ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ತಾಯಿ ಅಸ್ಥಿ ವಿಸರ್ಜನೆಗೆ ಬಂದ ಮಗನೂ ನೀರು ಪಾಲು

|
Google Oneindia Kannada News

ಮಂಡ್ಯ, ಆಗಸ್ಟ್ 1: ಕಾವೇರಿ ನದಿಯಲ್ಲಿ ತನ್ನ ತಾಯಿಯ ಅಸ್ಥಿ ವಿಸರ್ಜಿಸಲು ಬಂದ ಮಗ ಅದೇ ನದಿಯಲ್ಲಿ ಕೊಚ್ಚಿ ಹೋದ ಘಟನೆ ಶ್ರೀರಂಗಪಟ್ಟಣದ ಗಂಜಾಂ ಬಳಿ ನಡೆದಿದೆ.

 ತೀರ್ಥಹಳ್ಳಿ : ತಾಯಿಯ ಮುಂದೆಯೇ ನೀರಿನಲ್ಲಿ ಕೊಚ್ಚಿ ಹೋದ ಬಾಲಕಿ ತೀರ್ಥಹಳ್ಳಿ : ತಾಯಿಯ ಮುಂದೆಯೇ ನೀರಿನಲ್ಲಿ ಕೊಚ್ಚಿ ಹೋದ ಬಾಲಕಿ

ಶ್ರೀಕಾಂತ್ (45) ಮುಳುಗಿ ಸಾವಿಗೀಡಾದ ವ್ಯಕ್ತಿ. ಬೆಂಗಳೂರಿನ ರಾಜಾಜಿನಗರದ ನಿವಾಸಿ ಶ್ರೀಕಾಂತ್ ಅವರ ತಾಯಿ ಅಂಬುಜಾ ಸಾವಿಗೀಡಾಗಿದ್ದರು. ಹಾಗಾಗಿ ತಾಯಿಯ ಅಸ್ಥಿ ವಿಸರ್ಜನೆಗಾಗಿ 5 ಜನರ ಜೊತೆ ಸಂಗಮಕ್ಕೆ ಶ್ರೀಕಾಂತ್ ಆಗಮಿಸಿದ್ದರು. ಈ ವೇಳೆ ಅಸ್ಥಿ ವಿಸರ್ಜನೆಗೆ ಕಾವೇರಿ ನದಿಗಿಳಿದಾಗ ನೀರಿನ ರಭಸಕ್ಕೆ ಕೊಚ್ಚಿ ಹೋಗಿದ್ದಾರೆ. ಸುಮಾರು 4 ಗಂಟೆಗಳ ತೀವ್ರ ಶೋಧದ ಬಳಿಕ ಕೊಚ್ಚಿ ಹೋದ ಜಾಗದಿಂದ 6 ಕಿ. ಮೀ ದೂರದಲ್ಲಿರುವ ಶ್ರೀರಂಗಪಟ್ಟಣದ ತಾಲೂಕಿನ ಮಹದೇವಪುರದ ಬಳಿ ಶ್ರೀಕಾಂತ್ ಶವ ಸಿಕ್ಕಿದೆ.

40 Year Man Drowned In Cauveri River

ವ್ಯಕ್ತಿಯ ಶವ ಮೇಲೆತ್ತಿ ಶ್ರೀರಂಗಪಟ್ಟಣ ಸಾರ್ವಜನಿಕ ಆಸ್ಪತ್ರೆಗೆ ರವಾನೆ ಮಾಡಲಾಗಿದ್ದು, ಮರಣೋತ್ತರ ಪರೀಕ್ಷೆ ನಡೆಸಲಾಗುತ್ತದೆ. ಶ್ರೀರಂಗಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

English summary
40 year old Shrikanth drowned in Cauvery river. He drown while he performing funeral rites of his mother in cauvery river near srirangapatna.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X