ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ತಮಿಳುನಾಡಿಗೆ ನೀರು ಕೊಟ್ಟರೆ ರಾಜ್ಯ ಬಂದ್: ವಾಟಾಳ್ ನಾಗರಾಜ್

|
Google Oneindia Kannada News

ಮಂಡ್ಯ, ಮೇ 29: ಕೆ.ಆರ್‌.ಎಸ್‌ ನಲ್ಲಿ ಒಳಹರಿವು ಹೆಚ್ಚಾದರೆ ತಮಿಳುನಾಡಿಗೆ ನೀರು ಬಿಡುವಂತೆ ಕಾವೇರಿ ನಿರ್ವಹಣಾ ಪ್ರಾಧಿಕಾರ ಸೂಚಿಸಿರುವುದನ್ನು ವಿರೋಧಿಸಿ ಮುಂದಿನ ಸೋಮವಾರ ಕೆ.ಆರ್‌.ಎಸ್‌ಗೆ ಮುತ್ತಿಗೆ ಹಾಕಲಾಗುವುದು ಎಂದು ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಹೇಳಿದರು.

ಕೆಆರ್ ಎಸ್ ನಲ್ಲಿ ಸದ್ಯ ನೀರೆಷ್ಟಿದೆ? ಪ್ರಾಧಿಕಾರ ಹೇಳಿದ್ದೇನು? ಕೆಆರ್ ಎಸ್ ನಲ್ಲಿ ಸದ್ಯ ನೀರೆಷ್ಟಿದೆ? ಪ್ರಾಧಿಕಾರ ಹೇಳಿದ್ದೇನು?

ಕೆ.ಆರ್‌.ಎಸ್‌ಗೆ ಒಳಹರಿವು ಹೆಚ್ಚಾದರೂ ತಮಿಳುನಾಡಿಗೆ ನೀರು ಬಿಡಬಾರದು, ಹಾಗೊಂದು ವೇಳೆ ಸರ್ಕಾರವು ತಮಿಳುನಾಡಿಗೆ ನೀರು ಬಿಟ್ಟರೆ ರಾಜ್ಯ ಬಂದ್‌ಗೆ ಕರೆ ನೀಡಲಾಗುವುದು ಎಂದು ವಾಟಾಳ್ ನಾಗರಾಜ್ ಹೇಳಿದ್ದಾರೆ.

ಕರ್ನಾಟಕಕ್ಕೆ ಆಘಾತ, ತಮಿಳುನಾಡಿಗೆ ಕಾವೇರಿ ನೀರು ಬಿಡಲು ಆದೇಶ ಕರ್ನಾಟಕಕ್ಕೆ ಆಘಾತ, ತಮಿಳುನಾಡಿಗೆ ಕಾವೇರಿ ನೀರು ಬಿಡಲು ಆದೇಶ

ನಮ್ಮ ಜನರು ನೀರಿಲ್ಲದೆ ಸಂಕಷ್ಟದಲ್ಲಿರುವಾಗ ತಮಿಳುನಾಡಿಗೆ ನೀರು ಬಿಡಿ ಎಂದು ಹೇಳಿರುವ ಪ್ರಾಧಿಕಾರದ ಸೂಚನೆ ಅವೈಜ್ಞಾನಿಕ, ಅಮಾನವೀಯ ಎಂದು ವಾಟಾಳ್ ನಾಗರಾಜ್ ಖಂಡಿಸಿದರು.

If government leave water to Tamil Nadu we will call for state bandh: Vatal Nagraj

ಒಳಹರಿವು ಹೆಚ್ಚಿದರೆ ತಮಿಳುನಾಡಿಗೆ 9.19 ಟಿಎಂಸಿ ಕಾವೇರಿ ‌ನೀರು ಬಿಡುಗಡೆ ಮಾಡುವಂತೆ ಕಾವೇರಿ ಪ್ರಾಧಿಕಾರವು ನಿನ್ನೆ ಆದೇಶ ಹೊರಡಿಸಿದೆ. ಆದೇಶಕ್ಕೆ ಮಂಡ್ಯ, ಮೈಸೂರು, ಬೆಂಗಳೂರುಗಳಲ್ಲಿ ಭಾರಿ ವಿರೋಧ ವ್ಯಕ್ತವಾಗಿದೆ. ನಿನ್ನೆ ಮಂಡ್ಯ, ಮೈಸೂರುಗಳಲ್ಲಿ ಪ್ರತಿಭಟನೆಗಳು ಮಾಡಲಾಗಿದೆ.

ಕೆಆರ್‌ಎಸ್ ನೀರಿನ ಮಟ್ಟ ಇಳಿಕೆ:ಮುಂದೆ ಎದುರಾಗಲಿದೆ ನೀರಿನ ಸಂಕಷ್ಟ ಕೆಆರ್‌ಎಸ್ ನೀರಿನ ಮಟ್ಟ ಇಳಿಕೆ:ಮುಂದೆ ಎದುರಾಗಲಿದೆ ನೀರಿನ ಸಂಕಷ್ಟ

ತಮಿಳುನಾಡಿಗೆ ನೀರು ಬಿಟ್ಟಿದ್ದೇ ಆದಲ್ಲಿ ಜನ ದಂಗೆ ಏಳುತ್ತಾರೆ ಎಂದು ಹಿರಿಯ ರೈತ ಮುಖಂಡ ಮಾದೇಗೌಡ ಅವರು ಹೇಳಿದ್ದಾರೆ.

English summary
Kannada activist Vatal Nagraj said that if Karnataka government leave cauvery water to Tamil Nadu we will call for state bandh. Cauvery managment board orderd Karnataka to leave 9.19 tmc feet water to Tamilnadu.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X