ಶಿವರಾಮೇಗೌಡ ವಿರುದ್ಧ ಪ್ರತಿಭಟನೆ:ಉಪೇಂದ್ರ ಕೊಟ್ಟ ಪ್ರತಿಕ್ರಿಯೆ ಏನು?
Recommended Video
ಮಂಡ್ಯ, ಏಪ್ರಿಲ್ 02: ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್ ಅವರು ಗೌಡ್ತಿ ಅಲ್ಲ ಎಂದು ಹೇಳಿಕೆ ನೀಡಿರುವ ಸಂಸದ ಎಲ್.ಆರ್.ಶಿವರಾಮೇಗೌಡರ ಕ್ರಮ ಖಂಡಿಸಿ ಸಮೀಪದ ಅಂಬಿ ತವರು ಗ್ರಾಮ ದೊಡ್ಡರಸಿನಕೆರೆ ಗೇಟ್ ಬಳಿ ಅಂಬಿ ಅಭಿಮಾನಿಗಳು ರಸ್ತೆ ತಡೆ ನಡೆಸಿ ಪ್ರತಿಭಟಿಸಿದರು.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಅಂಬಿ ಬದುಕಿದ್ದ ವೇಳೆ ತುಟಿ ಬಿಚ್ಚದೇ ಅವರ ನೆರಳಿನಲ್ಲಿದ್ದು, ಈಗ ಅವರ ಪತ್ನಿ ಮೇಲೆ ಟೀಕೆ ಮಾಡುತ್ತಿರುವ ಕ್ರಮ ಎಷ್ಟರ ಮಟ್ಟಿಗೆ ಸರಿ ಎಂದು ಆಕ್ರೋಶ ವ್ಯಕ್ತಪಡಿಸಿ ಅವರು ಎಲ್ಆರ್ಎಸ್ ವಿರುದ್ಧ ಧಿಕ್ಕಾರ ಕೂಗಿದರು.
ಮಂಡ್ಯವನ್ನು ನಾಯ್ಡುಮಯ ಮಾಡಲು ಹೊರಟಿದ್ದಾರೆ: ಶಿವರಾಮೇಗೌಡ
ಸುಮಲತಾ ಮಂಡ್ಯದ ಸೊಸೆ, ನಮ್ಮೂರಿನ ಮನೆಯ ಮಗಳು. ಆಕೆಯ ಬಗ್ಗೆ ಹಗುರವಾಗಿ ಮಾತನಾಡಿದರೆ ಮುಂದಿನ ದಿನದಲ್ಲಿ ಉಗ್ರ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು. ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲ್ಲಲ್ಲಿ. ತೇಜೋವಧೆ ಮಾಡುವುದನ್ನು ನಿಲ್ಲಿಸಬೇಕು. ತಮ್ಮ ಲೋಕ ಸಭಾ ಚುನಾವಣೆಯಲ್ಲಿ ಅಂಬಿ ಬೆಂಬಲ ಪಡೆದಿರುವುದನ್ನು ಮರೆತಿರಾ? ಶಿವರಾಮೇಗೌಡರೇ...ಎಂದು ಕಿಡಿಕಾರಿದರು.
ಅಂಬಿ ಕುಟುಂಬದ ಬಗ್ಗೆ ಕೀಳು ವ್ಯಕ್ತ್ತಿತ್ವ ತೋರಿಸುತಿದ್ದಾರೆ. ಈ ಚುನಾವಣೆಯಲ್ಲಿ ಜನರೇ ತಕ್ಕ ಪಾಠ ಕಲಿಸುತ್ತಾರೆ ಎಂದು ಅಭಿಮಾನಿಗಳು ಎಚ್ಚರಿಸಿದರು. ಈ ವೇಳೆ ಸ್ಥಳಕ್ಕೆ ಆಗಮಿಸಿದ ಸಬ್ಇನ್ಸ್ಪೆಕ್ಟರ್ ಅಯ್ಯನಗೌಡ ಪ್ರತಿಭಟನಾ ನಿರತರ ಮನವೊಲಿಸಿದ ನಂತರ ಪ್ರತಿಭಟನೆ ಹಿಂಪಡೆದರು.
ಯಾರು ಕುಬೇರರು, ಯಾರು ಕುಚೇಲರು? ಆಸ್ತಿಪಾಸ್ತಿ ವಿವರ ಬೇಕೆ?
ಪ್ರತಿಭಟನಾ ವೇಳೆ ಸುಮಲತಾ ಅವರ ಚಿಹ್ನೆಯಾದ ರಣಕಹಣೆ ಮೊಳಗಿಸಿದ ಪ್ರತಿಭಟನಾ ನಿರತರು ನಮ್ಮೂರಿನ ಹೆಣ್ಣು ಮಗಳನ್ನು ಬೆಂಬಲಿಸಿ ಎಂದು ಮನವಿ ಮಾಡಿದರು.
ಉಪೇಂದ್ರಗೂ
ತಟ್ಟಿದ
ಪ್ರತಿಭಟನಾ
ಬಿಸಿ
ಶಿವರಾಮೇಗೌಡ
ಅವರ
ವಿರುದ್ಧ
ಪ್ರತಿಭಟನೆ
ನಡೆಸುತಿದ್ದ
ವೇಳೆ
ಬೆಂಗಳೂರಿನಿಂದ
ಮಳವಳ್ಳಿಗೆ
ತೆರಳುತ್ತಿದ್ದ
ನಟ
ಉಪೇಂದ್ರರಿಗೆ
ಪ್ರತಿಭಟನೆಯ
ಬಿಸಿ
ತಟ್ಟಿತು.
ಈ
ವೇಳೆ
ಪ್ರತಿಭಟನಾ
ನಿರತರು
ಉಪೇಂದ್ರ
ಅವರನ್ನು
ಸುತ್ತುವರಿದು,
ಚಿತ್ರರಂಗದ
ಒಬ್ಬ
ಮಹಿಳೆ
ಮೇಲೆ
ಅವಹೇಳನಕಾರಿ
ಹೇಳಿಕೆ
ನೀಡಿ
ಅವಮಾನಿಸುತಿದ್ದಾರೆ
ಇದಕ್ಕೆ
ಪ್ರತಿಕ್ರಿಯಿಸಿ
ಎಂದಾಗ
ಪ್ರಜಾಕೀಯ
ಪಕ್ಷದಿಂದ
ನಮ್ಮ
ಅಭ್ಯರ್ಥಿ
ಸ್ಪರ್ಧಿಸಿದ್ದು,
ಅವರನ್ನು
ಬೆಂಬಲಿಸಿ
ಎಂದರು.
ಬಳಿಕ
ಮಂಡ್ಯ
ಜಿಲ್ಲೆಯ
ಜನ
ಬುದ್ಧಿವಂತರು.
ಈ
ಚುನಾವಣೆಯಲ್ಲಿ
ಉತ್ತಮ
ನಿರ್ಧಾರ
ಕೈಗೊಳ್ಳುತ್ತಾರೆ
ಎನ್ನುತ್ತಾ
ತಮ್ಮ
ಬುದ್ಧಿವಂತಿಕೆ
ಮಾತು
ಹೇಳಿ
ಜಾರಿಕೊಂಡರು.