ಕೊಡಗಿನಲ್ಲಿ ಟಿಪ್ಪು ಜಯಂತಿ, ಮೃತ ಕುಟ್ಟಪ್ಪ ನೆನಪಿಗಾಗಿ ಹುತಾತ್ಮ ದಿನಾಚರಣೆ
ಮಡಿಕೇರಿ, ನವೆಂಬರ್ 10 : ಕೊಡಗಿನಲ್ಲಿ ಪ್ರತಿಭಟನೆ, ಬಂದ್, ಆಕ್ರೋಶ, ಪೊಲೀಸ್ ಸರ್ಪಗಾವಲಿನಲ್ಲಿ ಟಿಪ್ಪು ಜಯಂತಿಯನ್ನು ಆಚರಿಸಲಾಗಿದೆ.
ಇನ್ನೊಂದೆಡೆ ಪ್ರತಿಭಟನೆ ನಡೆಸಿದ ಹಿಂದೂಪರ, ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ. ಮತ್ತೊಂದೆಡೆ ಕಳೆದ ಮೂರು ವರ್ಷಗಳ ಹಿಂದೆ ಗಲಭೆಯಲ್ಲಿ ಮೃತಪಟ್ಟ ಹಿಂದೂಪರ ಸಂಘಟನೆಯ ಮುಖಂಡ ಕುಟ್ಟಪ್ಪ ಅವರ ನೆನಪಿಗಾಗಿ ಹುತಾತ್ಮ ದಿನವನ್ನಾಗಿ ಆಚರಿಸಲಾಗಿದೆ.
ಮಡಿಕೇರಿಯಲ್ಲಿ
ಟಿಪ್ಪು
ಜಯಂತಿಗೆ
ಸಚಿವ
ಸಾರಾ
ಮಹೇಶ್
ಗೈರು,
ಖಾಲಿ
ಖಾಲಿ
ಚೇರು
ಕೊಡಗಿನ
ಮಡಿಕೇರಿ,
ಸೋಮವಾರಪೇಟೆ
ಮತ್ತು
ವಿರಾಜಪೇಟೆಯಲ್ಲಿ
ಟಿಪ್ಪು
ಜಯಂತಿಯನ್ನು
ಸರ್ಕಾರ
ಬಿಗಿಪೊಲೀಸ್
ಬಂದೋಬಸ್ತ್ನಲ್ಲಿ
ಆಚರಣೆ
ನಡೆಸಿದ್ದು,
ಕೆಲವೇ
ಕೆಲವರಿಗೆ
ಮಾತ್ರ
ಕಾರ್ಯಕ್ರಮದಲ್ಲಿ
ಭಾಗವಹಿಸಲು
ಅವಕಾಶ
ಮಾಡಿಕೊಡಲಾಗಿತ್ತು.
ಆಹ್ವಾನ
ಪತ್ರಿಕೆಯಿದ್ದವರಿಗೆ
ಮಾತ್ರ
ಪ್ರವೇಶ
ನೀಡಲಾಗಿತ್ತು.
ಮಡಿಕೇರಿ
ಕೋಟೆ
ಹಳೇ
ವಿಧಾನಸಭಾಂಗಣದಲ್ಲಿ
ಕಾರ್ಯಕ್ರಮ
ನಡೆಸಲಾಯಿತು.
ಇದಕ್ಕೂ ಮುನ್ನ ವಿಶ್ವಹಿಂದೂ ಪರಿಷತ್, ಭಜರಂಗದಳ ಸೇರಿದಂತೆ ವಿವಿಧ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಮಡಿಕೇರಿಯ ಓಂಕಾರೇಶ್ವರ ದೇವಾಲಯದಲ್ಲಿ ಮೃತ ಕುಟ್ಟಪ್ಪ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ವಿಶೇಷ ಪೂಜೆ ಸಲ್ಲಿಸಿದರು. ನಂತರ ಟಿಪ್ಪು ಜಯಂತಿ ಕಾರ್ಯಕ್ರಮ ನಡೆಯುವ ಕೋಟೆ ಆವರಣಕ್ಕೆ ತೆರಳಲು ಪ್ರಯತ್ನಿಸಿದಾಗ ದೇವಾಲಯದ ಬಳಿಯೇ ಪ್ರತಿಭಟನಾ ಕಾರರನ್ನು ಪೊಲೀಸರು ಬಂಧಿಸಿ ಕರೆದೊಯ್ದಿದ್ದಾರೆ.
