ಕೊಡಗು ಜಿಲ್ಲೆಯ 5ನೇ ತಾಲ್ಲೂಕಾಗಿ ಕುಶಾಲನಗರ ಅಸ್ತಿತ್ವಕ್ಕೆ
ಮಡಿಕೇರಿ, ಜುಲೈ 6: ಕುಶಾಲನಗರವನ್ನು ಕೇಂದ್ರವಾಗಿಸಿಕೊಂಡ ನೂತನ ತಾಲ್ಲೂಕನ್ನು ಕಂದಾಯ ಸಚಿವ ಆರ್.ಅಶೋಕ್ ಉದ್ಘಾಟಿಸುವ ಮೂಲಕ, ಕೊಡಗು ಜಿಲ್ಲೆಯ ಐದನೇ ತಾಲ್ಲೂಕು ಅಧಿಕೃತವಾಗಿ ಅಸ್ತಿತ್ವಕ್ಕೆ ಬಂದಿತು.
ತಾಲ್ಲೂಕು ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಕಂದಾಯ ಸಚಿವರು, "ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಸರ್ಕಾರ ಪೊನ್ನಂಪೇಟೆ ಮತ್ತು ಕುಶಾಲನಗರ ನೂತನ ತಾಲ್ಲೂಕಿಗೆ ಅಧಿಸೂಚನೆ ಹೊರಡಿಸಿತ್ತು. ಅದರಂತೆ ಇಂದು ಕುಶಾಲನಗರ ತಾಲ್ಲೂಕು ಅಧಿಕೃತವಾಗಿ ಅಸ್ತಿತ್ವಕ್ಕೆ ಬಂದಿದೆ,'' ಎಂದರು.
"ತಾಲ್ಲೂಕು ಕೇಂದ್ರದಲ್ಲಿ ಗ್ರೇಡ್- 1 ತಹಶೀಲ್ದಾರರು ಸೇರಿದಂತೆ ಒಟ್ಟು 12 ಹುದ್ದೆಗಳನ್ನು ಭರ್ತಿ ಮಾಡಲಾಗಿದೆ. ಜೊತೆಗೆ 50 ಲಕ್ಷ ರೂ. ಹಣ ಬಿಡುಗಡೆ ಮಾಡಲಾಗಿದೆ. ಕುಶಾಲನಗರ ತಾಲ್ಲೂಕು ಅಭಿವೃದ್ಧಿಗೆ ಸಂಬಂಧಿಸಿದಂತೆ ಎಲ್ಲಾ ರೀತಿಯ ನೆರವು ನೀಡಲಾಗುವುದು. ಹಂತಹಂತವಾಗಿ ಮೂಲ ಸೌಲಭ್ಯಗಳನ್ನು ಒದಗಿಸಲಾಗುವುದು,'' ಎಂದು ಸಚಿವ ಆರ್. ಅಶೋಕ್ ಹೇಳಿದರು.
132
ಕೋಟಿ
ಮಂಜೂರು
"ಕೊಡಗು
ಜಿಲ್ಲೆಗೆ
2020-
21ನೇ
ಸಾಲಿನಲ್ಲಿ
ವಿಪತ್ತು
ನಿರ್ವಹಣೆಗಾಗಿ
ರಾಜ್ಯ
ಸರ್ಕಾರ
ಒಟ್ಟು
132
ಕೋಟಿ
ಹಣ
ಮಂಜೂರು
ಮಾಡಿದೆ.
ಪ್ರವಾಹ
ಪೀಡಿತರಿಗೆ
82
ಕೋಟಿ,
ಬೆಳೆ
ಹಾನಿಗೆ
30
ಕೋಟಿ,
ಕೋವಿಡ್
ನಿರ್ವಹಣೆಗೆ
10
ಕೋಟಿ
ಸೇರಿದಂತೆ
ಒಟ್ಟು
132
ಕೋಟಿಯಲ್ಲಿ
ಇದೀಗ
ಜಿಲ್ಲೆಯಲ್ಲಿ
106
ಕೋಟಿ
ವಿಪತ್ತು
ನಿಧಿ
ಇರುವುದಾಗಿ,''
ಮಾಹಿತಿ
ಒದಗಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ ಕ್ಷೇತ್ರ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಮಾತನಾಡಿ, "ಕುಶಾಲನಗರ- ಸುಂಟಿಕೊಪ್ಪ ಹೋಬಳಿ ಅಧಿಕ ಜನಸಂಖ್ಯೆ ಹೊಂದಿತ್ತು. ಈಗ ತಾಲೂಕು ಆಗಿ ಘೋಷಣೆಯಾಗಿದ್ದು ಸಂತಸದ ವಿಷಯ ಎಂದರಲ್ಲದೇ, ಎರಡು ಹೋಬಳಿಗಳಲ್ಲಿ ಅತೀ ಹೆಚ್ಚಿನ ಪ್ರಮಾಣದ ವ್ಯಾಪಾರ ವಹಿವಾಟು ನಡೆಯುತ್ತಿದೆ. ನೂತನ ತಾಲ್ಲೂಕು ಮೂಲಕ ಜನರಿಗೆ ಉತ್ತಮ ಆಡಳಿತ ನೀಡಲು ಸಾದ್ಯವಾಗುತ್ತದೆ,'' ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡ ಕೊಡಗು- ಮೈಸೂರು ಲೋಕಸಭಾ ಕ್ಷೇತ್ರ ಸಂಸದ ಪ್ರತಾಪ್ ಸಿಂಹ ಮಾತನಾಡಿ, "ಅತೀ ಶೀಘ್ರದಲ್ಲಿ ಬೆಳವಣಿಗೆ ಕಂಡ ಕುಶಾಲನಗರ ಅಭಿವೃದ್ಧಿಯತ್ತ ಸರ್ಕಾರ ಚಿಂತನೆ ಹರಿಸಿ ನೂತನ ತಾಲೂಕು ಘೋಷಣೆ ಮಾಡಿದೆ. ಕಂದಾಯ ಸಚಿವ ಆರ್. ಅಶೋಕ್, ಸ್ಥಳೀಯ ಶಾಸಕ ಅಪ್ಪಚ್ಚು ರಂಜನ್ ಶ್ರಮ ಇದರಲ್ಲಿ ಅಡಗಿದೆ,'' ಎಂದರು.
Recommended Video
ವಿಧಾನ ಪರಿಷತ್ ಸದಸ್ಯರಾದ ವೀಣಾ ಅಚ್ಚಯ್ಯ ಮಾತನಾಡಿ, "ಕುಶಾಲನಗರವನ್ನು ಕಾವೇರಿ ತಾಲ್ಲೂಕು ಆಗಬೇಕು ಎಂದು ಹಲವು ವರ್ಷಗಳಿಂದ ಹೋರಾಟ ಮಾಡಿಕೊಂಡು ಬರಲಾಗಿದ್ದು, ಅದರಂತೆ ತಾಲ್ಲೂಕು ಅಸ್ತಿತ್ವಕ್ಕೆ ಬಂದಿರುವುದು ಸಂತಸ ತಂದಿದೆ,'' ಎಂದರು.