ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸೋನಿಯಾ ಗಾಂಧಿ ಸುಂಕಾತೊಣ್ಣೂರಿನ ಸಣ್ಣೇಗೌಡರ ಕುಟುಂಬದವರಾ?

By ಮಂಡ್ಯ ಪ್ರತಿನಿಧಿ
|
Google Oneindia Kannada News

ಮಂಡ್ಯ, ಜನವರಿ 30: ಅಮಿತ್ ಶಾ ಗುಜರಾತಿ, ಯೋಗಿ ಆದಿತ್ಯನಾಥ್ ಉತ್ತರಪ್ರದೇಶದವರು. ನಾನು ಈ ಮಣ್ಣಿನ ಮಗ, ಕನ್ನಡದವನು ಎಂದು ಬಿಜೆಪಿಗೆ ತಿರುಗೇಟು ನೀಡಿದ್ದರು ಮುಖ್ಯಮಂತ್ರಿ ಸಿದ್ದರಾಮಯ್ಯ. ಇದೀಗ ಮಂಡ್ಯದ ಬಿಜೆಪಿ ಮುಖಂಡ ಸಿ.ಟಿ.ಮಂಜುನಾಥ್ ಅವರು ಲಘು ಧಾಟಿಯಲ್ಲಿ ಸಿದ್ದರಾಮಯ್ಯ ಅವರ ಕಾಲೆಳೆದಿದ್ದಾರೆ.

'ಕೆಟ್ಟ ಆಡಳಿತಗಾರ' ಸಿದ್ದರಾಮಯ್ಯ ಜತೆ ವೇದಿಕೆ ಹಂಚಿಕೊಳ್ಳಲ್ಲ: ದೇವೇಗೌಡ'ಕೆಟ್ಟ ಆಡಳಿತಗಾರ' ಸಿದ್ದರಾಮಯ್ಯ ಜತೆ ವೇದಿಕೆ ಹಂಚಿಕೊಳ್ಳಲ್ಲ: ದೇವೇಗೌಡ

ಈ ಬಗ್ಗೆ ಮಾಹಿತಿ ಹಕ್ಕು ಕಾಯ್ದೆ ಅಡಿ ಪ್ರಶ್ನೆ ಕೇಳಲಾಗಿದೆ. ಅಮಿತ್ ಶಾ ಹಾಗೂ ಯೋಗಿ ಆದಿತ್ಯನಾಥ್ ಕನ್ನಡಿಗರಲ್ಲ ಎಂದಿದ್ದೀರಿ. ಹಾಗಿದ್ದರೆ ಸೋನಿಯಾ ಗಾಂಧಿ ಸುಂಕಾತೊಣ್ಣೂರಿನ ಸಣ್ಣೇಗೌಡರ ಕುಟುಂಬದವರಾ? ರಾಹುಲ್ ಗಾಂಧಿ ರಾಯಶೆಟ್ಟಿಪುರದ ರಾಜಣ್ಣನ ಮನೆತನದವರಾ? ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್ ಬನ್ನೂರು ಪಟೇಲರ ನೆಂಟರಾ? ಇವರು ಕನ್ನಡಿಗರೇ? ಎಂದು ಪ್ರಶ್ನೆ ಮಾಡಿದ್ದಾರೆ.

Are Congress leaders Kannadigas, Mandya BJP leader asks under RTI

ಮುಂದುವರಿದು ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ತನಿಖಾಧಿಕಾರಿಗಳಾಗಿ ಪ್ರಕಾಶ್ ರೈ, ಕನ್ಹಯ್ಯ, ಎಚ್.ಎಸ್.ದೊರೆಸ್ವಾಮಿ, ಜಿಗ್ನೇಶ್ ಮೇವಾನಿ ಅವರನ್ನು ನೇಮಿಸಲಾಗಿದೆಯಾ ಎಂದು ಪ್ರಶ್ನೆ ಮಾಡಲಾಗಿದ್ದು, ಮಂಡ್ಯ ಜಿಲ್ಲಾಧಿಕಾರಿ ಮೂಲಕ ಈ ಪ್ರಶ್ನೆಗಳನ್ನು ಸಲ್ಲಿಸಲಾಗಿದೆ.

English summary
Are Congress leaders Kannadigas? Mandya BJP leader CT Manjunath asks under RTI. Recently Siddaramaiah asked that, Amit Shah and Yogi Adityanath are naot Kannadigas, but I am Kannadiga.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X