ಮಡಿಕೇರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮುಕ್ತಿ ಸಿಗದ ಐಎಎಸ್ ಅಧಿಕಾರಿ ಅನುರಾಗ್ ತಿವಾರಿ ಸಾವಿನ ಪ್ರಕರಣ

By ಮಡಿಕೇರಿ ಪ್ರತಿನಿಧಿ
|
Google Oneindia Kannada News

ಮಡಿಕೇರಿ, ಆಗಸ್ಟ್ 28: ಕೊಡಗು ಜಿಲ್ಲೆಯಲ್ಲಿ ಈ ಮೊದಲು ಜಿಲ್ಲಾಧಿಕಾರಿ ಆಗಿದ್ದ ಅನುರಾಗ್ ತಿವಾರಿ ಅವರ ಸಂಶಯಾಸ್ಪದ ಸಾವಿನ ಪ್ರಕರಣ ನಾಲ್ಕು ವರ್ಷ ಕಳೆದರೂ ಅಂತ್ಯವಾಗುವಂತೆ ಕಾಣುತ್ತಿಲ್ಲ.

Recommended Video

ಬೆಂಗಳೂರಿನಲ್ಲಿ Infosys ನೆರವಿನಿಂದ ಹೈ ಟೆಕ್ Corona ಆಸ್ಪತ್ರೆ ಸ್ಥಾಪನೆ | Oneindia Kannada

ಐಎಎಸ್ ಅಧಿಕಾರಿ ಅನುರಾಗ್ ತಿವಾರಿ ಅವರ ಸಾವಿನ ಪ್ರಕರಣದ ತನಿಖೆಯನ್ನು ಸೂಕ್ತ ಸಾಕ್ಷ್ಯ ಇಲ್ಲದ ಕಾರಣ ಮುಕ್ತಾಯಗೊಳಿಸಲು ಉತ್ತರಪ್ರದೇಶ ಹೈಕೋರ್ಟ್ ಗೆ ಸಿಬಿಐ ತನಿಖಾ ತಂಡ ಅರ್ಜಿ ಸಲ್ಲಿಸಿತ್ತು.

ಐಎಎಸ್ ಅಧಿಕಾರಿ ಅನುರಾಗ್ ತಿವಾರಿ ಸಾವು ದಾರಿಗಳ್ಳರಿಂದ?ಐಎಎಸ್ ಅಧಿಕಾರಿ ಅನುರಾಗ್ ತಿವಾರಿ ಸಾವು ದಾರಿಗಳ್ಳರಿಂದ?

ಆದರೆ ಉತ್ತರಪ್ರದೇಶ ಹೈಕೋರ್ಟ್ ಈ ಬಗ್ಗೆ ಪ್ರಕರಣದ ತನಿಖೆಯನ್ನು ಸ್ಥಗಿತಗೊಳಿಸದೇ ಮುಂದುವರಿಸಿ, ಸೆಪ್ಟೆಂಬರ್ ಹತ್ತರ ಒಳಗಾಗಿ ವರದಿ ಸಲ್ಲಿಸುವಂತೆ ಸೂಚನೆ ನೀಡಿದೆ.

 IAS Officer Anurag Tiwari Murder Case: Uttar Pradesh High Court Instruct To Continue Investigation

ಐಎಎಸ್ ಅಧಿಕಾರಿ ಅನುರಾಗ್ ತಿವಾರಿ ಅವರ ಸಾವಿನ ಪ್ರಕರಣವನ್ನು ಮುಕ್ತಾಯಗೊಳಿಸಲು ಮುಂದಾಗಿದ್ದ ಸಿಬಿಐ ಕ್ರಮದ ವಿರುದ್ಧ ತಿವಾರಿ ಸಹೋದರ ಮಾಯಾಂಕ್ ತಿವಾರಿ ಹೈಕೋರ್ಟ್ ಗೆ ಆಕ್ಷೇಪಣಾ ಅರ್ಜಿ ಸಲ್ಲಿಸಿದ್ದರು.

 IAS Officer Anurag Tiwari Murder Case: Uttar Pradesh High Court Instruct To Continue Investigation

ಇದೀಗ ಮತ್ತೆ ಸಿಬಿಐ ಅನುರಾಗ್ ತಿವಾರಿ ಅನುಮಾನಾಸ್ಪದ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತಷ್ಟು ಸಾಕ್ಷ್ಯ ಕಲೆಹಾಕಲು ತನಿಖೆ ಮುಂದುವರಿಸಬೇಕಾಗಿದೆ. ಅನುರಾಗ್ ತಿವಾರಿ ಅವರು ಉತ್ತರಪ್ರದೇಶದ ಲಖನೌ ರಸ್ತೆ ಬದಿಯಲ್ಲಿ ಅನುಮಾನಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದರು.

English summary
Former DC of the Kodagu district, The suspicious death case of IAS Officer Anurag Tiwari does not appear to be ending even after four years.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X