ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೃತ ರೈತ ಸುರೇಶ್ ಮನೆಗೆ ಭೇಟಿ ನೀಡಿ 5 ಲಕ್ಷ ಪರಿಹಾರ ನೀಡಿದ ಸಿಎಂ

|
Google Oneindia Kannada News

Recommended Video

ಮಂಡ್ಯದ ಅಘಾಲಯ ಗ್ರಾಮದಲ್ಲಿರುವ ಮೃತ ರೈತನ ಮನೆಗೆ ಭೇಟಿ ನೀಡಿದ ಎಚ್ ಡಿ ಕೆ | Oneindia Kannada

ಮಂಡ್ಯ, ಜೂನ್ 18: ಕೆ.ಆರ್.ಪೇಟೆ ತಾಲ್ಲೂಕಿನ ಅಘಲಯ ಗ್ರಾಮದಲ್ಲಿ ಸೆಲ್ಫಿ ವಿಡಿಯೋ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದ ರೈತ ಸುರೇಶ್ ಮನೆಗೆ ಸಿಎಂ ಎಚ್​.ಡಿ.ಕುಮಾರಸ್ವಾಮಿ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿ, 5 ಲಕ್ಷ ರೂಪಾಯಿ ಪರಿಹಾರದ ಚೆಕ್​ ನೀಡಿದರು. ಮೃತ ರೈತನ ಮನೆಯ ಪರಿಸ್ಥಿತಿ ಕುರಿತು ಕುಟುಂಬದವರಿಂದ ಚರ್ಚಿಸಿ, ಸುರೇಶ್ ಮಗ ಚಂದ್ರಶೇಖರ್​​ಗೆ ಉದ್ಯೋಗ ನೀಡುವುದಾಗಿ, ಮಗಳು ಸುವರ್ಣ ವಿದ್ಯಾಭ್ಯಾಸಕ್ಕೆ ನೆರವು ನೀಡುವುದಾಗಿ ಭರವಸೆಯನ್ನು ನೀಡಿದರು.

 ತನ್ನ ಅಂತ್ಯಕ್ರಿಯೆಗೆ ಸಿಎಂ ಅನ್ನು ಆಹ್ವಾನಿಸಿ ಮಂಡ್ಯ ರೈತ ಆತ್ಮಹತ್ಯೆ ತನ್ನ ಅಂತ್ಯಕ್ರಿಯೆಗೆ ಸಿಎಂ ಅನ್ನು ಆಹ್ವಾನಿಸಿ ಮಂಡ್ಯ ರೈತ ಆತ್ಮಹತ್ಯೆ

ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ಸುರೇಶ್ ಕೆರೆಗಳನ್ನು ತುಂಬಿಸಿ ಎಂದು ಮನವಿ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸದ್ಯದಲ್ಲೇ 213 ಕೋಟಿ ರೂಪಾಯಿ ವೆಚ್ಚದಲ್ಲಿ ಈ ಭಾಗದ ಕೆರೆಗಳನ್ನು ತುಂಬಿಸುವ ಕಾರ್ಯ ಆರಂಭವಾಗಲಿದೆ. ಆತುರ ಪಟ್ಟು ಯಾವುದೇ ರೈತರು ಆತ್ಮಹತ್ಯೆಯ ದಾರಿ ಹಿಡಿಯಬಾರದು ಎಂದು ಮನವಿ ಮಾಡಿದರು.

cm Kumaraswamy visited Aghalaya and gave 5 lakh compensation to suresh family

ಯಡಿಯೂರಪ್ಪರವರ ಗ್ರಾಮವಾಸ್ತವ್ಯದ ಕುರಿತ ಟೀಕೆಗೆ ಪ್ರತಿಕ್ರಿಯಿಸಿ, ನಾನು ಹಳ್ಳಿಯ ಜನರಿಗೆ ಧೈರ್ಯ ತುಂಬಲು ಗ್ರಾಮ ವಾಸ್ತವ್ಯ ಮಾಡಲು ಮುಂದಾಗಿದ್ದೇನೆ. ಗಿಮಿಕ್​ ಮಾಡಲು ಅಲ್ಲ. ಗ್ರಾಮ ವಾಸ್ತವ್ಯ ಬೇಡ, ಬರ ಪರಿಹಾರ ಅಧ್ಯಯನ ಮಾಡಿ ಎಂದು ಬಿಜೆಪಿಯವರು ಹೇಳುತ್ತಿದ್ದಾರೆ. ನಾನು ಸ್ಟಾರ್ ಹೋಟೆಲ್ ಅನ್ನೂ ನೋಡಿದ್ದೇನೆ. ಸಣ್ಣ ಹಳ್ಳಿಯಲ್ಲೂ ವಾಸ್ತವ್ಯ ಹೂಡಿದ್ದೇನೆ ಎಂದು ತಿರುಗೇಟು ನೀಡಿದರು.

cm Kumaraswamy visited Aghalaya and gave 5 lakh compensation to suresh family

ಕೆರೆ ತುಂಬಿಸುವಂತೆ ವಿಡಿಯೋದಲ್ಲಿ ಮನವಿ ಮಾಡಿಕೊಂಡಿದ್ದ ರೈತನ ಮನವಿಗೆ ಸ್ಪಂದಿಸಿ ಅಘಲಯ ಕೆರೆಯನ್ನು ಅಧಿಕಾರಿಗಳೊಂದಿಗೆ ವೀಕ್ಷಣೆ ಮಾಡಿದರು.

English summary
CM HD Kumaraswamy visited Aghalaya In Mandya and gave 5 lakh compensation to farmer suresh family. Suresh committed suicide on Monday depressed over harassment by loaners.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X