ಕರಗೋತ್ಸವದ ಮೂಲಕ ಮಡಿಕೇರಿ ದಸರಾಗೆ ಚಾಲನೆ
ಮಡಿಕೇರಿ, ಅಕ್ಟೋಬರ್ 17: ಕೋವಿಡ್ ಸಂಕಷ್ಟ ಮತ್ತು ಅತಿವೃಷ್ಟಿ ಹಾನಿಯ ನಡುವೆ ಐತಿಹಾಸಿಕ ಮಡಿಕೇರಿ ದಸರಾಕ್ಕೆ ಕರಗೋತ್ಸವದ ಮೂಲಕ ಚಾಲನೆ ನೀಡಲಾಯಿತು.
ನಗರದ ನಾಲ್ಕು ಶಕ್ತಿ ದೇವತೆಗಳಾದ ಕುಂದುರುಮೊಟ್ಟೆ ಚೌಟಿ ಮಾರಿಯಮ್ಮ, ಕಂಚಿಕಾಮಾಕ್ಷಿಯಮ್ಮ, ದಂಡಿನ ಮಾರಿಯಮ್ಮ ಹಾಗೂ ಕೋಟೆ ಮಾರಿಯಮ್ಮ ದೇವಾಲಯಗಳ ಕರಗಗಳಿಗೆ ಪಂಪಿನ ಕೆರೆ ಬಳಿ ಸಾಂಪ್ರದಾಯಿಕ ಪೂಜೆ, ವಿಧಿ ವಿಧಾನಗಳನ್ನು ನೆರವೇರಿಸುವುದರೊಂದಿಗೆ ನವರಾತ್ರಿಯ ದೇವಿ ಪೂಜೆಗೆ ಮಳೆಯ ಸಿಂಚನದ ನಡುವೆ ಚಾಲನೆ ನೀಡಲಾಯಿತು.
ದಸರಾ ಹಿನ್ನೆಲೆ ಮಂಜಿನ ನಗರಿಯ ನಾಲ್ಕು ಶಕ್ತಿ ದೇವತೆಗಳಿಗೆ ಪೂಜೆ
ಕರಗಗಳು
ಪಂಪಿನಕೆರೆಯಿಂದ
ಬನ್ನಿ
ಮಂಟಪ,
ಕೋದಂಡರಾಮ
ದೇವಾಲಯ,
ಚೌಡೇಶ್ವರಿ
ದೇವಾಲಯ,
ಕನ್ನಿಕಾ
ಪರಮೇಶ್ವರಿ
ದೇವಾಲಯ
ಹಾಗೂ
ಇತಿಹಾಸ
ಪ್ರಸಿದ್ಧ
ಪೇಟೆ
ರಾಮಮಂದಿರ
ದೇವಾಲಯಗಳಲ್ಲಿ
ಪೂಜೆ
ಸ್ವೀಕರಿಸಿದವು.
ನಂತರ
ತಮ್ಮ
ತಮ್ಮ
ದೇವಾಲಯಗಳಿಗೆ
ತೆರಳಿದವು.
ನಾಲ್ಕು
ಕರಗಗಳು
ನಗರ
ಸಂಚಾರವನ್ನು
ಸಾಂಕೇತಿಕವಾಗಿ
ಆರಂಭಿಸಿದ್ದು,
ಕೋವಿಡ್
ಹಿನ್ನೆಲೆಯಲ್ಲಿ
ಈ
ಬಾರಿ
ಮನೆ
ಪೂಜೆಗೆ
ತೆರಳುತ್ತಿಲ್ಲ.
ವಿಜಯದಶಮಿಯ ದಿನವಾದ ಅ.26ರಂದು ಮಧ್ಯ ರಾತ್ರಿ ಬನ್ನಿ ಕಡಿಯುವುದರೊಂದಿಗೆ ದಸರಾ ಮಹೋತ್ಸವಕ್ಕೆ ತೆರೆ ಎಳೆಯಲಾಗುತ್ತದೆ. ಎರಡು ದಿನಗಳಿಗೆ ಮಾತ್ರ ಕರಗ ಸಂಚಾರವನ್ನು ಸೀಮಿತಗೊಳಿಸಲಾಗಿದ್ದು, ನವರಾತ್ರಿಯ ಒಂಬತ್ತು ದಿನಗಳಲ್ಲಿ, ನಾಲ್ಕು ಶಕ್ತಿ ದೇವಾಲಯಗಳಲ್ಲಿ ಕರಗಗಳಿಗೆ ವಿಶೇಷ ಪೂಜೆಗಳು ಎಂದಿನಂತೆ ನಡೆಯಲಿವೆ.
ಕರಗೋತ್ಸವಕ್ಕೆ ಚಾಲನೆ ನೀಡುವ ಸಂದರ್ಭ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ, ಶಾಸಕ ಎಂ.ಪಿ.ಅಪ್ಪಚ್ಚುರಂಜನ್, ವಿಧಾನ ಪರಿಷತ್ ಸದಸ್ಯ ಎಂ.ಪಿ.ಸುನೀಲ್ ಸುಬ್ರಮಣಿ ಮತ್ತಿತರ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಹಾಜರಿದ್ದರು.