ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೇ 23ರಂದು ಮಂಡ್ಯ ಜಿಲ್ಲೆಯಾದ್ಯಂತ ನಿಷೇಧಾಜ್ಞೆ ಜಾರಿ

|
Google Oneindia Kannada News

Recommended Video

Mandya: ಮಂಡ್ಯದಲ್ಲಿ ಬಾರಿ ಕುತೂಹಲ ಕೆರಳಿಸಿದ ಫಲಿತಾಂಶ | ಮೇ 23ರಂದು ಮಂಡ್ಯ ನಿಶ್ಯಬ್ಧ

ಮಂಡ್ಯ, ಮೇ 18: ಮಂಡ್ಯ ಲೋಕಸಭೆ ಚುನಾವಣೆ ಕಣ ಬಹು ಜಿದ್ದಾ-ಜಿದ್ದಿನದ್ದಾದ್ದರಿಂದ ಭದ್ರತೆ ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದೆ, ಹಾಗಾಗಿ ಫಲಿತಾಂಶದ ದಿನ ಜಿಲ್ಲೆಯಾದ್ಯಂತ ನಿಷೇಧಾಜ್ಞೆ ಹೊರಡಿಸಲಾಗಿದೆ.

ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ

ಸಾಮಾನ್ಯವಾಗಿ ಚುನಾವಣಾ ಮತ ಎಣಿಕೆಯ ಸುತ್ತ-ಮುತ್ತ ಮಾತ್ರ ನಿಷೇಧಾಜ್ಞೆ ಇರುತ್ತದೆ, ಆದರೆ ಮಂಡ್ಯ ಅತಿ ಸೂಕ್ಷ್ಮ ಪ್ರದೇಶವಾದ್ದರಿಂದ ಫಲಿತಾಂಶದ ದಿನ (ಮೇ 23) ರಂದು ಮಂಡ್ಯ ನಗರ ಸೇರಿ ಲೋಕಸಭೆ ಕ್ಷೇತ್ರದ ಪ್ರಮುಖ ನಗರ, ಪಟ್ಟಣ ಹಾಗೂ ಇನ್ನೂ ಕೆಲವು ಸೂಕ್ಷ್ಮ ಪ್ರದೇಶಗಳಲ್ಲಿ ನಿಷೇಧಾಜ್ಞೆ ಹೇರಲಾಗಿದೆ.

ನಿಖಿಲ್ ಸೋಲಿಸಲು 'ಕೈ' ನಾಯಕರ ಪಣ?: ಮುಖಂಡನ ಸ್ಫೋಟಕ ಹೇಳಿಕೆ ನಿಖಿಲ್ ಸೋಲಿಸಲು 'ಕೈ' ನಾಯಕರ ಪಣ?: ಮುಖಂಡನ ಸ್ಫೋಟಕ ಹೇಳಿಕೆ

ಗೆದ್ದ ಅಭ್ಯರ್ಥಿಗಳ ಮೆರವಣಿಗೆಗೆ ನಿಷೇಧ ಹೇರಲಾಗಿದ್ದು, ಯಾವುದೇ ಪಕ್ಷದವರು ಫಲಿತಾಂಶದ ನಂತರ ಮೆರವಣಿಗೆ ಮಾಡುವವುದಕ್ಕೆ ನಿಷೇಧ ಹೇರಲಾಗಿದೆ.

144 section in Mandya district on May 23 result day

ಮೇ 23 ರಂದು ಬೆಳಿಗ್ಗೆ 6 ಗಂಟೆಯಿಂದ ಮಧ್ಯ ರಾತ್ರಿಯವರೆಗೂ ನಿಷೇಧಾಜ್ಞೆ ಜಾರಿಯಲ್ಲಿರಲಿದೆ ಎಂದು ಜಿಲ್ಲಾಧಿಕಾರಿ ಪಿ.ಸಿ.ಜಾಫರ್ ಅವರು ಹೇಳಿದ್ದಾರೆ. ಪಟಾಕಿ ಸಿಡಿಸುವುದು, ಸಿಡಿಮದ್ದು ಹೊಡೆಯುವುದು, ಗುಂಪುಗೂಡಿ ಘೋಷಣೆ ಕೂಗುವುದು ಸಹ ಅಂದು ಮಾಡುವಂತಿಲ್ಲ.

ಮಂಡ್ಯ ಕುಡುಕರಿಂದ ದಾಖಲೆ, ಈ ಬಾರಿ ಅತಿ ಹೆಚ್ಚು ಮದ್ಯ ಮಾರಾಟಮಂಡ್ಯ ಕುಡುಕರಿಂದ ದಾಖಲೆ, ಈ ಬಾರಿ ಅತಿ ಹೆಚ್ಚು ಮದ್ಯ ಮಾರಾಟ

ಮಂಡ್ಯ ಚುನಾವಣಾ ಕಣದಲ್ಲಿ ಸಿಎಂ ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರೆ, ಸುಮಲತಾ ಅವರು ಎದುರಾಳಿಯಾಗಿ ಸ್ಪರ್ಧಿಸಿದ್ದಾರೆ. ಇಬ್ಬರ ನಡುವೆ ಭಾರಿ ಬಿರುಸಿನ ಪೈಪೋಟಿ ನಡೆದಿದ್ದು, ಈ ಚುನಾವಣಾ ಫಲಿತಾಂಶದ ಮೇಲೆ ರಾಜ್ಯ ರಾಜಕೀಯ ಭವಿಷ್ಯವೂ ನಿಂತಿದೆ ಎನ್ನಲಾಗುತ್ತಿದೆ.

English summary
144 section imposed in Mandya district on May 23 election result day. Mandya has become very sensitive area. expected that some hurdles between Nikhil Kumaraswamy and Sumalatha followers may happen.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X