ಕೊಡಗಿನಲ್ಲಿ ನಾಲ್ಕು ದಿನಗಳಿಂದ ಸತತ ಮಳೆ; ತುಂಬಿ ಹರಿಯುತ್ತಿರುವ ಕಾವೇರಿ
ಮಡಿಕೇರಿ, ಸೆಪ್ಟೆಂಬರ್ 22: ಜಿಲ್ಲೆಯಲ್ಲಿ ಕಳೆದ ನಾಲ್ಕು ದಿನಗಳಿಂದ ಧಾರಾಕಾರ ಮಳೆಯಾಗುತ್ತಿದ್ದು, ಭಾಗಮಂಡಲ, ಶಾಂತಳ್ಳಿ, ಮಡಿಕೇರಿ, ವಿರಾಜಪೇಟೆ ಭಾಗದಲ್ಲಿ ಹೆಚ್ಚಿನ ಮಳೆ ಸುರಿದು ನದಿ, ಹಳ್ಳ, ಕೊಳ್ಳಗಳು ತುಂಬಿ ಹರಿಯುತ್ತಿವೆ.
ನಾಡಿನ ಜೀವನಾಡಿ ಕಾವೇರಿ ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿದೆ. ಹಾರಂಗಿ ಜಲಾಶಯಕ್ಕೂ ಹೆಚ್ಚಿನ ಒಳಹರಿವು ಹರಿದು ಬರುತ್ತಿದೆ. ಆಗಸ್ಟ್ ಮೊದಲ ವಾರದಲ್ಲಿ ಜಿಲ್ಲೆಯಲ್ಲಿ ಸುರಿದ ಭಾರಿ ಮಳೆಯಿಂದಾಗಿ ಹೆಚ್ಚು ಹಾನಿ ಸಂಭವಿಸಿತ್ತು. ಬಳಿಕ ಕೆಲ ದಿನಗಳಿಂದ ಬಿಡುವು ಪಡೆದಿದ್ದ ಮಳೆ ಇದೀಗ ಮತ್ತೆ ಬಿರುಸುಗೊಂಡಿದ್ದು, ಶೀತ ಗಾಳಿಯೂ ಬೀಸುತ್ತಿದೆ.
ಕೊಡಗು ಮಳೆ ರೆಡ್ ಅಲರ್ಟ್, ತುರ್ತು ಸೇವೆಗೆ ಹೆಲ್ಪ್ ಲೈನ್
ತುಂಬಿ ಹರಿಯುತ್ತಿರುವ ಕಾವೇರಿ
ನಾಪೋಕ್ಲು ವ್ಯಾಪ್ತಿಯಲ್ಲಿ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಸಮೀಪದ ಕಾವೇರಿ ನದಿ ತುಂಬಿ ಹರಿಯುತ್ತಿದೆ. ಚೆರಿಯಪರಂಬು, ಕಲ್ಲುಮೊಟ್ಟೆ ಸಂಪರ್ಕ ಕಲ್ಪಿಸುವ ಮುಖ್ಯರಸ್ತೆಯ ಮೇಲೆ ನೀರು ಹರಿಯುತ್ತಿದ್ದು, ಸಂಪರ್ಕ ಕಡಿತಗೊಂಡಿದೆ. ಚೆರಿಯ ಪರಂಬು ಪೈಸಾರಿ ನಿವಾಸಿಗಳಲ್ಲಿ ಮುಳುಗಡೆಯ ಆತಂಕ ಹೆಚ್ಚಾಗಿದೆ. ಗ್ರಾಮ ಪಂಚಾಯಿತಿ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದ್ದು, ಜನರಿಗೆ ಎಚ್ಚರದಿಂದಿರುವಂತೆ ಸೂಚನೆ ನೀಡಿದ್ದಾರೆ. ವಿರಾಜಪೇಟೆಯ ಬಲಮುರಿ ಹಾಗೂ ಕುಶಾಲನಗರದ ಕೊಪ್ಪ ಸೇತುವೆ ಬಳಿ ನದಿ ನೀರಿನ ಮಟ್ಟ ಏರಿಕೆಯಾಗುತ್ತಲೇ ಇದೆ.
ಭಾರೀ ಗಾಳಿ ಮಳೆಗೆ ಮರ, ಕಂಬಗಳು ನೆಲಸಮ
ಜಿಲ್ಲೆಯಲ್ಲಿ
ಸುರಿದ
ಧಾರಾಕಾರ
ಮಳೆಯಿಂದಾಗಿ
ಕಳೆದ
ಕೆಲವು
ದಿನಗಳಲ್ಲಿ
40
ರಿಂದ
50
ವಿದ್ಯುತ್
ಕಂಬಗಳು
ಧರೆಗುರುಳಿದ್ದು,
ಹೆಚ್ಚಿನ
ಹಾನಿ
ಸಂಭವಿಸಿಲ್ಲ.
