"ಕೈ- ತೆನೆ ಮೈತ್ರಿ ಖತಂ, ಚುನಾವಣೆಯಲ್ಲಿ ಏಕಾಂಗಿ ಸ್ಪರ್ಧೆ"
ಮಂಡ್ಯ, ಆಗಸ್ಟ್ 04: ಕಾಂಗ್ರೆಸ್ ಜೊತೆ ಮೈತ್ರಿ ಮುರಿದುಕೊಂಡಿರುವ ಬಗ್ಗೆ ಮಾಜಿ ಮುಖ್ಯಮಂತ್ರಿ ಎಚ್. ಡಿ ಕುಮಾರಸ್ವಾಮಿ ಅವರು ಮತ್ತೊಮ್ಮೆ ಮಾತನಾಡಿದ್ದಾರೆ. ಮಂಡ್ಯ ಜಿಲ್ಲೆ ಕೆಆರ್ ಪೇಟೆಯಲ್ಲಿ ಉಪ ಚುನಾವಣೆಗೆ ಸಂಬಂಧಿಸಿದಂತೆ ನಡೆದ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಮೈತ್ರಿ ಮುರಿದುಕೊಂಡಿರುವ ಬಗ್ಗೆ ಹೇಳಿದ್ದರು. ಈಗ ಮತ್ತೊಮ್ಮೆ ಉಪ ಚುನಾವಣೆಯಲ್ಲಿ ಏಕಾಂಗಿಯಾಗಿ ಜೆಡಿಎಸ್ ಸ್ಪರ್ಧಿಸಲಿದ್ದಾರೆ ಎಂದಿದ್ದಾರೆ.
ಮಾಜಿ
ಸಿಎಂ
ಕುಮಾರಸ್ವಾಮಿ
ಅವರು
'ಮುಂಬರುವ
ಉಪ
ಚುನಾವಣೆಯಲ್ಲಿ
ಕಾಂಗ್ರೆಸ್
ನೊಂದಿಗೆ
ಮೈತ್ರಿ
ಮಾಡಿಕೊಳ್ಳುವುದಿಲ್ಲ'
ಎಂದು
ಘೋಷಿಸಿದ್ದಾರೆ.
ಈ
ಮೂಲಕ
17
ಕ್ಷೇತ್ರಗಳ
ಉಪ
ಚುನಾವಣೆಯಲ್ಲಿ
ಕಾಂಗ್ರೆಸ್
ಹಾಗೂ
ಜೆಡಿಎಸ್
ಪ್ರತ್ಯೇಕವಾಗಿ
ಅಭ್ಯರ್ಥಿಗಳನ್ನು
ಆಯ್ಕೆ
ಮಾಡಿ,
ಕಣಕ್ಕಿಳಿಸಬೇಕಿದೆ.
ಆದರೆ,
ಕಾಂಗ್ರೆಸ್
ನಾಯಕರು
ಮಾತ್ರ
ಇನ್ನೂ
ಮೈತ್ರಿ
ಜೀವಂತವಾಗಿದೆ
ಎಂದು
ಹೇಳಿದ್ದಾರೆ.
ಜೆಡಿಎಸ್ ಸಭೆಯಲ್ಲಿ ಕೈ ತೆನೆ ಮೈತ್ರಿ ಕುರಿತು ಬಹಿರಂಗವಾಗಿ ಹೇಳಿರುವ ಎಚ್ ಡಿ ಕುಮಾರಸ್ವಾಮಿ, "ಜೆಡಿಎಸ್ ಕಾರ್ಯಕರ್ತರು ಮೈತ್ರಿ ಬೇಡವೆಂದು ಹೇಳಿದ್ದಾರೆ, 17 ಕ್ಷೇತ್ರದ ಉಪ ಚುನಾವಣೆಯಾಗಲಿ, 224 ಕ್ಷೇತ್ರಕ್ಕೂ ಚುನಾವಣೆ ನಡೆಯಲಿ ನಾವು ಏಕಾಂಗಿಯಾಗಿ ಸ್ಪರ್ಧಿಸಲು ಸಿದ್ಧ, ಅಧಿಕಾರ ಎಂದಿಗೂ ಶಾಶ್ವತವಲ್ಲ, ಜನರ ಪ್ರೀತಿ ಮುಖ್ಯ" ಎಂದಿದ್ದಾರೆ.
HD Kumaraswamy, JD(S) to party workers, in Mandya: There will be no coalition. We don't need any coalition now. I don't need power, I need your love. https://t.co/zz9fwPq9Py
— ANI (@ANI) August 4, 2019
ಮೈತ್ರಿ ಸರ್ಕಾರದ ವಿರುದ್ಧ ಬಂಡಾಯವೆದ್ದಿದ್ದ ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ ಮುಂಬೈಗೆ ವಲಸೆ ಹೋಗಿದ್ದರು. ನಂತರ ಮೈತ್ರಿ ಸರ್ಕಾರ ಪತನವಾಗಿ, ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ಈ ನಡುವೆ ರಾಜೀನಾಮೆ ನೀಡಿದ್ದ 17 ಮಂದಿ ಶಾಸಕರನ್ನು ಈ ಹಿಂದಿನ ಸ್ಪೀಕರ್ ರಮೇಶ್ ಕುಮಾರ್ ಅನರ್ಹಗೊಳಿಸಿದ್ದಾರೆ. ಹೀಗಾಗಿ, 17 ಕ್ಷೇತ್ರಗಳಿಗೆ ಮತ್ತೊಮ್ಮೆ ಚುನಾವಣೆ ನಡೆಯಬೇಕಿದೆ.