ಕುಟುಂಬ ರಾಜಕಾರಣದ ಬಗ್ಗೆ ಯಡಿಯೂರಪ್ಪರನ್ನು ಪ್ರಶ್ನಿಸಿದ ಅನಿತಾ ಕುಮಾರಸ್ವಾಮಿ
Recommended Video
ಮದ್ದೂರು, ಮಾರ್ಚ್ 5: ನಮ್ಮದು ಕುಟುಂಬ ರಾಜಕಾರಣ ಅಂತೀರಲ್ಲ ಹಾಗಾದರೆ ಬಿಎಸ್ ಯಡಿಯೂರಪ್ಪ ಅವರ ಕುಟುಂಬದ್ದೇನು ಎಂದು ಶಾಸಕಿ ಅನಿತಾ ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.
ಮದ್ದೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಕುಟುಂಬ ರಾಜಕಾರಣದ ಬಗ್ಗೆ ಮಾತನಾಡಲು ಯಾರಿಗೂ ಹಕ್ಕಿಲ್ಲ, ಕುಟುಂಬ ರಾಜಕಾರಣ ಎಲ್ಲಿಲ್ಲ, ಯಡಿಯೂರಪ್ಪನವರ ಮಗ ರಾಜಕೀಯದಲ್ಲಿಲ್ವಾ, ಸಿದ್ದರಾಯಮ್ಯ ಪುತ್ರ ರಾಜಕೀಯದಲ್ಲಿಲ್ವಾ ಎಂದು ಪ್ರಶ್ನಿಸಿದರು.
ಮಂಡ್ಯದಿಂದ ಸ್ಪರ್ಧೆ: ಎಲ್ಲಾ ಸುದ್ದಿಗಳಿಗೆ ತೆರೆ ಎಳೆದ ನಿಖಿಲ್ ಕುಮಾರಸ್ವಾಮಿ
ನಾವು ಯಾವುದಕ್ಕೂ ತಲೆಕೆಡಿಸಿಕೊಳ್ಳುವುದಿಲ್ಲ, ವಿರೋಧಿಗಳು ಇದ್ದೇ ಇರುತ್ತಾರೆ. ಇರಲೇಬೇಕಲ್ವಾ? ಎಂದು ಸುಮಲತಾ ಸ್ಟರ್ಧೆ ಬಗ್ಗೆಗಿನ ಪ್ರಶ್ನೆಗೆ ಉತ್ತರಿಸಿದರು.
ನಾವು ಹಿಂಭಾಗಿಲಿನಿಂದ ಬಂದು ರಾಜಕೀಯ ಮಾಡುತ್ತಿಲ್ಲ. ಜನರ ಬಳಿ ಮತ ಹಾಕಿಸಿಕೊಂಡೇ ರಾಜಕೀಯ ಮಾಡುತ್ತಿದ್ದೇವೆ. ಹಾಗೊಂದು ವೇಳೆ ಹಾಗೆ ಹೇಳಿದರೆ ಅವರು ವಿಕೃತ ಮನಸ್ಸುಳ್ಳವರು. ನಾವು ಬದ್ಧತೆ ಇಟ್ಟುಕೊಂಡು ರಾಜಕೀಯ ಮಾಡುವವರು ಎಂದು ಹೇಳಿದರು.
ಅನಿತಾಕುಮಾರಸ್ವಾಮಿ ಹೊಳೆ ಆಂಜನೇಯನ ದೇಗುಲಕ್ಕೆ ಭೇಟಿ ನೀಡಿದ್ದೇಕೆ?
ನಿಖಿಲ್ ಚುನಾವಣೆಗೋಸ್ಕರ ಮನೆ ಮಾಡಬೇಕೆನ್ನುತ್ತಿಲ್ಲ. ವಿಧಾನಸಭೆ ಚುನಾವಣೆ ಸಂದರ್ಭದಿಂದಲೂ ಮನೆ ಮಾಡುವ ಬಗ್ಗೆ ಹೇಳುತ್ತಿದ್ದ. ನನ್ನ ಪೂಜೆಗೂ ನಿಖಿಲ್ ಸ್ಪರ್ಧೆಗೂ ಸಂಬಂಧವಿಲ್ಲ. ನಾನು ಮೊದಲಿಂದಲೂ ದೈವ ಭಕ್ತೆ. ಎಷ್ಟು ವಾರ ಬೇಕಾದರೂ ಬಂದು ಪೂಜೆ ಸಲ್ಲಿಸುತ್ತೇನೆ ಎಂದು ಹೇಳಿದರು.