ಮಡಿಕೇರಿಯಲ್ಲಿ ಮಳೆ ಹಾನಿ : 100 ಕೋಟಿ ಅನುದಾನ ಘೋಷಿಸಿದ ಸಿಎಂ
ಕೊಡಗು, ಜುಲೈ 19 : 'ಮಳೆಯಿಂದ ಆಗಿರುವ ಹಾನಿಗೆ ಪರಿಹಾರ ನೀಡಲು ಮಡಿಕೇರಿಗೆ ಮೊದಲ ಹಂತದಲ್ಲಿ 100 ಕೋಟಿ ರೂ. ಅನುದಾನ ನೀಡಲಾಗುತ್ತದೆ' ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ಗುರುವಾರ ಎಚ್.ಡಿ.ಕುಮಾರಸ್ವಾಮಿ ಅವರು ಮಡಿಕೇರಿಯಲ್ಲಿ ಹಾರಂಗಿ ಜಲಾಶಯಕ್ಕೆ ಬಾಗಿನ ಅರ್ಪಿಸಿದರು. ಬಳಿಕ ಮಡಿಕೇರಿಯ ಜಿಲ್ಲಾಡಳಿತ ಭವನದಲ್ಲಿ ಅಧಿಕಾರಿಗಳ ಜೊತೆ ಮಳೆ ಹಾನಿಯ ಬಗ್ಗೆ ಸಭೆ ನಡೆಸಿದರು.
ಕೊಡಗಿನಲ್ಲಿ ಮಳೆಯ ರೌದ್ರಾವತಾರಕ್ಕೆ ಬೆಚ್ಚಿದ ಜನರು!
ಸಭೆಯ ಬಳಿಕ ಕುಮಾರಸ್ವಾಮಿ ಅವರು ಪತ್ರಿಕಾಗೋಷ್ಠಿ ನಡೆಸಿದರು
* ಕೊಡಗು ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿದೆ. ಮಳೆಯಿಂದ ಉಂಟಾಗಿರುವ ಸಮಸ್ಯೆ ಅರಿಯಲು ಖುದ್ದು ಬಂದಿದ್ದೇನೆ. ಮಳೆಯಿಂದ ಆದ ಹಾನಿ ಪರಿಹಾರಕ್ಕೆ ಸೂಕ್ತ ಕ್ರಮ ಕೈಗೊಳ್ಳಲು ಸೂಚನೆ ನೀಡಲಾಗಿದೆ.
*
ಜಿಲ್ಲಾಧಿಕಾರಿಗಳ
ಖಾತೆಯಲ್ಲಿ
10
ಕೋಟಿ
ಹಣ
ಇದ್ದು
ಪರಿಹಾರ
ಕಾರ್ಯ
ಕೈಗೊಳ್ಳಲು
ಹಣದ
ಸಮಸ್ಯೆ
ಇಲ್ಲ.
ಕಡಿತಗೊಂಡಿರುವ
ವಿದ್ಯುತ್
ಸಂಪರ್ಕ
ವ್ಯವಸ್ಥೆ
ಕಲ್ಪಿಸಲು
ಹೆಚ್ಚುವರಿ
ಸಿಬ್ಬಂದಿ
ಅಗತ್ಯವಿದೆ
ಹಾಸನ
ಮತ್ತು
ಮೈಸೂರು
ಜಿಲ್ಲೆಯಿಂದ
ಸಿಬ್ಬಂದಿ
ಕರೆಸಿಕೊಳ್ಳಲು
ಕ್ರಮ
ಕೈಗೊಳ್ಳಲಾಗಿದೆ.
ಚಿತ್ರಗಳು : ಉಗ್ರಗೊಂಡ ಕಾವೇರಿ ಶಾಂತಳಾಗಲು ತೀರ್ಥ ಪೂಜೆ
*
ಬೆಳೆ
ಮತ್ತು
ಮನೆ
ಹಾನಿ
ಬಗ್ಗೆ
ಸಮಗ್ರ
ಮಾಹಿತಿ
ತರಿಸಿಕೊಂಡು
ಸೂಕ್ತ
ಪರಿಹಾರ
ನೀಡಲಾಗುವುದು.
ಭತ್ತದ
ಬೆಳೆಗೆ
ಹಾನಿಯಾಗಿದ್ದಲ್ಲಿ
ಉಚಿತ
ಭತ್ತ
ಬೀಜ
ವಿತರಣೆ
ಮಾಡಬೇಕು
ಎಂದು
ಸೂಚನೆ
ನೀಡಲಾಗಿದೆ.
*
ಲೋಕೋಪಯೋಗಿ
ಇಲಾಖೆ
ರಸ್ತೆ
ಸರಿಪಡಿಸಲು
ಹೆಚ್ಚುವರಿ
ಹಣ
ಬೇಕೆಂದು
ಜಿಲ್ಲಾಡಳಿತ
ಕೇಳಿದೆ.
ಮಳೆಯಿಂದ
ನಗರ
ಹಾಗೂ
ಗ್ರಾಮೀಣ
ಪ್ರದೇಶದ
ಜನರ
ಸಮಸ್ಯೆ
ಬಗೆಹರಿಸಲು
ಕ್ರಮ
ಕೈಗೊಳ್ಳಲಾಗುತ್ತಿದೆ.
* ಜಿಲ್ಲೆಯ ಎಲ್ಲಾ ರೀತಿಯ ಮಳೆ ಹಾನಿ ಶಾಶ್ವತ ಪರಿಹಾರಕ್ಕೆ 329 ಕೋಟಿ ಬೇಡಿಕೆ ಬಂದಿದೆ. ಮೊದಲ ಹಂತದಲ್ಲಿ 100 ಕೋಟಿ ನೀಡಲಾಗುವುದು. ಮಳೆ ನಿಂತ ತಕ್ಷಣ ರಸ್ತೆ ಸರಿಪಡಿಸುವ ಕಾರ್ಯ ನಡೆಯಲಿದೆ.
* ಕೊಡಗು ಜಿಲ್ಲೆಯ ಜನತೆ ಅತಂಕಕ್ಕೊಳಗಾಗಬೇಕಿಲ್ಲ. ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ. ಜಿಲ್ಲೆಯ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆ ಭರ್ತಿ ಮಾಡಲು ತ್ವರಿತ ಕ್ರಮ ಕೈಗೊಳ್ಳಲಾಗುವುದು.
* ಸದ್ಯದಲ್ಲೇ ಜಿಲ್ಲೆಯ ಶಾಸಕರು ಹಾಗೂ ಅಧಿಕಾರಿಗಳ ವಿಶೇಷ ಸಭೆ ನಡೆಸಲಾಗುವುದು ಎಂದರು.