ಅಲ್ಲದೆ
ಯಾವುದೇ
ಟ್ರಾನ್ಸ್
ಫಾರ್ಮರ್
ಗಳಿಗೂ
ಹಾನಿಯಾಗಿಲ್ಲವೆಂದು
ಸೆಸ್ಕ್
ಕಾರ್ಯನಿರ್ವಾಹಕ
ಅಧಿಕಾರಿ
ಸೋಮಶೇಖರ್
ಅವರು
ಮಾಹಿತಿ
ನೀಡಿದ್ದಾರೆ.
ವಿದ್ಯುತ್
ಕಂಬ
ಬಿದ್ದು
ಹಾನಿಗೀಡಾದ
ಸ್ಥಳಕ್ಕೆ
ತಕ್ಷಣವೇ
ಭೇಟಿ
ನೀಡಿ,
ಸೆಸ್ಕ್
ತಂಡ
ಅಲ್ಲಿನ
ಹಾನಿಯನ್ನು
ಸರಿಪಡಿಸುವ
ಕಾರ್ಯದಲ್ಲಿ
ತೊಡಗಿದೆ
ಎಂದು
ತಿಳಿಸಿದ್ದಾರೆ.
ಸೋಮವಾರಪೇಟೆ
ತಾಲ್ಲೂಕಿನ
ವಿವಿಧೆಡೆ
ಭಾರೀ
ಗಾಳಿ
ಮಳೆಗೆ
ಮರಗಳು
ಬಿದ್ದಿವೆ.
ಅಜ್ಜಳ್ಳಿಯಲ್ಲಿ
ಬೃಹತ್
ಮರವೊಂದು
ಬಿದ್ದ
ಪರಿಣಾಮ
ವಾಹನ
ಸಂಚಾರ
ಅಸ್ತವ್ಯಸ್ತಗೊಂಡಿತ್ತು.
ಗ್ರಾಮೀಣ
ಭಾಗದಲ್ಲಿ
ವಿದ್ಯುತ್
ಸಂಪರ್ಕ
ಕಡಿತಗೊಂಡಿದೆ.
ಹಾರಂಗಿಯಿಂದ 11,854 ಕ್ಯುಸೆಕ್ ನೀರು ಬಿಡುಗಡೆ
ನಿರಂತರ ಮಳೆಯಿಂದ ಕಾವೇರಿ ಸೇರಿದಂತೆ ಉಪ ನದಿಗಳು ತುಂಬಿ ಹರಿಯುತ್ತಿದ್ದು, ಹಾರಂಗಿ ಜಲಾಶಯದಲ್ಲಿ ನೀರಿನ ಸಂಗ್ರಹ ಹೆಚ್ಚಾಗಿರುವುದರಿಂದ 11,854 ಕ್ಯುಸೆಕ್ ನೀರನ್ನು ನದಿಗೆ ಹರಿಯ ಬಿಡಲಾಗುತ್ತಿದೆ. ಹಾರಂಗಿ ವ್ಯಾಪ್ತಿಯಲ್ಲಿ ಕಳೆದ 24 ಗಂಟೆಗಳಲ್ಲಿ 15.20 ಮಿ.ಮೀ ಮಳೆಯಾಗಿದೆ.
Recommended Video
ಜನರಿಗೆ ಜಿಲ್ಲಾಡಳಿತದ ಅಭಯ
ಕೊಡಗು ಜಿಲ್ಲೆಯಲ್ಲಿ ಜನವರಿಯಿಂದ ಇಲ್ಲಿಯವರೆಗಿನ 2266.82 ಮಿ.ಮೀ ಮಳೆ ದಾಖಲಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 2509.77 ಮಿ.ಮೀ ಮಳೆಯಾಗಿತ್ತು. ಮಡಿಕೇರಿ ತಾಲ್ಲೂಕಿನಲ್ಲಿ 3222.09 ಮಿ.ಮೀ, ವಿರಾಜಪೇಟೆ ತಾಲ್ಲೂಕಿನಲ್ಲಿ 2046.05 ಮಿ.ಮೀ, ಸೋಮವಾರಪೇಟೆ ತಾಲ್ಲೂಕಿನಲ್ಲಿ 1532.35 ಮಿ.ಮೀ ಮಳೆಯಾಗಿದೆ. ಜಿಲ್ಲೆಯ ಜನರು ಯಾವುದೇ ಆತಂಕಕ್ಕೆ ಒಳಗಾಗುವ ಅಗತ್ಯ ಇಲ್ಲ. ಜಿಲ್ಲಾಡಳಿತ ಪರಿಸ್ಥಿತಿ ನಿಭಾಯಿಸಲು ಸಜ್ಜಾಗಿದ್ದು, ತುರ್ತು ಸಂದರ್ಭಗಳಲ್ಲಿ ಜಿಲ್ಲಾಧಿಕಾರಿಗಳ 24x7 ಕಂಟ್ರೋಲ್ ರೂಂ ಸಂಖ್ಯೆ 0827-221077, ವಾಟ್ಸ್ ಆಪ್ ಸಂಖ್ಯೆ 8550001077 ಸಂಪರ್ಕಿಸಬಹುದು ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ತಿಳಿಸಿದ್ದಾರೆ.