ಕೊಡಗಿನಲ್ಲಿ
ಪೊಲೀಸ್
ಸರ್ಪಗಾವಲಲ್ಲಿ
ನಡೆಯಲಿದೆ
ಟಿಪ್ಪು
ಜಯಂತಿ
ಕಪ್ಪುಬಟ್ಟೆ
ಧರಿಸಿ
ತೆರಳಿದ
ವಿಧಾನಪರಿಷತ್
ಸದಸ್ಯ
ಸುನೀಲ್
ಸುಬ್ರಹ್ಮಣಿ
ಅವರನ್ನು
ಪೊಲೀಸರು
ಒಳಗೆ
ಪ್ರವೇಶಿಸದಂತೆ
ತಡೆದಿದ್ದಾರೆ.
ಈ
ನಡುವೆ
ಪೊಲೀಸರು
ಮತ್ತು
ಅವರ
ನಡುವೆ
ವಾಗ್ವಾದ
ನಡೆದಿದ್ದು,
ಆಕ್ರೋಶಗೊಂಡ
ಅವರು
ಧಿಕ್ಕಾರ
ಕೂಗಿ
ಹೊರಬಂದಿದ್ದಾರೆ.
ಕೋಟೆ
ಆವರಣದಲ್ಲಿ
ಪ್ರತಿಭಟನೆ
ನಡೆಸಿದ
ಶಾಸಕ
ಅಪ್ಪಚ್ಚು
ರಂಜನ್,
ಎಮ್ಎಲ್ಸಿ
ಸುನೀಲ್
ಸುಬ್ರಮಣಿ,
ಜಿ.ಪಂ.ಅಧ್ಯಕ್ಷ
ಬಿ.ಎ.
ಹರೀಶ್
ಸೇರಿದಂತೆ
ಹಲವರನ್ನು
ಪೋಲಿಸರು
ಬಂಧಿಸಿದ್ದಾರೆ.
ಪರಂ,
ಎಚ್
ಡಿಕೆ
ವಿರುದ್ಧ
ಮೈಸೂರಲ್ಲಿ
ಕಿಡಿ
ಕಾರಿದ
ಕಾಂಗ್ರೆಸ್
ಶಾಸಕ
ತನ್ವೀರ್
ಸೇಠ್
ವಿರಾಜಪೇಟೆಯಲ್ಲಿಯೂ
ಟಿಪ್ಪು
ಜಯಂತಿಯನ್ನು
ವಿರೋಧಿಸಲಾಗಿದ್ದು,
ಶಾಸಕ
ಕೆ.ಜಿ.ಬೋಪಯ್ಯ
ಅವರನ್ನು
ಪೊಲೀಸರು
ವಶಕ್ಕೆ
ಪಡೆದಿದ್ದಾರೆ.
ಜಿಲ್ಲಾಡಳಿತ
ಬಿಗಿ
ಪೊಲೀಸ್
ಬಂದೋಬಸ್ತ್ನಲ್ಲಿ
ಟಿಪ್ಪು
ಜಯಂತಿ
ಕಾರ್ಯಕ್ರಮವನ್ನು
ಯಾವುದೇ
ಅಹಿತಕರ
ಘಟನೆಗೆ
ಅವಕಾಶವಾಗದಂತೆ
ಮಾಡಿ
ಮುಗಿಸಿದ್ದು,
ಜಿಲ್ಲೆಯಲ್ಲಿ
ಆತಂಕದ
ವಾತಾವರಣ
ಮಾತ್ರ
ಮುಂದುವರೆದಿದೆ.
ಸ್ವಯಂ
ಪ್ರೇರಿತವಾಗಿ
ಬಂದ್
ನಡೆಸಿದ
ಹಿನ್ನಲೆಯಲ್ಲಿ
ಜನಜೀವನ
ಅಸ್ತವ್ಯಸ್ತಗೊಂಡಿದೆ.
ಯಾವುದೇ
ಖಾಸಗಿ
ಬಸ್ಗಳು
ರಸ್ತೆಗಿಳಿದಿಲ್ಲ.
ಮಡಿಕೇರಿ ನಗರದ ಬಹುತೇಕ ಅಂಗಡಿ ಮುಂಗಟ್ಟುಗಳನ್ನು ಮುಚ್ಚಲಾಗಿದೆ. ಜನ ವಾಹನ ಸಂಚಾರವಿಲ್ಲದೆ ರಸ್ತೆಗಳು ಬಿಕೋ ಎನ್ನುತ್ತಿವೆ. ನಗರದ ಎಲ್ಲಾ ಕಡೆಗಳಲ್ಲೂ ಮುಂಜಾಗ್ರತಾ ಪೊಲೀಸ್ ಕಟ್ಟೆಚ್ಚರ ವಹಿಸಲಾಗಿದೆ.