ಮಡಿಕೇರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಡಿಕೇರಿಯಲ್ಲಿ ಸಾವಿನಲ್ಲಿ ಕೊನೆಯಾಯ್ತು ಗಂಡನಿಗಾಗಿ ನಡೆದ ಅಕ್ಕ ತಂಗಿಯರ ಜಗಳ

By ಮಡಿಕೇರಿ ಪ್ರತಿನಿಧಿ
|
Google Oneindia Kannada News

ಮಡಿಕೇರಿ, ಜನವರಿ 6: ಇಬ್ಬರು ಹೆಂಡತಿಯರ ನಡುವಿನ ಜಗಳ ಒಬ್ಬಳ ಕೊಲೆಯಲ್ಲಿ ಕೊನೆಯಾಗಿದೆ. ಮಡಿಕೇರಿಯ ವಿರಾಜಪೇಟೆ ತಾಲೂಕಿನ ಬಳಂಜಬೆರೆಯ ಕಾಫಿ ಎಸ್ಟೇಟ್ ಲೈನ್ ಮನೆಯಲ್ಲಿ ಅಕ್ಕನೇ ತನ್ನ ತಂಗಿಯನ್ನು ಕೊಲೆಗೈದು ಪರಾರಿಯಾಗಿದ್ದಾಳೆ.

ಕೊಲೆಯಾದ ಮಹಿಳೆಯನ್ನು ವಶಿಕಾ ದೇವಿ (27) ಎಂದು ಗುರುತಿಸಲಾಗಿದೆ. ಆಕೆಯ ಅಕ್ಕ ಆಶಿಕಾ ಕೊಲೆ ಮಾಡಿದ ಆರೋಪಿ.

ಶಿವಮೊಗ್ಗದಲ್ಲಿ ಮಹಿಳೆ ಶವ ಪತ್ತೆ; ಪ್ರಕರಣಕ್ಕೆ ತಿರುವು! ಶಿವಮೊಗ್ಗದಲ್ಲಿ ಮಹಿಳೆ ಶವ ಪತ್ತೆ; ಪ್ರಕರಣಕ್ಕೆ ತಿರುವು!

ಕಾಫಿ ತೋಟದಲ್ಲಿ ಕೆಲಸ ಮಾಡುವ ಜಾರ್ಖಂಡ್ ಮೂಲದ ದಯಾನಂದ್ ಎಂಬಾತ ಏಳು ವರ್ಷಗಳ ಹಿಂದೆ ಆಶಿಕಾ ಎಂಬಾಕೆಯನ್ನು ಮದುವೆಯಾಗಿದ್ದ. ಇದಾದ ಕೆಲವೇ ವರ್ಷಗಳ ನಂತರ ಆಶಿಕಾ ಸಹೋದರಿ ವಶಿಕಾಳನ್ನೂ ಪ್ರೀತಿಸಿ ವಿವಾಹವಾಗಿದ್ದ. ಈ ಮೂವರೂ ಒಂದೇ ಮನೆಯಲ್ಲಿ ಸಂಸಾರ ನಡೆಸುತ್ತಿದ್ದರು.

Women Killed Her Sister In Virajpete

ಆದರೆ ಕೆಲ ದಿನಗಳಿಂದ ಆಶಿಕಾ ಮತ್ತು ವಶಿಕಾ ನಡುವೆ ಜಗಳ ಹೆಚ್ಚಾಗಿತ್ತು. ಶನಿವಾರ ಸಂಜೆ ಕಾಫಿ ತೋಟದಿಂದ ಇಬ್ಬರೂ ಬಂದ ನಂತರ ಮತ್ತೆ ಜಗಳ ಶುರುವಾಗಿದೆ. ಜಗಳ ವಿಕೋಪಕ್ಕೆ ಹೋಗಿ ಕೊಲೆಯಲ್ಲಿ ಕೊನೆಯಾಗಿದೆ. ಆಶಿಕಾ ತಂಗಿಯನ್ನು ಚಾಕುವಿನಿಂದ ಕೊಲೆ ಮಾಡಿ ಪರಾರಿಯಾಗಿದ್ದಾಳೆ. ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

English summary
women killed her sister while quarreling to the matter of husband in virajpete of madikeri,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X