ಸ್ಫೋಟಕ ಮಾಹಿತಿ:"2013 ರಲ್ಲಿ ರಮ್ಯಾ ಅವರನ್ನು ಗೆಲ್ಲಿಸಿದ್ದು ಚಲುವರಾಯಸ್ವಾಮಿ!"
Recommended Video
ಮಂಡ್ಯ, ಮೇ 10: "2013 ರಲ್ಲಿ ರಮ್ಯಾ ಅವರನ್ನು ಗೆಲ್ಲಿಸಿದ್ದು ಆಗ ನಾಗಮಂಗಲದ ಜೆಡಿಎಸ್ ಶಾಸಕರಾಗಿದ್ದ ಚಲುವರಾಯಸ್ವಾಮಿ" ಎಂಬ ಸ್ಫೋಟಕ ಸುದ್ದಿಯನ್ನು ನಾಗಮಂಗಲದ ಹಾಲಿ ಶಾಸಕ ಸುರೇಶ್ ಗೌಡ ಹೊರಹಾಕಿದ್ದಾರೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಮಂಡ್ಯದಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲೂ ಚಲುವರಾಯಸ್ವಾಮಿ ಅವರು ಪಕ್ಷೇತರ ಅಭ್ಯರ್ಥಿ ಸುಮಲತಾ ಪರವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದ ಸುರೇಶ್ ಗೌಡ ಅವರು, "ಚಲುವರಾಯ ಸ್ವಾಮಿ ಅವರ ಬಗ್ಗೆ ಗೊತ್ತಿಲ್ಲದಿರುವುದು ಏನೂ ಅಲ್ಲ. ಅವರು ಜೆಡಿಎಸ್ ನಲ್ಲಿದ್ದಾಗಲೇ ಮಂಡ್ಯದಲ್ಲಿ 2013 ರ ಲೋಕಸಭೆ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ರಮ್ಯಾ ಅವರ ಪರ ಕೆಲಸ ಮಾಡಿದ್ದರು. ಜೆಡಿಎಸ್ ಅಭ್ಯರ್ಥಿ ಸಿಎಸ್ ಪುಟ್ಟರಾಜು ಅವರು ಆಗ ಅಚ್ಚರಿಯ ಸೋಲು ಕಾಣುವುದಕ್ಕೂ ಅವರೇ ಕಾರಣ" ಎಂದು ಸುರೇಶ್ ಗೌಡ ಹೇಳಿದರು.
"ಮಂಡ್ಯದಲ್ಲಿ ಸುಮಲತಾ ಪರ ಚಲುವರಾಯಸ್ವಾಮಿ ಹಣ ಹಂಚಿದ್ದಾರೆ"
"ಆದರೆ 2014 ರ ಲೋಕಸಭೆ ಚುನಾವಣೆಯ ಹೊತ್ತಿಗೆ ಚಲುವರಾಯಸ್ವಾಮಿ ಅವರ ಷಡ್ಯಂತ್ರಗಳ ಬಗ್ಗೆ ಅರಿತ ಪುಟ್ಟರಾಜು ಆವರು ಎಚ್ಚರಿಕೆಯ ನಡೆ ಇಟ್ಟು ಗೆಲುವು ಸಾಧಿಸಿದರು. ನಾನು ಆ ಸಂದರ್ಭದಲ್ಲಿ ಕಾಂಗ್ರೆಸ್ ನಲ್ಲಿಯೇ ಇದ್ದುದ್ದರಿಂದ ಆಗ ಜೆಡಿಎಸ್ ನಲ್ಲಿದ್ದ ಯಾರೆಲ್ಲ ರಮ್ಯಾ ಗೆಲುವಿಗಾಗಿ ಶ್ರಮಿಸಿದ್ದರು ಎಂಬುದು ನನಗೆ ಸ್ಪಷ್ಟವಾಗಿ ಗೊತ್ತು" ಎಂದು ಸುರೇಶ್ ಗೌಡ ಹೇಳಿದರು.
ಸಿದ್ದರಾಮಯ್ಯ ಮತ್ತೆ ಸಿಎಂ ಗಾದಿಗೆ: ಚಲುವರಾಯಸ್ವಾಮಿ ಬ್ಯಾಟಿಂಗ್
ಮೊದಲು ಕಾಂಗ್ರೆಸ್ ನಲ್ಲಿದ್ದ ಸುರೇಶ್ ಗೌಡ ಅವರು ಚಲುವರಾಯಸ್ವಾಮಿ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ ನಂತರ ಕಾಂಗ್ರೆಸ್ ಟಿಕೆಟ್ ನಿಂತ ವಂಚಿತರಾಗಿ ಜೆಡಿಎಸ್ ಸೇರಿದ್ದರು. 2018 ರ ವಿಧಾನಸಭೆ ಚುನಾವಣೆಯಲ್ಲಿ ನಾಗಮಂಗಲದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಚಲುವರಾಯಸ್ವಾಮಿ ಅವರನ್ನು ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಸುರೇಶ್ ಗೌಡ ಸೋಲಿಸಿದ್ದರು.