ಗುಂಡಿಕ್ಕಿಕೊಂಡು ಕಾಫಿ ವ್ಯಾಪಾರಿ ಆತ್ಮಹತ್ಯೆಗೆ ಶರಣು
Recommended Video
ಸಂಚಾರಿ
ಪೊಲೀಸ್
ನಿಂದ
ಹಲ್ಲೆಗೊಳಗಾದ
ಟ್ರಕ್
ಚಾಲಕ
ಸುನೀಲ್
ಹೇಳಿದ್ದೇನು
?
|
Oneindia
Kannada
ಮಡಿಕೇರಿ, ಸೆಪ್ಟೆಂಬರ್ 29: ಕಾಫಿ ವ್ಯಾಪಾರಿಯೊಬ್ಬರು ತಮ್ಮ ಮಳಿಗೆಯಲ್ಲಿ ಗುಂಡಿಕ್ಕಿಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಹುದಿಕೇರಿ ಗ್ರಾಮದಲ್ಲಿ ನಡೆದಿದೆ.
ಚಿಕ್ಕಬಳ್ಳಾಪುರ: ಸಾಮಾಜಿಕ ಜಾಲತಾಣ ಹುಚ್ಚಿಗೆ ಗೃಹಿಣಿ ಬಲಿ
ಗ್ರಾಮದ ಅಚ್ಚಿಯಂಡ ಸುನೀಲ್ (45) ಎಂಬಾತ ಆತ್ಮಹತ್ಯೆಗೆ ಶರಣಾದ ವ್ಯಕ್ತಿ. ಶನಿವಾರ ಸೆಪ್ಟೆಂಬರ್ 28ರಂದು ಹುದಿಕೇರಿಯ ಮಹಾದೇವ ದೇವಾಲಯ ಮುಂಭಾಗದ ತನ್ನ ಮಳಿಗೆಯಲ್ಲಿ ಅವರದೇ ರಿವಾಲ್ವರ್ ನಿಂದ ಗುಂಡಿಕ್ಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದು, ಶ್ರೀಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳೆದ 20 ವರ್ಷಗಳಿಂದ ಕಾಫಿ ವ್ಯಾಪಾರದಲ್ಲಿ ತೊಡಗಿಕೊಂಡಿದ್ದು, ಸಮಾಜ ಸೇವೆಯಲ್ಲೂ ಸಕ್ರಿಯರಾಗಿದ್ದರು. ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ. ಇವರಿಗೆ ಪತ್ನಿ, ಓರ್ವ ಪುತ್ರ, ಪುತ್ರಿ ಇದ್ದಾರೆ.
Comments
English summary
An incident occurred in Hudikeri village where a coffee merchant shot himself in his shop and committed suicide.
Story first published: Sunday, September 29, 2019, 10:43 [IST]