ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕ್ರಿಕೆಟ್ ಬೆಟ್ಟಿಂಗ್ ಗೆ ಸ್ನೇಹಿತರಿಂದಲೇ ಬಲಿಯಾದ ಮಂಡ್ಯದ ವಿದ್ಯಾರ್ಥಿ

ಕ್ರಿಕೆಟ್ ಬೆಟ್ಟಿಂಗ್ ಗೆ ಮಂಡ್ಯದ ಕೆ.ಆರ್. ಪೇಟೆಯಲ್ಲಿ ಸ್ನೇಹಿತರಿಂದಲೇ, ಶಶಾಂಕ್ ಎಂಬ ವಿದ್ಯಾರ್ಥಿ ಕೊಲೆಯಾದ ದುರ್ಘಟನೆ ನಡೆದಿದೆ. ಇದು ಕ್ರಿಕೆಟ್ ಬೆಟ್ಟಿಂಗ್ ಕುರಿತು ಮತ್ತಷ್ಟು ಬಿಗಿ ಕಾನೂನು ಜಾರಿಯಾಗಬೇಕಾದ ಅಗತ್ಯವನ್ನು ಸಾರಿಹೇಳಿದೆ.

By ಒನ್ ಇಂಡಿಯಾ ಪ್ರತಿನಿಧಿ
|
Google Oneindia Kannada News

ಮಂಡ್ಯ, ಮೇ 22: ಕ್ರಿಕೆಟ್ ಬೆಟ್ಟಿಂಗ್ ಗೆ ಮಂಡ್ಯದ ಕೆ.ಆರ್. ಪೇಟೆಯಲ್ಲಿ ಸ್ನೇಹಿತರಿಂದಲೇ, ಶಶಾಂಕ್ ಎಂಬ ವಿದ್ಯಾರ್ಥಿ ಕೊಲೆಯಾದ ದುರ್ಘಟನೆ ನಡೆದಿದೆ. ಇದು ಕ್ರಿಕೆಟ್ ಬೆಟ್ಟಿಂಗ್ ಕುರಿತು ಮತ್ತಷ್ಟು ಬಿಗಿ ಕಾನೂನು ಜಾರಿಯಾಗಬೇಕಾದ ಅಗತ್ಯವನ್ನು ಸಾರಿಹೇಳಿದೆ.

9 ನೇ ತರಗತಿಯ ನಾಲ್ವರು ವಿದ್ಯಾರ್ಥಿಗಳು ಮತ್ತು ಡಿಪ್ಲೊಮಾ ಓದುತ್ತಿದ್ದ ಇನ್ನೋರ್ವ ಸೇರಿ ಶಶಾಂಕ್ ಜೊತೆ ಕ್ರಿಕೆಟ್ ಬೆಟ್ಟಿಂಗ್ ಮಾಡಿದ್ದರು. ಆದರೆ ಬೆಟ್ಟಿಂಗ್ ನಲ್ಲಿ ಸೋತಿದ್ದ ಶಶಾಂಕ್ ಈ ಐವರಿಗೆ 3,000 ರೂ. ನೀಡಬೇಕಿತ್ತು. ಹಣ ನೀಡಿಲ್ಲದ ಹಿನ್ನೆಲೆಯಲ್ಲಿ ಶಶಾಂಕ್ ನನ್ನು ಆತನ ಸ್ನೇಹಿತರೇ ಉಸಿರುಕಟ್ಟಿ ಸಾಯಿಸಿ, ನಂತರ ಶವವನ್ನು ಹೊಂಗೆಸೊಪ್ಪಿನಿಂದ ಮುಚ್ಚಿಟ್ಟು ಪರಾರಿಯಾಗಿದ್ದರು.[ಮಂಡ್ಯದಲ್ಲಿ ವಿಷವುಣಿಸಿ, ಉಸಿರುಗಟ್ಟಿಸಿ ವಿದ್ಯಾರ್ಥಿಯ ಕೊಲೆ]

A student who was studying 9th standard dies for cricket betting by his friends in Mandya

ಕಾಣೆಯಾಗಿದ್ದ ಶಶಾಂಕ್ ಶವ ಪತ್ತೆಯಾಗುತ್ತಲೇ ಕುಟುಂಬ ವರ್ಗದ ಆಕ್ರಂದನ ಮುಗಿಲುಮುಟ್ಟಿತ್ತು. ಜೊತೆಗೆ ಈ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿತ್ತು. ದೂರು ದಾಖಲಿಸಿಕೊಂಡಿದ್ದ ಕೆ.ಆರ್.ಪೇಟೆ ಗ್ರಾಮಾಂತರ ಠಾಣೆಯ ಪೊಲೀಸರು ಶಶಾಂಕನ ಫೋನ್ ನಲ್ಲಿದ್ದ ಕಾಲ್ ಲಿಸ್ಟ್ ಮೂಲಕ ಆರೋಪಿಯನ್ನು ಪತ್ತೆ ಮಾಡಿದ್ದರು. ಐವರಲ್ಲಿ ಇಬ್ಬರು ಆರೋಪಿಗಳು ಪೊಲೀಸರ ವಶದಲ್ಲಿದ್ದು, ಇನ್ನು ಮೂವರ ಶೋಧ ಕಾರ್ಯ ನಡೆಯುತ್ತಿದೆ.

ಇದು ಕ್ರಿಕೆಟ್ ಬೆಟ್ಟಿಂಗ್ ಗಾಗಿ ನಡೆದ ಕೊಲೆ ಎಂಬುದು ಆರೋಪಿಗಳಿಂದ ತಿಳಿದುಬಂದಿದೆ. ಈಗಿನ್ನೂ ಒಂಬತ್ತನೇ ತರಗತಿ ಓದುತ್ತಿರುವ ಮಕ್ಕಳು ಬೆಟ್ಟಿಂಗ್ ಹುಚ್ಚಿನಿಂದಾಗಿ ಕೊಲೆ ಮಾಡುವ ಮಟ್ಟಕ್ಕಿಳಿಯುತ್ತಾರೆಂದರೆ ನಿಜಕ್ಕೂ ಶೋಚನೀಯ ಸಂಗತಿ.

{promotion-urls}

English summary
A student who was studying 9th standard dies for cricket betting by his friends. The incident took place in K.R.Pete, Mandya District on May 16th. Mandya rural Police arrested two culprits out of five.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X