ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಿಎಂ ಇಂದ ಕೊನೆಗೂ ಅಭಿಮಾನಿಗೆ ಸಿಕ್ಕಿತು ಚಪ್ಪಲಿ ತೊಡುವ ಭಾಗ್ಯ

|
Google Oneindia Kannada News

ಮಂಡ್ಯ, ಜುಲೈ 27: ಬಿ.ಎಸ್.ಯಡಿಯೂರಪ್ಪನವರು ಸಿಎಂ ಆಗುವವರೆಗೂ ಚಪ್ಪಲಿ ತೊಡುವುದಿಲ್ಲವೆಂದು ಶಪಥ ಮಾಡಿದ್ದ ಮಂಡ್ಯ ಅಭಿಮಾನಿಗೆ ಕೊನೆಗೂ ಚಪ್ಪಲಿ ತೊಡುವ ಭಾಗ್ಯ ಸಿಕ್ಕಿದೆ. ಆ ಚಪ್ಪಲಿಯನ್ನು ಸ್ವತಃ ಯಡಿಯೂರಪ್ಪನವರೇ ಕೊಡಿಸುವುದಾಗಿ ಭರವಸೆ ನೀಡಿರುವುದು ಆ ಅಭಿಮಾನಿಗೆ ಡಬ್ಬಲ್ ಖುಷಿ ನೀಡಿದೆ.

 ನೂತನ ಸಿಎಂಗೆ ಶುಭಾಶಯ ಕೋರಿದ ಜನಾರ್ದನ ರೆಡ್ಡಿ ನೂತನ ಸಿಎಂಗೆ ಶುಭಾಶಯ ಕೋರಿದ ಜನಾರ್ದನ ರೆಡ್ಡಿ

ಮಂಡ್ಯ ತಾಲೂಕಿನ ಉಪ್ಪರಕನಹಳ್ಳಿಯ ಶಿವಕುಮಾರ್ ಆರಾಧ್ಯರವರೇ ಈ ಶಪಥ ಮಾಡಿದ್ದ ಅಭಿಮಾನಿ. ಕಳೆದ ವರ್ಷ ಸಿಎಂ ಸ್ಥಾನದಿಂದ ಯಡಿಯೂಪ್ಪನವರು ಕೆಳಗಿಳಿದಾಗ, ಮತ್ತೆ ಅವರು ಸಿಎಂ ಆಗುವವರೆಗೂ ಚಪ್ಪಲಿ ತೊಡುವುದಿಲ್ಲವೆಂದು ಶಪಥ ಮಾಡಿದ್ದ ಶಿವಕುಮಾರ್ ಕಳೆದ 14 ತಿಂಗಳುಗಳಿಂದ ಚಪ್ಪಲಿ ಇಲ್ಲದೆ ಬರಿಗಾಲಲ್ಲಿ ತಿರುಗಾಡುತ್ತಿದ್ದರು.

CM Yeddyurappa Fan Finally Got Chance To Wear Slipper

ಇಂದು ಬಿಎಸ್ವೈ ಹುಟ್ಟೂರು ಬೂಕನಕೆರೆಗೆ ಆಗಮಿಸಿದ ವೇಳೆ ಅಭಿಮಾನಿ ಶಿವಕುಮಾರ್ ಅಭಿನಂದಿಸಲು ಬಂದಿದ್ದರು. ಈ ಸಂದರ್ಭ, ಈ ವಾರದೊಳಗೆ ನಾನೇ ನಿನಗೆ ಹೊಸ ಚಪ್ಪಲಿ ಕೊಡಿಸುತ್ತೇನೆ" ಎಂದು ಯಡಿಯೂರಪ್ಪನವರೇ ಭರವಸೆ ಕೊಟ್ಟಿರುವುದು ಶಿವಕುಮಾರ್ ಗೆ ಮತ್ತಷ್ಟು ಖುಷಿಯಾಗಿದೆ.

English summary
Yeddyurappa fan in mandya, who has vowed not to wear slippers until BSYeddyurappa become CM has finally got the chance to wear slippers. The fan was more happy that he promised to give the slippers by Yeddyurappa.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X