವಾಮಿ
ಮಂಡ್ಯ, ಸೆ 26: " ರಾಜ್ಯ ಇತಿಹಾಸದಲ್ಲಿ ನನ್ನ ರೀತಿ ಯಾರೂ ರೈತರ ಸಾಲಮನ್ನಾ ಮಾಡಲಿಲ್ಲ" ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದರು.
" ನನ್ನ ಟೀಕೆ ಮಾಡೋರಿಗೆ ಯೋಗ್ಯತೆ ಇದೆಯಾ. ಕೆ.ಆರ್.ಪೇಟೆ ತಾಲ್ಲೂಕಿನ 22 ಸಾವಿರ ರೈತ ಕುಟುಂಬದ ಸಾಲಮನ್ನಾ ಆಗಿದೆ. ಇತಿಹಾಸದಲ್ಲಿ ಯಾರು ನನ್ನ ರೀತಿ ಸಾಲಮನ್ನಾ ಮಾಡಿಲ್ಲ" ಎಂದು ಕುಮಾರಸ್ವಾಮಿ ಈ ಸಂದರ್ಭದಲ್ಲಿ ಹೇಳಿದರು.
ಕಂಬಿ ಹಿಂದೆ 'ಕನಕಪುರ ಬಂಡೆ': ಸಿದ್ದರಾಮಯ್ಯ ಪ್ಲಾನ್ ಫುಲ್ ಸಕ್ಸಸ್: ರಾಮುಲು ಸ್ಫೋಟಕ ಹೇಳಿಕೆ
" ಸಿದ್ದರಾಮಯ್ಯ ಮಾಡಿದ ಸಾಲಮನ್ನಾ ಚೆನ್ನಾಗಿದೆಯಂತೆ, ನಾನು ಮಾಡಿದ್ದು ಸರಿ ಇಲ್ಲವಂತೆ. ನಾನು 14 ತಿಂಗಳು ಮಾಡಿದ ಕಾರ್ಯದ ಬಗ್ಗೆ ಪುಸ್ತಕ ಬಿಡುಗಡೆ ಮಾಡುತ್ತೇನೆ" ಎಂದು ಕುಮಾರಸ್ವಾಮಿ ಹೇಳಿದರು,
" ಮಂಡ್ಯ ಜನ ಸ್ವಾಭಿಮಾನ ಉಳಿಸಿದರು ಅಂತ ಸಿದ್ದರಾಮಯ್ಯ ಹೇಳುತ್ತಾರೆ. ಮಂಡ್ಯ ಜಿಲ್ಲೆಯ ರೈತರ ಕಬ್ಬು ಖರೀದಿ ಮಾಡುವವರು ಯಾರೂ ಇಲ್ಲ. ಅದರ ಬಗ್ಗೆ ಸಿದ್ದರಾಮಯ್ಯಗೆ ಚಿಂತೆ ಇಲ್ಲವೇ' ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.
" ಮಂಡ್ಯ ಜಿಲ್ಲೆಯ ರೈತರ ಬಗ್ಗೆ ಕಾಳಜಿ ಇದ್ದರೆ, ಕಟಾವಿಗೆ ಬಂದಿರುವ ಕಬ್ಬು ಮಾರಾಟ ಮಾಡಿಸಿ. ಸಿದ್ದರಾಮಯ್ಯಗೆ ನಾನೇನು ವಿಶ್ವಾಸ ದ್ರೋಹ ಮಾಡಿಲ್ಲ. ಅದನ್ನು ಜನ ತೀರ್ಮಾನ ಮಾಡುತ್ತಾರೆ" ಎಂದು ಸಿದ್ದರಾಮಯ್ಯಗೆ, ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.
ಕುಮಾರಸ್ವಾಮಿ - ಸಿದ್ದರಾಮಯ್ಯ ಬೆಂಕಿ ಬಿರುಗಾಳಿ: ಸಿದ್ದುಗೆ ಎಚ್ಡಿಕೆ ಹಾಕಿದ ಓಪನ್ ಚಾಲೆಂಜ್
ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ ಕಾಂಗ್ರೆಸ್ ಸಭೆಯಲ್ಲಿ ಕಾಣಿಸಿಕೊಂಡ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಎಚ್ಡಿಕೆ, " ಅವರು ಬಿಡ್ರೀ.. ಎಲ್ಲಾ ಪಾರ್ಟಿಲೂ ಇರುತ್ತಾರೆ" ಎಂದು ವ್ಯಂಗ್ಯವಾಡಿದ್ದಾರೆ.
ಜಿಲ್ಲೆಯ, ಕೆ.ಆರ್.ಪೇಟೆ ತಾಲೂಕಿನ ಅಗ್ರಹಾರ ಬಾಚಹಳ್ಳಿ ಗ್ರಾಮದಲ್ಲಿ ಬುಧವಾರ (ಸೆ 25) ವಿಧಿವಶರಾದ ತಾಲೂಕು ಜಿಲ್ಲಾ ಘಟಕದ ಜೆಡಿಎಸ್ ಅಧ್ಯಕ್ಷ ವೆಂಕಟಸುಬ್ಬೇ ಗೌಡರ ಅಂತಿಮ ದರ್ಶನವನ್ನು ಪಡೆಯಲು ಕುಮಾರಸ್ವಾಮಿ ಆಗಮಿಸಿದ್ದರು.