ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲೋಕಸಭೆ ಚುನಾವಣೆಗಾಗಿ ಸಿಎಂ ಯೋಗಿ ಆದಿತ್ಯನಾಥ್ ಹೊಸ ತಂತ್ರ

|
Google Oneindia Kannada News

ನವದೆಹಲಿ, ಜನವರಿ 21: ಪ್ರಯಾಗ್ ರಾಜ್ ನ ಕುಂಭಮೇಳ ಸಂಭ್ರಮದ ಜೊತೆಗೆ ಲೋಕಸಭೆ ಚುನಾವಣೆಗಾಗಿ ಸಿಎಂ ಯೋಗಿ ಆದಿತ್ಯನಾಥ್ ಹೊಸ ತಂತ್ರಗಳನ್ನು ಹೆಣೆಯುತ್ತಲೇ ಇದ್ದಾರೆ.

60 ವರ್ಷಗಳಿಗೂ ಮೇಲ್ಪಟ್ಟ ಹಿಂದು ಸ್ವಾಮೀಜಿಗಳಿಗೆ ಪಿಂಚಣಿ ನೀಡುವ ಯೋಜನೆಯನ್ನು ಯೋಗಿ ಆದಿತ್ಯ ನಾಥ್ ಘೋಷಿಸಿದ್ದಾರೆ. ರಾಜ್ಯ ಸರ್ಕಾರದ ಹಿರಿಯ ನಾಗರಿಕರಿಗೆ ಸಿಗುವ ಪಿಂಚಣಿ ಯೋಜನೆಯನ್ನು ಹಿರಿಯ ಸಾಧು ಸಂತರಿಗೂ ವಿಸ್ತರಿಸಲಾಗಿದೆ. ಈ ಯೋಜನೆಯ ಲಾಭವನ್ನು ಸಾಧುಗಳಿಗೆ ತಲುಪಿಸಲು, ನೋಂದಣಿ ಕಾರ್ಯ ಆರಂಭಿಸಲಾಗಿದ್ದು, ಜನವರಿ 30ರೊಳಗೆ ನೋಂದಣಿ ಪ್ರಕ್ರಿಯೆ ಮುಕ್ತಾಯವಾಗಲಿದೆ.

ಹಿಂದುಳಿದ ವರ್ಗಕ್ಕೆ ಒಳ ಮೀಸಲಾತಿ: ಯೋಗಿ ಆದಿತ್ಯನಾಥ್ ಗೆ ತಲೆನೋವುಹಿಂದುಳಿದ ವರ್ಗಕ್ಕೆ ಒಳ ಮೀಸಲಾತಿ: ಯೋಗಿ ಆದಿತ್ಯನಾಥ್ ಗೆ ತಲೆನೋವು

ಇದಲ್ಲದೆ, ನಿರ್ಗತಿಕ ಮಹಿಳೆಯರು, ದಿವ್ಯಾಂಗರಿಗೆ ಸಿಗುತ್ತಿದ್ದ 400 ರು ಗಳ ಪಿಂಚಣಿಯನ್ನು 500 ರು ಗಳಿಗೆ ಏರಿಸಲಾಗಿದೆ. ಪ್ರಯಾಗ್ ರಾಜ್ ಕುಂಭಮೇಳ ಆಯೋಜನೆಯನ್ನು ಯಶಸ್ವಿಗೊಳಿಸಿರುವ ಯೋಗಿ ಆದಿತ್ಯನಾಥ್ ಅವರು, ಲಕ್ಷಾಂತರ ಸಾಧು ಸಂತರು ಭಾಗವಹಿಸಿದ ಈ ಮೇಳದ ಯಶಸ್ಸಿನ ಫಲವಾಗಿ ಪಿಂಚಣಿ ಯೋಜನೆ ಘೋಷಿಸಿದ್ದಾರೆ.

Yogi Adityanath announces pension for Sadhus; Opposition levels appeasement charge

ಸಾಧು- ಸಂತರಿಗೆ 20 ಸಾವಿರ ಪ್ರತಿ ತಿಂಗಳು ನೀಡಲು ಯೋಗಿ ಮುಂದಾಗಿದ್ದಾರೆಯೇ? ರಾಮ, ಸೀತೆ, ಲಕ್ಷ್ಮಣ ಪಾತ್ರ ಮಾಡುವ ಕಲಾವಿದರನ್ನು ಪಿಂಚಣಿ ಯೋಜನೆಗೆ ಸೇರಿಸಿ, ಅವರಿಗೂ ಹಣ ಅವಶ್ಯ ಎಂದು ಸಮಾಜವಾದಿ ಪಕ್ಷದ ನಾಯಕ, ಮಾಜಿ ಸಿಎಂ ಅಖಿಲೇಶ್ ಯಾದವ್ ಅವರು ಟೀಕೆ ಮಾಡಿದ್ದಾರೆ.

English summary
Ahead of the Lok Sabha Elections, Uttar Pradesh Chief Minister Yogi Adiyanath has announced pension scheme to Hindu seers who are above the age of 60. The scheme is also likely to benefit the seers in Uttar Pradesh. The pension will be provided to Hindu sadhus who are above the age of 60.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X